ಕೊನೆಗೂ ಬೆಳಗಿತು ಫ್ಲೈಓವರ್‌ ದೀಪ


Team Udayavani, Sep 8, 2022, 2:38 PM IST

8

ಕುಂದಾಪುರ: ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ, ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ, ಹರ್ಷ ಉಕ್ಕಿಸುವಂತೆ ಶೋಭಾಯಮಾನ ಎಂದು ಕವಿ ಡಾ| ಸಿದ್ದಯ್ಯ ಪುರಾಣಿಕರ ಕನ್ನಡದ ದೀಪ ಕವನವನ್ನು ಕುಂದಾಪುರ ಜನತೆ ಅಕ್ಷರಶಃ ಗುನುಗುತ್ತಿದ್ದಾರೆ. ಏಕೆಂದರೆ ದಶಕಗಳಿಂದ ಬಾಕಿಯಾಗಿದ್ದ ಫ್ಲೈಓವರ್‌ ಕನಸು ನನಸಾಗಿ ವರ್ಷ ಒಂದೂಕಾಲು ಕಳೆದ ಮೇಲೆ ಅದರಲ್ಲಿನ ಬೀದಿದೀಪಗಳು ಪೂರ್ಣಪ್ರಮಾಣದಲ್ಲಿ ಬೆಳಗತೊಡಗಿವೆ. ದಶಕಗಳಿಂದ ಫ್ಲೈಓವರ್‌ಗಿದ್ದ ಶಾಪ ಕಳೆದಿದೆ. ನಗರಕ್ಕೊಂದು ಕಳೆ ಬಂದಿದೆ.

ಎಚ್ಚರಿಕೆ: ಕೇಂದ್ರ ಸಚಿವರು, ಶಾಸಕರು, ರಾಜ್ಯ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌, ಪುರಸಭೆ ಆಡಳಿತ, ಹೋರಾಟಗಾರರು ಹೀಗೆ ಎಷ್ಟು ಮಂದಿ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ನವಯುಗ ಕಂಪೆನಿಯವರಿಗೆ ಎಚ್ಚರಿಕೆ ನೀಡಿದರೆಂದೇ ಲೆಕ್ಕ ಇಲ್ಲ. ಯಾವುದೂ ಅವರಿಗೆ ಲೆಕ್ಕಕ್ಕೇ ಇಲ್ಲ. ಸೆಕ್ಷನ್‌ 133ಯಲ್ಲಿ ಕೇಸು ದಾಖಲಿಸುತ್ತೇವೆ ಎಂದಾಗಲೂ ಅವರು ಜಗ್ಗಲಿಲ್ಲ. ಬದಲಿಗೆ ಮೆಸ್ಕಾಂನವರ ಮೇಲೆ, ಹಣಕಾಸು ವ್ಯವಹಾರದ ಮೇಲೆ ದೂರುತ್ತಾ ಕಾಲ ಕಳೆದರು. ಆಗುತ್ತಿದೆ, ಹಂತದಲ್ಲಿದೆ ಎಂದು ಸುಳ್ಳುಗಳ ಮೇಲೆ ಸುಳ್ಳನ್ನು ಪೋಣಿಸುತ್ತಾ ಬಂದರು.

ದೂರು: ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮೆಸ್ಕಾಂನವರ ಮೇಲೂ ಹೆದ್ದಾರಿ ಬೀದಿ ದೀಪ ಬೆಳಗದ ಕುರಿತು ದೂರು ನೀಡಲಾಯಿತು. ಅರ್ಜಿಯೇ ಬರದೇ ಅವರಾದರೂ ಹೇಗೆ ದೀಪ ಉರಿಸಬೇಕು. ದೂರು ನೀಡಿದ ಮೇಲೆ ಅರ್ಜಿ ನೀಡಿದ ನವಯುಗ ಆಮೇಲೂ ಆಮೆಯುಗ ಎಂಬಂತೆ ಕೆಲಸ ಮಾಡಿತು. ಅರ್ಧರ್ಧ ದೀಪಗಳು ಬೆಳಗಿದವು.

ಶಾಕ್‌: ಶಾಸ್ತ್ರಿ ಸರ್ಕಲ್‌ನಿಂದ ಮೆಸ್ಕಾಂವರೆಗಿನ ದೀಪಗಳು ಬೆಳಗಿದವು. ಉಳಿದರ್ಧ ಬೆಳಗಲೇ ಇಲ್ಲ. ಹಾಗಿದ್ದರೂ ಇಷ್ಟಾದರೂ ಆಯಿತಲ್ಲ ಎಂದು ಜನ ಸಂಭ್ರಮಿಸಿದ್ದೇ ಬಂತು. ಜೋರಾಗಿ ಮಳೆ ಬಂದ ಮರುದಿನ ಫ್ಲೈಓವರ್‌ನ ತಡೆಗೋಡೆ, ಕಂಬ, ರಸ್ತೆ ಎಂದು ಎಲ್ಲಿ ಟೆಸ್ಟರ್‌ ಇಟ್ಟರೂ ಅದರ ದೀಪ ಮಿನುಗುತ್ತಿತ್ತು. ಶಾಕ್‌ ಹೊಡೆಯುತ್ತಿತ್ತು. ಇಡೀ ಫ್ಲೈಓವರ್‌ ನಲ್ಲಿ ವಿದ್ಯುತ್‌ ಹರಿಯುತ್ತಿತ್ತು! ಬೀದಿ ದೀಪಕ್ಕಾಗಿ ಹಾಕಿದ ವಯರಿಂಗ್‌ ಆ ಹೀನಾಯ ಸ್ಥಿತಿಗೆ ಕಾರಣವಾಗಿತ್ತು ಎಂದು ಹೇಳಲಾಯಿತು. ಮಾಹಿತಿ ತಿಳಿದ ಕೂಡಲೇ ಮೆಸ್ಕಾಂ ವಿದ್ಯುತ್‌ ಸಂಪರ್ಕ ರದ್ದುಪಡಿಸಿತು. ಫ್ಲೈಓವರ್‌ನಲ್ಲಿ ಬೀದಿ ದೀಪದ ಬದಲು ಶಾಕ್‌ ಹೊಡೆಯುವಂತೆ ಟೆಸ್ಟರ್‌ ಬೆಳಗುವ ವೀಡಿಯೋ ಎಲ್ಲೆಡೆ ವೈರಲ್‌ ಆಯಿತು. ಪೂರ್ಣ ಕಾಮಗಾರಿ: ಇದೀಗ ಎಲ್ಲವನ್ನು ಸರಿಪಡಿಸಲಾಗಿದೆ ಎಂದು ನಂಬಲಾಗಿದೆ. ಬೀದಿ ದೀಪಗಳಿಲ್ಲದೇ ಫ್ಲೈ ಓವರ್‌ನಲ್ಲಿ ವರ್ಷವೊಂದರಲ್ಲಿ 7 ಸಾವು ಸಂಭವಿಸಿವೆ. ಹತ್ತಾರು ಅಪಘಾತಗಳಾಗಿವೆ. ಪ್ರಸ್ತುತ ಮೆಸ್ಕಾಂನಿಂದ ಕೆಎಸ್‌ಆರ್‌ಟಿಸಿವರೆಗೆ ದೀಪಗಳು ಬೆಳಗುತ್ತಿವೆ. ಆದ್ದರಿಂದ ಅಪಘಾತಗಳು ಬೆಳಕಿನ ಕಾರಣದಿಂದ ನಿಯಂತ್ರಣವಾಗಬಹುದು ಎಂದು ಭಾವಿಸ ಲಾಗಿದೆ. ಅಳವಡಿಕೆಯಾದ ದೀಪಗಳು ಬಹುಕಾಲ ಉರಿಯಲಿದೆ ಎಂದು ಜನ ಆಶಿಸಿದ್ದಾರೆ.

“ಸುದಿನ’ ವರದಿ “ಉದಯವಾಣಿ’ “ಸುದಿನ’ ರಾಷ್ಟ್ರೀಯ ಹೆದ್ದಾರಿ ಬೀದಿ ದೀಪ ಬೆಳಗದ ಕುರಿತು ಅನೇಕ ವರದಿಗಳನ್ನು ಮಾಡಿದೆ. ಆಡಳಿತ ನಡೆಸುವವರನ್ನು ಮಾತನಾಡಿಸಿದೆ. ಪುರಸಭೆ ಸಭೆಗಳಲ್ಲೂ ಈ ಕುರಿತು ಚರ್ಚೆಗಳಾಗಿವೆ. ಸಹಾಯಕ ಕಮಿಷನರ್‌, ಜಿಲ್ಲಾಧಿಕಾರಿ ಕೂಡಾ ವರದಿಗೆ ಸ್ಪಂದನ ನೀಡಿ ನವಯುಗ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Gangolli “ವರ್ಕ್‌ ಫ್ರಂ ಹೋಮ್‌’ಹೆಸರಲ್ಲಿ ವಂಚನೆ

Gangolli “ವರ್ಕ್‌ ಫ್ರಂ ಹೋಮ್‌’ಹೆಸರಲ್ಲಿ ವಂಚನೆ

Kundapura: ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆ ಮೃತ್ಯು

Kundapura: ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆ ಮೃತ್ಯು

Siddapura: ಬೈಕ್‌ ಮುಖಾಮುಖಿ ಢಿಕ್ಕಿ; ಗಂಭೀರ ಗಾಯ

Siddapura: ಬೈಕ್‌ ಮುಖಾಮುಖಿ ಢಿಕ್ಕಿ; ಗಂಭೀರ ಗಾಯ

Road Mishap; ಮುಳ್ಳಿಕಟ್ಟೆ: ಸರಣಿ ಅಪಘಾತ; ನಾಲ್ವರಿಗೆ ಗಾಯ

Road Mishap; ಮುಳ್ಳಿಕಟ್ಟೆ: ಸರಣಿ ಅಪಘಾತ; ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.