ತೆಕ್ಕಟ್ಟೆಯ ಬಡ ಜನರಿಗೆ ಫುಡ್ ಕಿಟ್ ವಿತರಿಸಿದ ನೆನಪು ಟ್ರಸ್ಟ್
Team Udayavani, Jun 8, 2021, 1:30 PM IST
ತೆಕ್ಕಟ್ಟೆ : ಸರಿಸುಮಾರು ಏಳೆಂಟು ವರುಷಗಳಿಂದ 10,12 ಹೈಸ್ಕೂಲು ಗೆಳೆಯರಿಂದ ಪ್ರಾರಂಭಗೊಂಡ ವಾಟ್ಸಾಪ್ ಗ್ರೂಪೊಂದು ಚರ್ಚಿಸುವಾಗ ಸಮಾಜಮುಖಿ ಕೆಲಸಕ್ಕಾಗಿ ರೂಪುಗೊಂಡ ಸಂಸ್ಥೆ ನೆನಪು ಟ್ರಸ್ಟ್ (ರಿ). ಈ ಟ್ರಸ್ಟ್ ನಲ್ಲಿ ಇರುವ 45ಕ್ಕೂ ಹೆಚ್ಚು ಸಮಾನ ಮನಸ್ಕ ಗೆಳೆಯರು ಯಾವುದೇ ಫಲಾಪೇಕ್ಷೆ ಬಯಸದೇ ಗ್ರೂಪ್ ನ ತೆಕ್ಕಟ್ಟೆಯಲ್ಲಿ ಸಣ್ಣ ಕಚೇರಿಯನ್ನು ತೆರೆದು ಸ್ವಇಚ್ಛೆಯಿಂದ ಯುವ ಸಂಘಟಕ ಶ್ರೀನಿಧಿ ಉಪಾಧ್ಯ ಕೊರವಡಿ ಅವರ ಮುಂದಾಳತ್ವದಲ್ಲಿ ಸತತ 7,8 ವರುಷಗಳಿಂದಲೂ ತಮ್ಮಿಂದಾದ ನೆರವನ್ನು ನೀಡುತ್ತಾ ಬಂದಿದೆ.
ಪ್ರಸ್ತುತ ಕೋವಿಡ್ ನ ಈ ಸಂಕಷ್ಟದ ಸ್ಥಿತಿಯಲ್ಲಿ ನೆರವನ್ನು ಮುಂದುವರಿಸಿದ ಈ ಗೆಳಯರ ಬಳಗ ಇತ್ತೀಚೆಗಷ್ಟೇ ಜೀವನ್ ಮಿತ್ರ ಸಾಸ್ತಾನ ಟೋಲ್ ನಲ್ಲಿ ಚಾಲಕರಿಗೆ ನೀಡುತ್ತಿರುವ ಮಧ್ಯಾಹ್ನದ 2 ದಿನದ ಊಟದ ವೆಚ್ಚವನ್ನು ನೀಡಿ, ಕುಂಭಾಸಿ ಆಸುಪಾಸಿನ ಬಡ ವರ್ಗದ ಜನರಿಗೆ ಸುಮಾರು 25 ಸಾವಿರ ವೆಚ್ಚದ ಆಹಾರ ಸಾಮಗ್ರಿಗಳನ್ನು ನೀಡಿ, ಇವತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 100 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ಸಮರೋಪಾದಿಯಲ್ಲಿ ವಿತರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ
ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ