Gangolli ಮೀನು ವ್ಯವಹಾರದಲ್ಲಿ ವಂಚನೆ: ಪರಾರಿ
Team Udayavani, Nov 13, 2023, 11:22 PM IST
ಗಂಗೊಳ್ಳಿ: ಇಲ್ಲಿನ ಸುನಿಲ್ ಅವರಿಗೆ ಆರೋಪಿ ಜನಾರ್ದನ ಮೀನು ಮಾರಾಟ ವ್ಯವಹಾರದಲ್ಲಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.
ಇವರಿಬ್ಬರೂ ಜತೆಯಾಗಿ ಮೀನುಗಳನ್ನು ಖರೀದಿಸಿ ಮಾರಾಟ ಮಾಡುವ ಎಸ್.ಎಂ.ಎ.ವೈ.ಸಿ. ಎಂಬ ಪಾಲುಗಾರಿಕಾ ಸಂಸ್ಥೆಯನ್ನು ಆರಂಭಿಸಿದ್ದು ಇಬ್ಬರೂ ತಲಾ 4,50,000 ರೂ. ಬಂಡವಾಳ ಹಾಕಿದ್ದರು. ಸುನಿಲ್ ಶ್ರೀ ರಾಮ ಕರಾವಳಿ ಮೀನುಗಾರರ ವಿವಿಧೋದ್ದೇಶ ಸಂಘ ಮರವಂತೆ ಮೂಲಕ ಮೀನುಗಳನ್ನು ಸಾಲದ ರೂಪದಲ್ಲಿ ಖರೀದಿಸಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದು ಮೀನುಗಳನ್ನು ಖರೀದಿಸಲು ತಮ್ಮ ಸ್ಥಿರಾಸ್ತಿಯನ್ನು ಅಡಮಾನ ಇರಿಸಿದ್ದರು.
ಪಾಲುಗಾರಿಕೆ ಸಂಸ್ಥೆಯಲ್ಲಿ 3 ತಿಂಗಳಲ್ಲಿ 2,64,90,925 ರೂ.ಗಳಷ್ಟು ಮೀನು ಖರೀದಿಸಿ ಮಾರಾಟ ಮಾಡಿದ್ದು ಸಾಲ ಪಡೆದ ಸಂಘಕ್ಕೆ ರೂಪಾಯಿ 1,51,50,000 ರೂ. ಹಣ ಪಾವತಿಸಿದ್ದರು. 1,13,40,925 ರೂ. ಹಣ ಪಾವತಿಸಲು ಬಾಕಿ ಇತ್ತು. ಪಾಲುಗಾರಿಕೆ ಸಂಸ್ಥೆಯ ವ್ಯವಹಾರನ್ನು ಜನಾರ್ದನ ನಿರ್ವಹಿಸುತ್ತಿದ್ದು ಮೀನು ಖರೀದಿ ಮಾಡಿದ ವ್ಯಕ್ತಿಗಳಿಂದ ರೂಪಾಯಿ 90,00,000 ರೂ. ಹಣವು ಗಂಗೊಳ್ಳಿಯ ಕೆನರಾ ಬ್ಯಾಂಕ್ ಶಾಖೆಯ ಜನಾರ್ದನನ ಖಾತೆಗೆ ಜಮೆಯಾಗಿದ್ದು ಆರೋಪಿಯು ತನ್ನ ಖಾತೆಗೆ ಬಂದ ಹಣವನ್ನು ಸಂಘಕ್ಕೆ ಪಾವತಿಸದೇ ಮೋಸ ಮಾಡಿ ನ.7ರಂದು ಮನೆ ಬಿಟ್ಟು ಪರಾರಿಯಾಗಿದ್ದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ