ವಾರಾಹಿ ನೀರಿನಿಂದ ನಳನಳಿಸುತ್ತಿದೆ ಶಿರಿಯಾರ ಜೀವಸೆಲೆ ಮದಗ

ಜನವರಿ-ಫೆಬ್ರವರಿ ತನಕ ನೀರಿರುತ್ತಿದ್ದ ಮದಗ ನವೆಂಬರ್‌ ಮಧ್ಯದಲ್ಲೇ ಬರಿದಾಗುತಿತ್ತು.

Team Udayavani, Jan 31, 2023, 3:30 PM IST

ವಾರಾಹಿ ನೀರಿನಿಂದ ನಳನಳಿಸುತ್ತಿದೆ ಶಿರಿಯಾರ ಜೀವಸೆಲೆ ಮದಗ

ಕೋಟ: ಶಿರಿಯಾರ ಗ್ರಾಮದ ಜೀವ ಸೆಲೆ ಎಂದು ಕರೆಸಿಕೊಳ್ಳುವ ಎತ್ತಿನಟ್ಟಿ ಮದಗ ನವೆಂಬರ್‌ನಲ್ಲೇ ಬತ್ತಿ ಹೋದ ಕುರಿತು ಹಾಗೂ ಇಲ್ಲಿನ ತಡೆಗೋಡೆ ವಾಲ್‌ನಲ್ಲಿನ ದೋಷದ ಬಗ್ಗೆ, ಮದಗದಲ್ಲಿ ನೀರಿಲ್ಲದೆ ಸ್ಥಳೀಯ ಕೃಷಿಕರಿಗಾಗುತ್ತಿರುವ ಸಮಸ್ಯೆಯ ಕುರಿತು ಉದಯವಾಣಿ ಸುದಿನ ನವೆಂಬರ್‌ನಲ್ಲಿ ವಿಸ್ಕೃತ ವರದಿ ಪ್ರಕಟಿಸಿತ್ತು.

ಇದೀಗ ತಡೆಗೋಡೆ ವಾಲ್‌ ದುರಸ್ತಿಗೊಳಿಸಿದ್ದು, ವಾರಾಹಿ ನೀರಿನಿಂದ ಶಿರಿಯಾರ ಮದಗ ನಳನಳಿಸುತ್ತಿದೆ ಹಾಗೂ ಕೃಷಿಭೂಮಿಗೆ ನೀರು ಹರಿದು ಸ್ಥಳೀಯ ಕೃಷಿಕರ ಮೊಗದಲ್ಲಿ ನಗು ಉಕ್ಕಿದೆ. ಸಾೖಬ್ರಕಟ್ಟೆಯಿಂದ- ಬಿದ್ಕಲ್‌ಕಟ್ಟೆ ಸಾಗುವ ಮಾರ್ಗದಲ್ಲಿ ಜಿಲ್ಲಾ ಮುಖ್ಯ ರಸ್ತೆಗೆ ತಾಗಿ ಸುಮಾರು ನಾಲ್ಕೈದು ಎಕ್ರೆ ವಿಸ್ತೀರ್ಣದಲ್ಲಿ ಈ ಮದಗ ಇದೆ. ಇಲ್ಲಿ ನೀರು ತುಂಬಿರುವ ತನಕ ಸುತ್ತಲಿನ ಬಾವಿಗಳಲ್ಲಿ ಹಾಗೂ ಹಳ್ಳಗಳಲ್ಲಿ ಉತ್ತಮ ಅಂತರ್ಜಲವಿರುತ್ತದೆ.

ಇದನ್ನೇ ನಂಬಿಕೊಂಡು ನೂರಾರು ಎಕ್ರೆ ಕೃಷಿ, ತೋಟಗಾರಿಕೆ ಚಟುವಟಿಕೆ ನಡೆಯುತ್ತದೆ. ಗ್ರಾ.ಪಂ. ಬಾವಿಯ ನೀರಿನ ಮಟ್ಟ ಕಾಪಾಡಿಕೊಳ್ಳಲು ಮದಗ ಸಹಕಾರಿಯಾಗಿರುತ್ತದೆ. 2019-20ರಲ್ಲಿ ನೆರೆ ಪರಿಹಾರ ನಿಧಿಯಿಂದ ಸುಮಾರು 45 ಲಕ್ಷ ರೂ. ಅನುದಾನದಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಿ, ಹೂಳೆತ್ತಿ, ಹೊಸ ಗೇಟ್‌ ಅಳವಡಿಸಲಾಗಿತ್ತು.ಆದರೆ ಕಾಮಗಾರಿಯ ಅನಂತರ ಸಮಸ್ಯೆ ಕಾಣಿಸಿಕೊಂಡಿದ್ದು ವ್ಯಾಪಕ ಪ್ರಮಾಣದಲ್ಲಿ ನೀರು ಪೋಲಾಗುತಿತ್ತು.

ಪ್ರತೀ ವರ್ಷ ಜನವರಿ-ಫೆಬ್ರವರಿ ತನಕ ನೀರಿರುತ್ತಿದ್ದ ಮದಗ ನವೆಂಬರ್‌ ಮಧ್ಯದಲ್ಲೇ ಬರಿದಾಗುತಿತ್ತು. ವಾರಾಹಿ ಕಾಲುವೆಯ ನೀರು ಹರಿಸಿದರೂ ಶೀಘ್ರದಲ್ಲೇ ಬರಿದಾಗುತ್ತಿತ್ತು. ಈ ಬಗ್ಗೆ ಉದಯವಾಣಿ ವರದಿ ಮೂಲಕ ಗಮನಸೆಳೆದಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ajjarkad hospital

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ

accuident

ರಿವರ್ಸ್‌ ತೆಗೆಯುವಾಗ ಕಾರು ಪಲ್ಟಿ

police siren

ಅಬಕಾರಿ ಇಲಾಖೆಯಿಂದ ದಾಳಿ – ಜಪ್ತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್ಕಳ: ಗ್ರಾಮದ ಪುರಾತನ ಕೆರೆಗಳು ಊರಿನ ಆಸ್ತಿ- ಸುನಿಲ್‌ಕುಮಾರ್‌

ಕಾರ್ಕಳ: ಗ್ರಾಮದ ಪುರಾತನ ಕೆರೆಗಳು ಊರಿನ ಆಸ್ತಿ- ಸುನಿಲ್‌ಕುಮಾರ್‌

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ: ನಾಲ್ವರ ಸೆರೆ

accident 2

ಬೈಕ್‌ಗೆ ರಿಕ್ಷಾ ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

death

ಹಕ್ಲಾಡಿ ರೈಲ್ವೇ ಹಳಿಯಲ್ಲಿ ಶವ ಪತ್ತೆ

ಶ್ರೀಕ್ಷೇತ್ರ ಕಮಲಶಿಲೆ: ಬ್ರಹ್ಮಕುಂಭಾಭಿಷೇಕ ಸಂಪನ್ನ

ಶ್ರೀಕ್ಷೇತ್ರ ಕಮಲಶಿಲೆ: ಬ್ರಹ್ಮಕುಂಭಾಭಿಷೇಕ ಸಂಪನ್ನ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ajjarkad hospital

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.