ಭರದಿಂದ ನಡೆಯುತ್ತಿದೆ ಕಾಮಗಾರಿ
ಕುಂದಾಪುರ ಫ್ಲೈಓವರ್, ಸಂಪರ್ಕ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿ
Team Udayavani, May 30, 2020, 5:42 AM IST
ಕುಂದಾಪುರ: ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಫ್ಲೈಓವರ್ ಕಾಮಗಾರಿ ಮೂರನೇ ಹಂತದ ಲಾಕ್ಡೌನ್ ಬಳಿಕ ಮುಂದುವರಿಯುತ್ತಿದ್ದು, ಭರದಿಂದ ನಡೆಯುತ್ತಿದೆ.
ಕೆಎಸ್ಆರ್ಟಿಸಿ ಎದುರು ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣವಾಗಿದೆ. ಫ್ಲೈಓವರ್ನ ಒಂದು ಬದಿ ಸಂಪರ್ಕ ರಸ್ತೆ ಪೂರ್ಣ ವಾಗಿದ್ದು, ಡಾಮರು ಹಾಕಲಾಗಿದೆ. ಇನ್ನೊಂದು ಬದಿ ಸಂಪರ್ಕ ರಸ್ತೆ ಆಗಿಲ್ಲ. ಬಸ್ರೂರು ಮೂರುಕೈ ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದೆ.
ಕಾಮಗಾರಿ ಪ್ರಾರಂಭಗೊಳ್ಳಲು ಸಹಾಯಕ ಕಮಿಷನರ್ ಡಿಸಿ ಅವರ ಬಳಿ ಮನವಿ ಮಾಡಿದ್ದರು. ಅನಂತರದ ದಿನಗಳಲ್ಲಿ ಸರಕಾರವೇ ಸರಕಾರಿ ಕಾಮ ಗಾರಿ ನಡೆಸಲು ಅನುಮತಿ ನೀಡಿತ್ತು. ಫ್ಲೈಓವರ್ ಕಾಮಗಾರಿ ಎಪ್ರಿಲ್ ಮೊದಲ ವಾರದಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬೇಕಿತ್ತು. ಲಾಕ್ಡೌನ್ ಕಾರಣದಿಂದ ಬಾಕಿಯಾಗಿತ್ತು.
ಫ್ಲೈಓವರ್ ಪೂರ್ಣವಾದ ಬಳಿಕ ಎಲ್ಐಸಿ ಕಚೇರಿ, ಮೆಸ್ಕಾಂ ಕಚೇರಿ, ಎಎಸ್ಪಿ ಕಚೇರಿ, ಲೋಕೋಪಯೋಗಿ ಇಲಾಖೆ ಮೊದಲಾದ ಕಚೇರಿಗಳು ಇರು ವಲ್ಲಿಗೆ ಹೋಗಲು ಸರ್ವಿಸ್ ರಸ್ತೆಗೆ ಸಂಪರ್ಕ ದೊರೆಯುವುದು ಸಾಧ್ಯವೇ ಎಂದು ಸ್ಥಳೀಯರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಇಲ್ಲಿ ಹೆದ್ದಾರಿಯಲ್ಲಿ ತೆರವು ರಸ್ತೆ ಇದ್ದರೂ ಹೆದ್ದಾರಿ ಅಡ್ಡದಾಟಲು ಅವಕಾಶ ನೀಡುವ ಸಾಧ್ಯತೆ ಕಡಿಮೆ. ಸಾಧ್ಯ ಇಲ್ಲದಿದ್ದರೆ ಶಾಸ್ತ್ರಿ ಸರ್ಕಲ್ನಿಂದ ಬಸ್ರೂರು ಮೂರು ಕೈ ಮೂಲಕ ಸುತ್ತಿ ಬರಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ