Kateel Yakshagana Mela: ನಾಳೆ ಸೇವೆಯಾಟದೊಂದಿಗೆ ಆರಂಭ
Team Udayavani, Dec 6, 2023, 6:30 AM IST
ಕಟೀಲು: ಕಟೀಲು ದೇವಸ್ಥಾನದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ಬಾರಿಯ ತಿರುಗಾಟ ಡಿ. 7ರಂದು ಗುರುವಾರ ಸೇವೆಯಾಟ ದೊಂದಿದೆ ಆರಂಭ ವಾಗಲಿದೆ.
ಬೆಳಗ್ಗೆ ದೇವಸ್ಥಾನದಲ್ಲಿ ಚಂಡಿಕಾ ಹೋಮ, 108 ತೆಂಗಿನ ಕಾಯಿ ಗಣಪತಿ ಹವನ, ಸಂಜೆ 5ಕ್ಕೆ ದೇವಸ್ಥಾನದಲ್ಲಿ ಆರು ಮೇಳಗಳ ತಾಳಮದ್ದಳೆ ನಡೆಯಲಿದ್ದು, 6.45ಕ್ಕೆ ಕಲಾವಿದರಿಗೆ ಗೆಜ್ಜೆ ಹಸ್ತಾಂತರ, 8.30ಕ್ಕೆ ಚೌಕಿ ಪೂಜೆ 10.30ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಬೆಳಗ್ಗಿನ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಪ್ರತೀ ವರ್ಷ ಮೇಳದ ಪರಿಕರಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಈ ಬಾರಿ ಹೆಚ್ಚಿನ ವೇಷ ಭೂಷಣಗಳು ಹೊಸದಾಗಿ ತಯಾರಿಸಿದ್ದು, 30ಕ್ಕೂ ಹೆಚ್ಚು ಕಿರೀಟ, 12ಕ್ಕೂ ಹೆಚ್ಚು ಕೇಸರಿ ತಟ್ಟಿ, ಧರ್ಮರಾಯನ 6 ಕಿರೀಟ ಮತ್ತಿತರ ಸಾಮಗ್ರಿಗಳು, ದೇವಿ ಮಹಾತೆ¾ ಪ್ರಸಂಗದ ಎಲ್ಲ ವೇಷಭೂಷಣ ಹೊಸದಾಗಿ ತಯಾರಿಸಲಾಗಿದೆ. ಮೇಳದ ಎಲ್ಲ ಚಿನ್ನ ಹಾಗೂ ಬೆಳ್ಳಿಯ ದೇವರ ಹಾಗೂ ಕಿರೀಟಗಳನ್ನು ದುರಸ್ತಿ ಮಾಡಿದ್ದು, ಮೇಳಕ್ಕೆ ಹೆಚ್ಚಿನ ಮೆರುಗು ನೀಡಲಿದೆ.
167 ದಿನ ತಿರುಗಾಟ
ಈ ಬಾರಿ ಅಧಿಕಮಾಸದ ನಿಮಿತ್ತ ಮೇಳಗಳು ತಡವಾಗಿ ಹೊರಡುತ್ತಿದ್ದು, 167 ದಿನ ತಿರುಗಾಟ ನಡೆಸಲಿವೆ ಎಂದು ಅರ್ಚಕ ಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.
8 ಕಲಾವಿದರ ಸೇರ್ಪಡೆ
ಹಾಸ್ಯ ಕಲಾವಿದ ಭಾಗಮಂಡಲ ಮಹಬಲೇಶ್ವರ ಭಟ್, ನಿತೇಶ್ ಕುಪ್ಪೆಪದವು, ಬಂದಾರು ಬಾಲಕೃಷ್ಣ ಗೌಡ, ಪ್ರಸಾದ್ ಮೂಡುಬಿದಿರೆ, ಕಾರ್ತಿಕ್ ಮಂಚಿ, ಅಕ್ಷಯ್ ಕಾಂತಾವರ, ಅಕ್ಷಯ ಶೆಟ್ಟಿ ಬೆಳ್ಮಣ್ಣು, ಗಣೇಶ್ ಮಿಜಾರು ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ ಮೇಳಗಳ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case ಕೆನರಾ ಬ್ಯಾಂಕ್ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ
Kota ಚಿಟ್ ಫಂಡ್ ಹೆಸರಲ್ಲಿ ವಂಚನೆ; ದೂರು ದಾಖಲು
ಕೊಲ್ಲೂರು: ದಿನೇ ದಿನೆ ಹೆಚ್ಚುತ್ತಿದೆ ಟ್ರಾಫಿಕ್ ಜಾಮ್ ಕಿರಿಕಿರಿ…
ಕರಾವಳಿ ಜಿಲ್ಲೆಗಳಲ್ಲಿ ಬಂದಿದೆ ಹಾಲಿಗೆ ಬರ! ಹೈನುಗಾರಿಕೆಗೆ ಮನಮಾಡದ ಯುವಜನ
Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!
MUST WATCH
ಹೊಸ ಸೇರ್ಪಡೆ
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್ ಆಟ!
Ipl 2024: ಹೈದರಾಬಾದ್ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್
Federation Cup: ನೀರಜ್ ಚೋಪ್ರಾ ಸ್ವರ್ಣ ಸಂಭ್ರಮ…
Ipl 2024: ರಾಜಸ್ಥಾನ್ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಂಜಾಬ್