ಬಿಜೆಪಿ ಯುವ ಮೋರ್ಚಾ ಕುಂದಾಪುರ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮ
Team Udayavani, Jul 6, 2021, 2:12 PM IST
ತೆಕ್ಕಟ್ಟೆ: ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಜನ್ಮದಿನದ ಅಂಗವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಬೀಜಾಡಿ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಬೇಳೂರು ಕೋಣಬಗೆ ಚಿತ್ತೇರಿ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ನಂತರ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆಯವರು,ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ,ಸತೀಶ್ ಪೂಜಾರಿ ವಕ್ವಾಡಿ, ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ,ಬಿಜೆಪಿ ಬೀಜಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಳ್ತೂರು, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್ ,ಯುವಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಬೇಳೂರು ಪಂಚಾಯತ್ ಸದಸ್ಯರಾದ ಸೀತಾನದಿ ಕರುಣಾಕರ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್ ಕೆ ಎಸ್ ,ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಖಾರ್ವಿ, ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ, ಕಾರ್ಯದರ್ಶಿ ಸಂತೋಷ್ ಪೂಜಾರಿ,ಕಾರ್ಯಕಾರಿಣಿ ಸದಸ್ಯರಾದ ಕೋಟಿ ಪೂಜಾರಿ, ಆಶ್ರಯ್ ಶೆಟ್ಟಿ ಕೋಟೇಶ್ವರ,ಸುಶಾಂತ್ ಅಚ್ಲಾಡಿ,ಅನಿಲ್ ಶೆಟ್ಟಿ ಬೇಳೂರು, ತೆಕ್ಕಟ್ಟೆ ಶಕ್ತಿಕೇಂದ್ರ ಅಧ್ಯಕ್ಷ ಕಿರಣ್ ತೆಕ್ಕಟ್ಟೆ, ವಿನೋದ್ ದಿನೇಶ್ ಪೂಜಾರಿ ಕೊಮೆ, ತೆಕ್ಕಟ್ಟೆ,ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ, ಮನೋಜ್ ಕರ್ಕೆರಾ, ಸದಶಿವ ಶೆಟ್ಟಿ, ಕೃಷ್ಣ ನಾಯಕ್,ಸತೀಶ್ ಶೆಟ್ಟಿ , ಮಂಜು ಬೇಳೂರು,ರವಿ ಶೆಟ್ಟಿ,ಯೋಗೀಶ್ ಅಚ್ಲಾಡಿ, ಪ್ರವೀಣ್ ಶೆಟ್ಟಿ ಗುಳ್ಳಾಡಿ, ಅಜಿತ್ ಶೆಟ್ಟಿ ಗುಳ್ಳಾಡಿ ಹಾಗೂ ಬೇಳೂರಿ ಪ್ರಮುಖ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.