ಗುಜ್ಜಾಡಿ: ಗ್ರಾಮೀಣ ರಸ್ತೆ, ಕಸ ವಿಲೇವಾರಿ, ಚರಂಡಿ ಸಮಸ್ಯೆ

ಸುಸಜ್ಜಿತ ಸಮುದಾಯ ಭವನ ಬೇಕಿದೆ; ಬೇಸಗೆಯಲ್ಲಿ ಕುಡಿಯುವ ನೀರಿಗೆ ಬರ

Team Udayavani, Jun 30, 2022, 5:48 PM IST

25

ಗುಜ್ಜಾಡಿ: ಯಾವುದೇ ದೊಡ್ಡ ಮಟ್ಟದ ಕೈಗಾರಿಕೆಗಳಿಲ್ಲದ, ಹೆಚ್ಚಿನ ವಾಣಿಜ್ಯ ಮಳಿಗೆಗಳಿಲ್ಲದ, ಕಡಿಮೆ ಆದಾಯವಿರುವ ಗ್ರಾಮವಿದು ಗುಜ್ಜಾಡಿ. ಇಲ್ಲಿ ಹತ್ತಾರು ಸಮಸ್ಯೆಗಳಿವೆ. ಬೇಸಗೆಯಲ್ಲಿ ನೀರಿನ ಸಮಸ್ಯೆಯೇ ದೊಡ್ಡ ತಲೆನೋವು. ಮಳೆಗಾಲದಲ್ಲಿ ಡಾಮರೀಕರಣವಾಗದ ಕೆಸರುಮಯ ರಸ್ತೆಗಳು ಜನರನ್ನು ಹೈರಾಣಾಗಿಸಿವೆ.

ಗ್ರಾಮದ ಒಂದಷ್ಟು ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದು, ಇದರೊಂದಿಗೆ ಜಟ್ಟಿಗೇಶ್ವರ ದೇವಸ್ಥಾನ, ಚಿಕ್ಕಮ್ಮ ದೇವಸ್ಥಾನಕ್ಕೆ ಹೋಗುವ, ಕೊಡಂಚ ರಸ್ತೆ, ಬೆಣೆYರೆಯ ಗರಡಿ ರಸ್ತೆಯ ಅಭಿವೃದ್ಧಿಗೆ ಜನ ಅನೇಕ ಸಮಯದಿಂದ ಆಗ್ರಹಿಸುತ್ತಿದ್ದಾರೆ. ಮೇಲಂಡಿಗೆ ಹೋಗುವ ರಸ್ತೆ ದ್ವಿಚಕ್ರ ವಾಹನ ಸವಾರ ಸಂಚರಿಸದ ಸಮಸ್ಯೆಯಿದೆ.

ಬೇಸಗೆಯಲ್ಲಿ ನೀರಿನ ಸಮಸ್ಯೆ ಸುತ್ತಲೂ ನೀರಿದ್ದರೂ, 3 ಓವರ್‌ ಹೆಡ್‌ ಟ್ಯಾಂಕ್‌ ಇದ್ದರೂ, ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಬೇಸಗೆಯಲ್ಲಿ ಈ ಗ್ರಾಮದ ಎಲ್ಲ 5 ವಾರ್ಡ್‌ಗಳಲ್ಲಿಯೂ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಗ್ರಾಮದ ಶೇ. 90 ರಷ್ಟು ಮನೆಗಳಿಗೆ ನೀರಿನ ಸಮಸ್ಯೆ ಇದೆ. ಬಾವಿ, ಬೋರ್‌ ವೆಲ್‌ ತೋಡಿದರೂ, ಬಹುಬೇಗ ಬತ್ತಿ ಹೋಗುತ್ತದೆ. ಹೊಸ ಟ್ಯಾಂಕ್‌ಗೆ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಪಂಚಾಯತ್‌ ಹರಸಾಹಸ ಪಡುತ್ತಲೇ ಇದೆ.

ಕಸ ವಿಲೇ ಸಮರ್ಪಕವಿಲ್ಲ ಮತ್ತೂಂದು ಸಮಸ್ಯೆಯೆಂದರೆ ಸಮರ್ಪಕ ಕಸ ವಿಲೇ ವಾರಿ. ಗುಜ್ಜಾಡಿ ಪಂಚಾಯತ್‌ ಈಗಾಗಲೇ ಹೊಸಾಡು ಗ್ರಾ.ಪಂ.ನೊಂದಿಗೆ ಸೇರಿ ಕಸ ವಿಲೇವಾರಿ ಘಟಕ ನಿರ್ಮಿಸಿದೆ. ಆದರೆ ಗ್ರಾಮದ ಮನೆಗಳು, ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹ ಕಾರ್ಯವಿನ್ನೂ ಆರಂಭವಾಗಿಲ್ಲ. ಈ ಬಗ್ಗೆ ಕೇಳಿದರೆ ವಾಹನ ಬಂದಿದೆ. ಶೀಘ್ರ ಶುರುವಾಗುತ್ತದೆ ಅನ್ನುತ್ತಾರೆ. ಇನ್ನು ಈ ಗ್ರಾಮದವರು ಮಾತ್ರವಲ್ಲದೆ ಗಂಗೊಳ್ಳಿ, ಹೆದ್ದಾರಿ ಕಡೆಯಿಂದ ವಾಹನದಲ್ಲಿ ಬರುವವರು ಮುಳ್ಳಿಕಟ್ಟೆ- ಗುಜ್ಜಾಡಿ ಮಾರ್ಗದ ಬದಿಯಲ್ಲಿ ಕಸ ಎಸೆಯುತ್ತಾರೆ.

ಹೀಗಾಗಿ ಆ ಪ್ರದೇಶವಿಡೀ ಡಂಪಿಂಗ್‌ ಯಾರ್ಡ್‌ ಎನಿಸಿದೆ. ಇದಕ್ಕೆ ಗುಜ್ಜಾಡಿ ಹಾಗೂ ಹೊಸಾಡು ಗ್ರಾ.ಪಂ.ಗಳು ಕಡಿವಾಣ ಹಾಕಬೇಕಿದೆ. ಮೀನಿನ ವಾಹನಗಳು ಬಂದು ಇಲ್ಲಿ ಕೊಳಚೆ ನೀರನ್ನು ಚೆಲ್ಲಿ ಹೋಗುತ್ತಿದ್ದು, ಇತಿಹಾಸ ಪ್ರಸಿದ್ಧ ಗುಹೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರನ್ನು ಈ ದುರ್ನಾತವೇ ಸ್ವಾಗತಿಸುವಂತಿದೆ. ಇದಕ್ಕೂ ಪರಿಹಾರ ಹುಡುಕಬೇಕಿದೆ.

ಸಮುದಾಯ ಭವನವಿಲ್ಲ ಅತೀ ಹೆಚ್ಚು 150ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರಿಗೆ ಸೇರಿದ ಮನೆಗಳಿರುವ ಗ್ರಾಮ ಗುಜ್ಜಾಡಿ. ಆದರೆ ಒಂದೇ ಒಂದು ಸಮುದಾಯ ಭವನವಿಲ್ಲ. ಯುವಕ ಮಂಡಲದ ಜಾಗದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿ ಕೊಡಿ ಎಂದು ದಲಿತ ಮುಖಂಡರು ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ.

ಜಲಜೀವನ್‌ ಯೋಜನೆಯಿಂದ ಪರಿಹಾರ: ನಾವೆಷ್ಟೇ ಬಾವಿ ತೋಡಿದರೂ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಜಲಜೀವನ್‌ ಯೋಜನೆಯಿಂದ ಬಗೆಹರಿಯಬಹುದು. ಕಸ ಸಂಗ್ರಹ ಕಾರ್ಯ ಶೀಘ್ರ ಆರಂಭವಾಗಲಿದೆ. ಈಗಾಗಲೇ ಶಾಸಕರ ಮುತುವರ್ಜಿಯಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿಯಾಗಿದೆ. ಇನ್ನಷ್ಟು ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದೇವೆ. –ರಾಜು ಎನ್‌. ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷರು

ಕೃಷಿಗೆ ಕಸವೇ ಕಂಟಕ ತ್ರಾಸಿ- ಕೊಡಪಾಡಿ- ನಾಯಕವಾಡಿ ಮಾರ್ಗ ಅಗಲಗೊಂಡಾಗ ಕೊಡಪಾಡಿ ಭಾಗದಲ್ಲಿ ಚರಂಡಿಯನ್ನು ಮುಚ್ಚಲಾಗಿತ್ತು. ಆದರೆ ಈಗ ಮೇಲಿನಿಂದ ಮಳೆ ನೀರು, ಕಸ ಕಡ್ಡಿಗಳೆಲ್ಲ ಬಂದು ಕೊಡಪಾಡಿ ಪರಿಸರದ ಗದ್ದೆಗಳಿಗೆ ರಾಶಿ-ರಾಶಿಯಾಗಿ ಬೀಳುತ್ತಿದೆ. ಪ್ರತೀ ಸಲ ಗದ್ದೆಯಿಂದ ಕಸ ತೆಗೆಯುವುದೇ ಕೃಷಿಕರಿಗೆ ಸಮಸ್ಯೆ. ಇಲ್ಲಿನ ತೋಡಿನವರೆಗೆ ಚರಂಡಿ ನಿರ್ಮಿಸಿಕೊಟ್ಟರೆ ಅನುಕೂಲವಾಗಲಿದೆ ಎನ್ನುವುದು ರೈತರ ಬೇಡಿಕೆ.

ಅಣೆಕಟ್ಟು ನಿರ್ಮಾಣವಾದರೆ ಒಳಿತು: ಮೂರು ಓವರ್‌ ಹೆಡ್‌ ಟ್ಯಾಂಕ್‌ಗಳಿದ್ದರೂ ನೀರಿನ ಸಮಸ್ಯೆ ಪ್ರತೀ ವರ್ಷವೂ ಇದ್ದದ್ದೇ. ರುದ್ರಭೂಮಿಗೆ ಜಾಗವಿದ್ದರೂ, ಅಭಿವೃದ್ಧಿಯಾಗಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿ ಆಗಬೇಕಿದೆ. ಕೊಡಪಾಡಿಯಲ್ಲಿ ಚರಂಡಿ ನೀರು, ಕಸ ಗದ್ದೆಗಳಿಗೆ ಬಂದು ಬೀಳುತ್ತಿದ್ದು, ತೋಡಿನವರೆಗೆ ಚರಂಡಿ ವಿಸ್ತರಿಸಬೇಕಿದೆ.- ನಾರಾಯಣ ಕೆ. ಗುಜ್ಜಾಡಿ, ತಾ.ಪಂ. ಮಾಜಿ ಸದಸ್ಯರು

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.