ಉದ್ಯೋಗ ಖಾತರಿ ಯೋಜನೆ: 12 ಬಾವಿ ನಿರ್ಮಾಣ
Team Udayavani, Jun 6, 2020, 7:54 AM IST
ಕೋಟ: ಉದ್ಯೋಗ ಖಾತರಿ ಕಾಮಗಾರಿ ನಿರತ ಗ್ರಾಮಸ್ಥರು.
ಕೋಟ: ಬಿಲ್ಲಾಡಿ ಗ್ರಾ.ಪಂ. ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ಸಲುವಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 8 ಪುರಾತನ ಕೆರೆಗಳ ದುರಸ್ತಿ ಹಾಗೂ 2 ಕೃಷಿ ತೋಡು ಅಭಿವೃದ್ಧಿ, 12 ಹೊಸ ಬಾವಿ ರಚಿಸುವ ಮೂಲಕ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಇಲ್ಲಿನ ಬೂದಾಡಿ ಮದಗ, ಅರಾಡಿ ಮದಗ, ಬಿಲ್ಲಾಡಿ ಚಿಟ್ಟಿಕಟ್ಟೆ ಮದಗ, ವಂಡಾರು ಕಟ್ಕೇರಿ, ರಾವುತನಕೆರೆ ಮದಗ, ಹಳ್ಳಿಬೈಲು ಮದಗ, ಮಾರ್ವಿ ಕೇಲ್ಕೇರಿ ಮದಗ, ಕೊಕೈನ್ ಬೈಲು ಮದಗವನ್ನು ಹೂಳೆತ್ತಿ ದುರಸ್ತಿಪಡಿಸಲಾಗಿದೆ ಹಾಗೂ ಬೂದಾಡಿ ಬೈಲು ಕೃಷಿತೋಡು, ಬಿಲ್ಲಾಡಿ ಕೆಂಜಿಕೊಡ್ಲು ತೋಡು ಗಳನ್ನು ದುರಸ್ತಿಪಡಿಸಲಾಗಿದೆ ಮತ್ತು ವೈಯಕ್ತಿಕವಾಗಿ 12 ಬಾವಿ ರಚನೆಗೆ ಅನುದಾನ ನೀಡಲಾಗಿದೆ.
ಪುರಾತನ ಕೆರೆಗಳು
ಇದೀಗ ದುರಸ್ತಿಗೊಳ್ಳುತ್ತಿರುವ ಕೆರೆಗಳು ಅತ್ಯಂತ ಹಳೆಯದಾಗಿದ್ದು, ಈ ಭಾಗದ ಕೃಷಿ ಭೂಮಿಗಳಿಗೆ ನೀರುಣಿಸಲು ಹಾಗೂ ಅಂತರ್ಜಲ ವೃದ್ಧಿಗೆ ಸಹಾಯಕವಾಗಿತ್ತು. ಆದರೆ ಹತ್ತಾರು ವರ್ಷದಿಂದ ಹೂಳುತುಂಬಿ ಮುಚ್ಚಿಹೋಗುವ ಸ್ಥಿತಿ ತಲುಪಿ ನಿರುಪಯುಕ್ತವಾಗಿತ್ತು. ಇದೀಗ ಯೋಜನೆ ಮೂಲಕ ದುರಸ್ತಿಗೊಳ್ಳುತ್ತಿರುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತಿದೆ. ಪಿಡಿಒ ಪ್ರಶಾಂತ್, ಕಾರ್ಯದರ್ಶಿ ಸೀತಾರಾಮ್ ಆಚಾರ್ಯ ಕಾಮಗಾರಿಯ ಅನುಷ್ಠಾನಕ್ಕೆ ಸಹಕರಿಸಿದ್ದಾರೆ.
ಪರ್ಯಾಯ ಉದ್ಯೋಗ
ಪುರಾತನ ಮದಗ, ಕೃಷಿತೋಡುಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಇದೀಗ 8 ಮದಗಗಳ ದುರಸ್ತಿ, 2 ಕೃಷಿತೋಡು ಅಭಿವೃದ್ಧಿ ಜತೆಗೆ 12 ಬಾವಿ ತೋಡಲಾಗಿದೆ. 300 ಮಂದಿ ಕಾರ್ಮಿಕರಿಗೆ 15 ದಿನ ಕೆಲಸ ದೊರೆತಿದೆೆ.
-ಪೃಥ್ವಿರಾಜ್ ಶೆಟ್ಟಿ, ಅಧ್ಯಕ್ಷ, ಬಿಲ್ಲಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ