ಹಟ್ಟಿಕುದ್ರು ಸೇತುವೆ: ಮಳೆಗಾಲಕ್ಕೂ ಮುನ್ನ ಸಂಚಾರ ಆರಂಭ?
Team Udayavani, May 16, 2022, 12:03 PM IST
ಬಸ್ರೂರು: ಬಹು ಬೇಡಿಕೆಯ ಬಸ್ರೂರು – ಹಟ್ಟಿಕುದ್ರು ಸೇತುವೆಯ ಕಾಮಗಾರಿ ಬಹುತೇಕ ಕೊನೆಯ ಹಂತದಲ್ಲಿದ್ದು, ಈ ಮಳೆಗಾಲಕ್ಕೆ ಮುನ್ನ ವಾಹನ ಸಂಚಾರ ಆರಂಭಗೊಳ್ಳಬಹುದೇ ಎನ್ನುವ ನಿರೀಕ್ಷೆ ಊರವರದ್ದಾಗಿದೆ.
ಕಳೆದ ಒಂದೂವರೆ ವರ್ಷದಿಂದ ಹಟ್ಟಿಕುದ್ರು ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದರೂ, ಕೊರೊನಾ, ಲಾಕ್ ಡೌನ್, ಕಾರ್ಮಿಕರು ಊರಿಗೆ ತೆರಳಿದ್ದು, ಮಳೆ ಸೇರಿದಂತೆ ಅನೇಕ ಕಾರಣಗಳಿಂದ ವಿಳಂಬಗೊಂಡಿತ್ತು. ಈಗ ಸೇತುವೆ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಇನ್ನೂ ಬಿಟ್ಟುಕೊಟ್ಟಿಲ್ಲ ಯಾಕೆ ಎನ್ನುವ ಪ್ರಶ್ನೆ ಸ್ಥಳೀಯರದ್ದಾಗಿದೆ.
ಈ ಬಗ್ಗೆ ಗುತ್ತಿಗೆದಾರರನ್ನು ಸಂಪರ್ಕಿಸಿ ದಾಗ ಸೇತುವೆಯ ಮೇಲ್ಭಾಗದಲ್ಲಿ ಉದ್ದಕ್ಕೂ ವೇರಿಂಗ್ ಕೋಟ್ ನಡೆಯುತ್ತಿದೆ. ಜತೆಗೆ ಹಟ್ಟಿಕುದ್ರು ಕಡೆಯಲ್ಲಿ ಸೈಡ್ ವಾಲ್ ಮಾಡಲು ಬಾಕಿ ಇದೆ ಎಂದಿದ್ದು, ಅಂತೂ ಇಂತೂ ಮೇ ತಿಂಗಳ ಕೊನೆಯಲ್ಲಿ ಸೇತುವೆಯು ಸಂಚಾರಕ್ಕೆ ಮುಕ್ತವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮಳೆಗೆ ಮುನ್ನವಾದರೆ ಅನುಕೂಲ
ಮಳೆಗಾಲ ಆರಂಭವಾಗುವುದರೊಳಗೆ ಈ ಸೇತುವೆಯಲಿ ವಾಹನ ಸಂಚಾರ ಆರಂಭಗೊಂಡರೆ, ಹಟ್ಟಿಕುದ್ರು ಜನರ ಸುಮಾರು 70 ವರ್ಷಗಳ ಕನಸು ನನಸಾಗಲಿದೆ. ಈ ಸೇತುವೆ 14.59 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಸುದಿನ ವರದಿ
ಹಟ್ಟಿಕುದ್ರು ಸೇತುವೆ ಬೇಡಿಕೆ, ಕಾಮಗಾರಿ ವಿಳಂಬ, ಕಾಮಗಾರಿ ಆರಂಭದ ಕುರಿತಂತೆ ಉದಯವಾಣಿ ಸುದಿನವು ನಿರಂತರವಾಗಿ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ