Kundapura ಹೆರಿಗೆ ವೇಳೆ ಮಗು ಸಾವು: ಪ್ರತಿಭಟನೆ


Team Udayavani, Nov 21, 2023, 12:28 AM IST

Kundapura ಹೆರಿಗೆ ವೇಳೆ ಮಗು ಸಾವು: ಪ್ರತಿಭಟನೆ

ಕುಂದಾಪುರ: ಗಂಗೊಳ್ಳಿ ನಿವಾಸಿ ಮಹಿಳೆಯೊಬ್ಬರಿಗೆ ಹೆರಿಗೆ ವೇಳೆ ಮಗು ಸಾವಿಗೀಡಾಗಿದ್ದು ವೈದ್ಯರ ನಿರ್ಲಕ್ಷé ಕಾರಣ ಎಂದು ಆರೋಪಿಸಿ ಸೋಮವಾರ ಸಂಜೆ ವೇಳೆ ಇಲ್ಲಿನ ಸರಕಾರಿ ಆಸ್ಪತ್ರೆ ಎದುರು ಸಾರ್ವಜನಿಕರು ಮೌನ ಪ್ರತಿಭಟನೆ ನಡೆಸಿದರು.

ನ. 17ರಂದು ರಾತ್ರಿ 10.30ರ ವೇಳೆಗೆ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಅವರ ಪತ್ನಿ ಜ್ಯೋತಿ ಖಾರ್ವಿ ಅವರು ಹೆರಿಗೆ ನೋವಿನಿಂದ ದಾಖಲಾಗಿದ್ದರು. ಮೂರು ದಿನ ನೋಡಿ ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿ, ಜನನ ವೇಳೆ ಗಂಡು ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ವೈದ್ಯರ ನಿರ್ಲಕ್ಷéದಿಂದ ಆದ ಸಾವು ಎಂದು ಮನೆಯವರು ಹಾಗೂ ಊರವರು ಆರೋಪಿಸಿದ್ದಾರೆ.

ಘಟನೆ ತಿಳಿದು ಊರವರು ಹಾಗೂ ಮನೆಯವರು ಆಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸಿದರು. ವೈದ್ಯರ ಅಮಾನತು ನಡೆಸಬೇಕು, ತನಿಖೆ ನಡೆಸಬೇಕು, ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರಬೇಕು. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು. ಬಡ ಮೀನುಗಾರರಿಗೆ ಆದ ಅನ್ಯಾಯ ಇತರರಿಗೆ ಆಗಬಾರದು ಎಂದು ಒತ್ತಾಯಿಸಿದರು.

ಮಾಧ್ಯಮ ಜತೆ ಮಾತನಾಡಿದ ಪ್ರತಿಭಟನಕಾರರು, ರಕ್ತಸ್ರಾವ ಇದೆ, ಹೊಟ್ಟೆ ನೋವು ಇದೆ ಎಂದರೂ ವೈದ್ಯರು ಗಣನೆಗೆ ತೆಗೆದುಕೊಳ್ಳಲಿಲ್ಲ. ವೈದ್ಯರು ಒರಟಾಗಿ ಮಾತನಾಡುತ್ತಾರೆ. ರಾತ್ರಿ ವೇಳೆ ಕೆಲವೊಮ್ಮೆ ವೈದ್ಯರೇ ಇರುವುದಿಲ್ಲ ಎಂದು ಆರೋಪಿಸಿದರು.

ಉಪವಿಭಾಗ ಆಸ್ಪತ್ರೆಯ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ ಪ್ರತಿಭಟನಕಾರರ ಮನ ಒಲಿಸಲು ನೋಡಿದರು. ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವೈದ್ಯರೂ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ. ಬೇಕೆಂದೇ ನಿರ್ಲಕ್ಷé ಮಾಡುವುದಿಲ್ಲ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಗಳು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರೂ ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಲಿಲ್ಲ.

ಜನ ಜಮಾವಣೆ ಆಗುತ್ತಿದ್ದಂತೆಯೇ ಸ್ಥಳದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ನಂದಕುಮಾರ್‌, ಎಸ್‌ಐ ಪ್ರಸಾದ್‌, ಸಂಚಾರ ಠಾಣೆ ಎಸ್‌ಐ ಸುಬ್ಬಣ್ಣ ನೇತೃತ್ವದಲ್ಲಿ ಬಂದೋ ಬಸ್ತ್ ಮಾಡಲಾಗಿತ್ತು. ಮಗುವನ್ನು ಮಣಿಪಾಲದ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಟಾಪ್ ನ್ಯೂಸ್

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

suSurathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

1-sadasad

T20; ಇಂದು ದ್ವಿತೀಯ ಟಿ20: ಗೆಲುವಿನ ಗೌರವಕ್ಕೆ ಕಾದಿದೆ ಕೌರ್‌ ಪಡೆ

1-adsadas

Women’s Premier League:ಇಂದು ಹರಾಜು; ರೇಸ್‌ನಲ್ಲಿದ್ದಾರೆ 165 ಆಟಗಾರ್ತಿಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಕೆವೈಸಿ ನೆಪದಲ್ಲಿ ಲಕ್ಷಾಂತರ ವಂಚನೆ

Manipal ಕೆವೈಸಿ ನೆಪದಲ್ಲಿ ಲಕ್ಷಾಂತರ ವಂಚನೆ

Brahmavar ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಕಳವು

Brahmavar ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಕಳವು

Online betting Case: ಒತ್ತಡದಿಂದ ಪೊಲೀಸರು ದೂರು ಪಡೆದಿದ್ದಾಗಿ ಕೋರ್ಟ್‌ಗೆ ಹೇಳಿಕೆv

Online betting Case: ಒತ್ತಡದಿಂದ ಪೊಲೀಸರು ದೂರು ಪಡೆದಿದ್ದಾಗಿ ಕೋರ್ಟ್‌ಗೆ ಹೇಳಿಕೆ

Kota ಸಾಲ ವಸೂಲಿಗೆ ಬಂದ ಬ್ಯಾಂಕಿನವರಿಗೆ ಕಲ್ಲೇಟು; ಪ್ರಕರಣ ದಾಖಲು

Kota ಸಾಲ ವಸೂಲಿಗೆ ಬಂದ ಬ್ಯಾಂಕಿನವರಿಗೆ ಕಲ್ಲೇಟು; ಪ್ರಕರಣ ದಾಖಲು

Udupi ವಾಹನ ಢಿಕ್ಕಿ ಹೊಡೆದು ಯುವಕ ಸಾವು

Udupi ವಾಹನ ಢಿಕ್ಕಿ ಹೊಡೆದು ಯುವಕ ಸಾವು

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

suSurathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.