ಸರ್ವಿಸ್‌ ರಸ್ತೆ ದುರವಸ್ಥೆ: ದುರಸ್ತಿ ಗಡುವಿಗೆ ಇಂದೇ ಕೊನೆ

ನಾಳೆ ರಸ್ತೆ ಹೊಂಡದಲ್ಲಿ ಬಾಳೆಗಿಡ ; ಕೇಸು ಹಾಕುವ ಎಚ್ಚರಿಕೆ ನೀಡಿದ ಎಸಿ

Team Udayavani, Feb 8, 2022, 6:01 PM IST

ಸರ್ವಿಸ್‌ ರಸ್ತೆ ದುರವಸ್ಥೆ: ದುರಸ್ತಿ ಗಡುವಿಗೆ ಇಂದೇ ಕೊನೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಟಾಟೋಪಕ್ಕೆ ಸಣ್ಣ ಅಂಕುಶ ಹಾಕುವ ಅವಧಿ ಸಮೀಪಿಸಿದೆ. ಸರ್ವಿಸ್‌ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿ ದುರಸ್ತಿಗೊಳಿಸಬೇಕು ಎಂದು ನೀಡಿದ ಎಚ್ಚರಿಕೆಗೆ ಇಂದೇ ಕೊನೆ ದಿನ. ಇದರ ಜತೆಗೆ ಸಂಬಂಧಪಟ್ಟವರನ್ನು ಕರೆದ ಸಹಾಯಕ ಕಮಿಷನರ್‌ ಕೇಸು ಹಾಕುವ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ರಸ್ತೆ ದುರವಸ್ಥೆಗೆ ಹಿಡಿದ ಗ್ರಹಣಕ್ಕೆ ಮುಕ್ತಿ¤ ದೊರೆಯುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದ್ದು ಸಂಸ್ಥೆ ನೆತ್ತಿ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಹೊಂಡ ಗುಂಡಿ
ವಿನಾಯಕ ಬಳಿಯಿಂದ ಕೆಎಸ್‌ಆರ್‌ಟಿಸಿವರೆಗೆ ಎರಡೂ ಬದಿಯ ಸರ್ವಿಸ್‌ ರಸ್ತೆಗಳಲ್ಲಿ ಹೊಂಡಗಳಿವೆ. ಪ್ರಯಾಣ ಕಷ್ಟವಾಗಿದೆ. ಈ ಮೊದಲು ಇದೇ ಹೆದ್ದಾರಿಯೂ ಆಗಿತ್ತು. ಆದರೆ ಫ್ಲೈಓವರ್‌ ಆಗಲಿದೆ ಎಂಬ ಕಾರಣ ನೀಡಿ ಆಗಲೂ ಸರಿಯಾಗಿ ನಿರ್ವಹಿಸಲಿಲ್ಲ. ಈಗ ಹೇಗೂ ಹೆದ್ದಾರಿ ಪ್ರತ್ಯೇಕ ಇದೆಯಲ್ಲ ಎಂದು ಸರ್ವಿಸ್‌ ರಸ್ತೆಯ ಗೋಜಿಗೆ ಯಾರೂ ಹೋಗುತ್ತಿಲ್ಲ. ಅಸಲಿಗೆ ಹೆದ್ದಾರಿ ಕಾಮಗಾರಿ ಮುಗಿದ ಕೂಡಲೇ ಸರ್ವಿಸ್‌ ರಸ್ತೆಯನ್ನು ಸಮರ್ಪಕಗೊಳಿಸಿ ನೀಡಬೇಕಾದ್ದು ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಆದರೆ ಸಂಸ್ಥೆ ಇದರಿಂದ ನುಣುಚಿಕೊಂಡಿದೆ. ವಿಳಂಬ ಧೋರಣೆ ಅನುಸರಿಸುತ್ತಿದೆ.

ಕೇಸು
ಸಹಾಯಕ ಕಮಿಷನರ್‌ ಅವರು ನವಯುಗ ಸಂಸ್ಥೆ ಮೇಲೆ ಕೇಸು ಹಾಕುವುದಾಗಿ ಹೇಳಿದ್ದಾರೆ. ಹೆದ್ದಾರಿ ಪ್ರಾಧಿಕಾರದವರು ದಂಡ ವಿಧಿಸಿದ್ದು ಸಂಸ್ಥೆ ಪಾವತಿಸಿದೆ ಎನ್ನುತ್ತಾರೆ. ಪುರಸಭೆ ಡಿಸಿಗೆ ದೂರು ನೀಡಿದೆ. ಯಾವುದೂ ಈವರೆಗೆ ಪ್ರಯೋಜನ ನೀಡಿದಂತಿಲ್ಲ. ಹೇಳಿಕೆ ಪ್ರಕಟವಾದ ಬೆನ್ನಲ್ಲಿ ಒಂದು ಡಬ್ಬಿ ಡಾಮರು ಮುಗಿಸಿದ್ದೇ ಸಾಧನೆ. ಸಾರ್ವಜನಿಕರು ಪ್ರತಿಭಟನೆ ನಡೆಸುವುದಾಗಿ ನೀಡಿದ ಹೇಳಿಕೆಗೆ ಇಷ್ಟು ಮಾತ್ರ ಸ್ಪಂದನ ಎಂದಾದರೆ ಪ್ರತಿಭಟನೆ ನಡೆಸದೇ ಬಿಡುವುದಿಲ್ಲ ಎಂದು ಸಾರ್ವಜನಿಕರು ಮುಂದಾಗಿದ್ದಾರೆ. ವಿವಿಧ ವಾಹನಗಳ ಚಾಲಕರು, ರಿಕ್ಷಾ ಚಾಲಕರು ಕೈ ಜೋಡಿಸಲಿದ್ದಾರೆ. ಪ್ರತಿಭಟನೆ ಪಕ್ಷಾತೀತವಾಗಿ ನಡೆಯಲಿದೆ ಎನ್ನಲಾಗಿದ್ದು ಕಾಂಗ್ರೆಸ್‌ ಇದೊಂದು ಪ್ರಹಸನ ಎಂದು ಟೀಕೆ ಮಾಡಿದೆ.

ಬಾಕಿ ಕೆಲಸ
ಹೆದ್ದಾರಿಯಲ್ಲಿ ಮಿನುಗದ ಬೀದಿದೀಪ, ಹೆದ್ದಾರಿಯಿಂದ ನಗರಕ್ಕೆ ನೀಡದ ಪ್ರವೇಶ ಅವಕಾಶ, ಫ್ಲೈಓವರ್‌ ಅಡಿಭಾಗದಲ್ಲಿ ನಡೆಯದ ತ್ಯಾಜ್ಯ ರಾಶಿ ತೆರವು, ಸರ್ವಿಸ್‌ ರಸ್ತೆಯಲ್ಲಿ ಮುಚ್ಚದ ಹೊಂಡಗಳು, ಶಾಸಿŒ ಸರ್ಕಲ್‌ನಲ್ಲಿ ನಿರ್ಮಾಣವಾಗದ ಸರ್ಕಲ್‌, ಕುಂದಾಪುರದ ಪ್ರವೇಶ ಎಲ್ಲಿ ಎಂದೇ ತಿಳಿಯದೆ ಪ್ರವೇಶ ಫ‌ಲಕ ಹಾಕದೇ ಗೊಂದಲ, ಪ್ರವೇಶ ದ್ವಾರದ ನಿರ್ಮಾಣವೂ ನಡೆದಿಲ್ಲ, ಸರ್ಕಲ್‌ ರಚನೆ ಇಲ್ಲ, ಸರ್ಕಲ್‌ನಲ್ಲಿ ಹಾಕಿದ ಹೈ ಮಾಸ್ಟ್‌ ದೀಪ ಬೆಳಗುತ್ತಿಲ್ಲ. ಹೀಗೆ ಸಾಲು ಸಾಲು ಕೆಲಸಗಳನ್ನು ಸಂಸ್ಥೆ ಬಾಕಿ ಇರಿಸಿಕೊಂಡಿದೆ. ಹಾಗಂತ ಟೋಲ್‌ ವಸೂಲಿ ಸರಾಗವಾಗಿ ನಡೆಯುತ್ತಿದೆ. ಇದಕ್ಕೆ ಯಾವ ಅಡೆತಡೆಯೂ ಇಲ್ಲ. ವಿಳಂಬವೂ ಇಲ್ಲ. ಮಾತಾಡಿದರೆ ಟೋಲ್‌ ಸಿಬಂದಿಯ ದಬ್ಟಾಳಿಕೆ ಎದುರಿಸಬೇಕಾಗುತ್ತದೆ. ಮಾನವಂತರಿಗೆ ಕಷ್ಟದ ವಾತಾವರಣ.

ಬಾಳೆಗಿಡ ನೆಡುವುದು ಖಚಿತ
ನವಯುಗ ಸಂಸ್ಥೆ ಡಾಮರು ಹಾಕಿದಂತೆ ಕಣ್ಣೊರೆಸುವ ತಂತ್ರ ನಡೆಸಿದೆ. ಇಂತಹ ಕಪಟ ನಾಟಕಗಳಿಗೆ ನಾವು ಕಿಮ್ಮತ್ತು ಕೊಡುವುದಿಲ್ಲ. ಪಕ್ಷದ ಪರವಾಗಿ ನಡೆಸುತ್ತಿರುವ ಕಾರ್ಯಕ್ರಮ ಇದಲ್ಲ. ಜವಾಬ್ದಾರಿಯುತ ನಾಗರಿಕನಾಗಿ ಸಮಾಜದಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕು ನನಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿದ ಮೇಲೂ ಸಂಸ್ಥೆಯೊಂದು ನಿರ್ಲಕ್ಷ್ಯ ಮಾಡುತ್ತಿದೆ ಎಂದ ಮೇಲೆ ಪ್ರತಿಭಟನೆ ಸರಿಯಾದ ಮಾರ್ಗ. ರಸ್ತೆ ಹೊಂಡದಲ್ಲಿ ಫೆ.9ರಂದು 50 ಬಾಳೆಗಿಡ ನೆಡುವುದು ಖಚಿತ. ಟೀಕೆ ಮಾಡುವವರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬಹುದು.
-ಶಂಕರ ಅಂಕದಕಟ್ಟೆ,
ಅಧ್ಯಕ್ಷ, ಬಿಜೆಪಿ ಕುಂದಾಪುರ ವಿ.ಸಭಾ ಕ್ಷೇತ್ರ

ಕೇಸು ಮರು ತೆರೆಯಲಾಗುವುದು
ಗುತ್ತಿಗೆದಾರ ಸಂಸ್ಥೆಯವರು ಯಾವುದೇ ಮಾತನ್ನು ಪಾಲಿಸುತ್ತಿಲ್ಲ. ಅನೇಕ ಬಾರಿ ಎಚ್ಚರಿಕೆ ನೀಡಲಾಗಿದೆ. ಕಳೆದ ವಾರ ಸಭೆ ನಡೆಸಿ ಈ ಹಿಂದೆ ಹಾಕಲಾಗಿದ್ದ ಸೆ.133 ಕೇಸನ್ನು ಮರು ತೆರೆಯುವುದಾಗಿ ಹೇಳಿದ್ದೇನೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಸಂಸ್ಥೆ ವಿರುದ್ಧ ಕೇಸು ನಡೆಸುವುದು ಶತಸ್ಸಿದ್ಧ. -ಕೆ.ರಾಜು, ಸಹಾಯಕ ಕಮಿಷನರ್‌, ಕುಂದಾಪುರ ಉಪವಿಭಾಗ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.