ಸಮುದ್ರದಲ್ಲಿ ತೇಲಿ ಬಂತು ನೂರಾರು ಪೆನ್ನುಗಳು!


Team Udayavani, Jul 26, 2022, 11:51 AM IST

5

ಕುಂದಾಪುರ: ಮಾನ್ಸೂನ್‌ ಅನಂತರ ಸಮುದ್ರದಲ್ಲಿ ತೇಲಿ ಬಂದ ಕಸದ ರಾಶಿಯಿಂದ ಬರೀ 10 ಮೀ. ಅಂತರದಲ್ಲಿ ಸಿಕ್ಕ ಪೆನ್‌ಗಳ ಸಂಖ್ಯೆ ನೂರಾರು. ಅದೆಷ್ಟೋ ಕಿಲೋ ಮೀಟರ್‌ ದೂರ ಸಾಗಿ ಬರುವಾಗ ಸಮುದ್ರ ದಡ ಸೇರದೆ ಇನ್ನೆಷ್ಟು ಪೆನ್‌ಗಳು ಮೂಕ ಜೀವಿಗಳ ಹೊಟ್ಟೆ ಸೇರಿದವೋ? ಕೋಡಿ ಕಡಲ ತೀರದಲ್ಲಿ ಸ್ವಚ್ಛತೆ ಅಭಿಯಾನ ಮಾಡುತ್ತಿದ್ದ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ತಂಡಕ್ಕೆ ಮೂಟೆಗಟ್ಟಲೆ ತ್ಯಾಜ್ಯದ ಜತೆ ಪೆನ್ನುಗಳೂ ಸಿಕ್ಕಿವೆ.

ಈ ಕುರಿತಾದ ಒಂದು ಪೋಸ್ಟ್‌ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ತಂಡದ ಸದಸ್ಯ, ಶಿಕ್ಷಕ ಸಂತೋಷ ಕೋಡಿ ಅವರು ಹಾಕಿಕೊಂಡ ಒಕ್ಕಣೆ ಹಾಗೂ ಸಿಕ್ಕಿದ ಪೆನ್ನುಗಳು ಅನೇಕ ಜಾಲತಾಣಿಗರ ಆಕರ್ಷಣೆಗೆ ಕಾರಣವಾಗಿದೆ.

ಅವರು ಬರೆದಂತೆ; ನನ್ನ ಪ್ರೀತಿಯ ಆರೂರು ಶಾಲೆಯಿಂದ ಹೊರಬಿದ್ದ ಮೇಲೆ ಮಕ್ಕಳ ಕಣ್ಣುಗಳ ಎದುರಿಸಲಾರದೇ ಆಚೆ ಕಡೆ ಹೋಗೇ ಇರಲಿಲ್ಲ. ಆದರೆ ಮನೆ ಖಾಲಿ ಮಾಡ ಹೊರಟ ಕೊನೆಯ ದಿನ ಸಿಕ್ಕ ನನ್ನ ಪ್ರೀತಿಯ ಮಕ್ಕಳು “ಸರ್‌ ಈಗಲೂ ಬಳಸಿಯಾದ ಪೆನ್‌ ಗಳು ಬಿಸಾಡದೇ ಎತ್ತಿಡ್ತಾ ಇದ್ದೀವಿ, ಅದು ಸುಮಾರಷ್ಟಾಗಿದೆ ತಂದುಕೊಡ್ಲಾ’ ಅಂತ ನನ್ನ ಉತ್ತರಕ್ಕೂ ಕಾಯದೆ ಸುಮಾರಷ್ಟು ಬಳಕೆಯಾದ ಪೆನ್‌ಗಳ ತಂದು ನನ್ನ ಕೈಗಿತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಅವರು ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದಾಗ 4 ಸಾವಿರದಷ್ಟು ಬಳಸಿ ಬಿಸಾಡಿದ ಪೆನ್ನುಗಳನ್ನು ಮಕ್ಕಳಾದ ಸಂಜನಾ, ಪೂಜಾ, ಹರ್ಷಿತ್‌, ರಾಕೇಶ್‌ ಅವರು ಸಂಗ್ರಹಿಸಿ ನೀಡಿದ್ದರು. ಬಳಸಿ ಬಿಸಾಡಿದ ಪೆನ್ನುಗಳನ್ನು ಹಕ್ಕಿಗಳು, ಮೀನು ತಿಂದು ಅದರಿಂದಾಗುವ ಅನಾಹುತವನ್ನು ಮಕ್ಕಳಿಗೆ ತಿಳಿಹೇಳಿದ್ದರು. ಇದರಿಂದ ಪ್ರೇರಣೆಗೊಂಡ ಮಕ್ಕಳು ಕ್ಯಾಂಪಸ್ಸಿನಲ್ಲಿ ಅಡ್ಡಾಡಿ ಪೆನ್ನು ಸಂಗ್ರಹಿಸಿದ್ದರು.

ಇದೀಗ ಕೋಡಿ ಕಡಲತಡಿಯ ತ್ಯಾಜ್ಯ ಸಂಗ್ರಹಿಸಿ ಸ್ವಚ್ಛತಾ ಅಭಿಯಾನ ನಡೆಸುವ ಸಂದರ್ಭ ಇದೇ ಮಾದರಿಯಲ್ಲಿ ರಾಶಿ ರಾಶಿ ಪೆನ್ನುಗಳು ದೊರೆತಿವೆ. ಈಗಾಗಲೇ ಕೇಂದ್ರ ಸರಕಾರ ಕಿವಿಗೆ ಹಾಕುವ ಬಡ್‌, ಹಲ್ಲಿಗೆ ಹಾಕುವ ಪ್ಲಾಸ್ಟಿಕ್‌ ಕಡ್ಡಿ, ಚಹಾದ ಜತೆ ಸಕ್ಕರೆ ಕರಗಿಸಲು ಉಪಯೋಗಿಸುವ ಪ್ಲಾಸ್ಟಿಕ್‌ ಕಡ್ಡಿಯಂತಹ ಪದಾರ್ಥಗಳನ್ನು ನಿಷೇಧಿಸಿದೆ. ಇಂತಹ ಕಡ್ಡಿಗಳೇ ಮಣ್ಣಿನಲ್ಲಿ ಕರಗದೇ ತುಂಡಾಗಿ ಹಕ್ಕಿಯ ಹೊಟ್ಟೆಗೆ, ನೀರಿನಲ್ಲಿ ಸೇರಿ ಮೀನಿನ ಹೊಟ್ಟೆಗೆ ಸೇರಿ ಅನಾಹುತ ವಾಗುತ್ತಿದೆ. ಈಗ ಅಂತಹ ಪೆನ್ನುಗಳು ಸಮುದ್ರ ತಡಿಯಲ್ಲೂ ದೊರೆಯತೊಡಗಿವೆ. ಇವು ಮೀನುಗಳಿಗೆ ಅಪಾಯ. ಆದ್ದರಿಂದ ಇವುಗಳನ್ನು ಎಸೆಯುವ ಮುನ್ನ ಯೋಚಿಸಿ ಎನ್ನುವುದು ಕ್ಲೀನ್‌ ಕುಂದಾಪುರ ತಂಡದ ಮನವಿ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.