ಮಾರಣಕಟ್ಟೆ ಜಾತ್ರೆಗೆ ಹೆಮ್ಮಾಡಿ ಸೇವಂತಿಗೆ ದುಬಾರಿ

ಸೆಕೆ, ನುಸಿ ಬಾಧೆ-ಅರಳದ ಮೊಗ್ಗು; ಬೇರೆ ಕಡೆಯಿಂದ ಹೂ ತರಿಸಿದ ವ್ಯಾಪಾರಸ್ಥರು

Team Udayavani, Jan 15, 2020, 7:41 AM IST

mk-17

ಹೆಮ್ಮಾಡಿ: ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಈಗ ಜಾತ್ರಾ ಮಹೋತ್ಸವದ ಸಂಭ್ರಮ. ಆದರೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಅಪರೂಪದ ಹೆಮ್ಮಾಡಿ ಸೇವಂತಿಗೆ ಹೂವು ಇಳುವರಿ ಕಡಿಮೆಯಾಗಿದ್ದು, ಈ ಬಾರಿ ದುಬಾರಿಯಾಗಿದೆ. ಒಂದು ಸಾವಿರ ಹೂವಿಗೆ 300 ರೂ.ವರೆಗೂ ಮಾರಾಟವಾಗುತ್ತಿದೆ.

ಈ ಬಾರಿ ಪ್ರತಿಕೂಲ ಹವಾಮಾನ ಹಾಗೂ ನುಸಿಬಾಧೆ ಯಿಂದಾಗಿ ಮಾರಣಕಟ್ಟೆ ಜಾತ್ರೆ ವೇಳೆಗೆ ಅರಳಬೇಕಾದ ಹೂವು ಇನ್ನೂ ವಿಳಂಬವಾಗುವುದರಿಂದ ಬೇಡಿಕೆಯಷ್ಟು ಇಳುವರಿಯೇ ಇಲ್ಲದಂತಾಗಿದೆ. ಈ ಕಾರಣದಿಂದಾಗಿ ಹೂವಿನ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

22 ಎಕರೆ ಪ್ರದೇಶ
ಹೆಮ್ಮಾಡಿ ಗ್ರಾಮದ ಬಹುಭಾಗ, ಕಟ್‌ಬೆಲೂ¤ರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ ಹೂವು ಬೆಳೆಯುತ್ತಾರೆ. ಹೆಮ್ಮಾಡಿಯಲ್ಲಿ 42 ಮಂದಿ, ಕಟ್‌ಬೆಲೂ¤ರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಈ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಯುತ್ತಾರೆ.

ಹೂವು ಅರಳಿದವರಿಗೆ ಲಾಟರಿ..!
ಸೆಕೆ ಜಾಸ್ತಿಯಾಗಿದ್ದರಿಂದ, ಚಳಿಯ ಪ್ರಮಾಣ ಕಡಿಮೆ ಇದ್ದುದರಿಂದ ಆಗಸ್ಟ್‌ನಲ್ಲೇ ಗಿಡ ಬೆಳೆಸಿದ್ದರೂ, ಮಾರಣಕಟ್ಟೆ ಜಾತ್ರೆ ವೇಳೆಗೆ ಮಾತ್ರ ಇನ್ನೂ ಹೂವೇ ಬಿಟ್ಟಿಲ್ಲ. ಕೆಲವೊಂದು ಗಿಡಗಳಲ್ಲಿ ಮೊಗ್ಗುಗಳಿದ್ದರೆ, ಮತ್ತೆ ಕೆಲವು ಬಾಡಿ ಹೋಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾರಣಕಟ್ಟೆ ಜಾತ್ರೆಗೆ ಲಭ್ಯವಾಗುತ್ತಿದ್ದ ಅರ್ಧಕ್ಕರ್ಧ ಹೂವಿನ ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರರು. ಇದರಿಂದ ಈ ಸಮಯದಲ್ಲಿ ಸೇವಂತಿ ಅರಳಿದವರಿಗೆ ಲಾಟರಿ ಹೊಡೆ ದಂತಾಗಿದೆ. ಕಳೆದ ಬಾರಿ ಸಿಗುತ್ತಿದ್ದ ದುಪ್ಪಟ್ಟು ದರ ಈ ಬಾರಿ ಸಿಗುತ್ತಿದೆ. ಬೆಳೆಗಾರರ ಪೈಕಿ ಕೆಲವರದಂತೂ 20 ಸೆಂಟ್ಸ್‌, 40 ಸೆಂಟ್ಸ್‌ ಜಾಗದಲ್ಲಿ ಬೆಳೆಸಿರುವ ಸೇವಂತಿಗೆ ಸಂಪೂರ್ಣ ನಷ್ಟವಾಗಿದೆ. ನಾನು 20 ಸೆಂಟ್ಸ್‌ ಜಾಗದಲ್ಲಿ ಬೆಳೆಸಿರುವ ಹೂವು ಸೆಕೆ, ನುಸಿ ಬಾಧೆಗೆ ಬಲಿಯಾಗಿದೆ. ಪ್ರತಿ ವರ್ಷ 2 ಲಕ್ಷ ಹೂವುಗಳು ಸಿಗುತ್ತಿದ್ದರೆ ಈ ಬಾರಿ ಕೇವಲ 7 ಸಾವಿರ ಹೂವು ಅಷ್ಟೇ ಸಿಕ್ಕಿದೆ ಎನ್ನುವುದು ಸೇವಂತಿಗೆ ಬೆಳೆಗಾರರಾದ ರಾಘು ಅವರ ಬೇಸರದ ನುಡಿ.

ಬ್ರಹ್ಮಲಿಂಗೇಶ್ವರ ಪ್ರಿಯ
ಮಾರಣಕಟ್ಟೆ ಜಾತ್ರೆಯಲ್ಲಿ ಹೆಮ್ಮಾಡಿ ಸೇವಂತಿಗೆಗೆ ಭಾರೀ ಬೇಡಿಕೆಯಿದೆ. ಬ್ರಹ್ಮಲಿಂಗೇಶ್ವರನಿಗೆ ಹೆಮ್ಮಾಡಿ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಈ ಹೂವನ್ನು ಅರ್ಪಿಸಿ, ಭಕ್ತಿಯಿಂದ ಕೇಳಿದರೆ, ಇಷ್ಟಾರ್ಥವೆಲ್ಲ ಈಡೇರುತ್ತದೆ ಎನ್ನುವ ಪ್ರತೀತಿಯಿದೆ. ಒಬ್ಬೊಬ್ಬ ವ್ಯಾಪಾರಿಗಳಿಗೂ ಕನಿಷ್ಠ 4ರಿಂದ 5 ಲಕ್ಷದವರೆಗೆ ಹೂವು ಅಗತ್ಯವಿದ್ದು, ಆದರೆ ಈಗ ಇಲ್ಲಿ ಹೆಚ್ಚಿನವರಿಗೆ ಸಿಕ್ಕಿರುವುದು ಕೇವಲ 20 ಸಾವಿರ ಹೂವು ಮಾತ್ರ.

ಸಾವಿರ ಹೂವಿಗೆ 250 ರೂ…!
ಈ ಬಾರಿ ಹೂವಿನ ಬೆಳೆ ಹೇಗಿದೆಯೆಂದರೆ ಒಂದು ಸಾವಿರ ಹೂವಿಗೆ 200 ರಿಂದ 250 ರೂ.ವರೆಗೆ ಖರೀದಿಯಾಗುತ್ತಿದೆ. ಒಳ್ಳೆಯ ಹಾಗೂ ದೊಡ್ಡ – ದೊಡ್ಡ ಹೂವುಗಳಿದ್ದರೆ ಅದಕ್ಕೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಗಳಲ್ಲಿ 1 ಸಾವಿರ ಹೂವಿಗೆ 300 ರೂ. ವರೆಗೆ ಮಾರಾಟವಾಗುತ್ತಿದೆ. ಇದೇ ಸಮಯದಲ್ಲಿ ಕಳೆದ ಬಾರಿ ಒಂದು ಸಾವಿರ ಹೂವಿಗೆ ಬೆಳೆಗಾರರಿಂದ 100 ರೂ. ಗೆ ಖರೀದಿಯಾಗಿತ್ತು. ಹೆಚ್ಚೆಂದರೆ 150 ರೂ. ವರೆಗೆ ಅಷ್ಟೇ ಖರೀದಿಸಲಾಗಿತ್ತು. ಹೆಚ್ಚಿನ ಸಮಯದವರೆಗೆ ಇದೇ ದರ ಸ್ಥಿರವಾಗಿತ್ತು. ಮಾರ್ಚ್‌ ಕೊನೆಯಲ್ಲಿ ಇದು 50 ರೂ. ಗೆ ಇಳಿದಿತ್ತು.

ನಷ್ಟ ಪರಿಹಾರ ಕೊಡಲಿ
ಮಾರಣಕಟ್ಟೆ ಜಾತ್ರೆ ವೇಳೆಗೆ ಉತ್ತಮ ಇಳುವರಿ ಸಿಕ್ಕಿದರೆ ಮಾತ್ರ ಲಾಭ. ಆದರೆ ಈ ಬಾರಿ ಅರ್ಧಕ್ಕರ್ಧ ಬೆಳೆ ಕಡಿಮೆಯಾಗಿದೆ. ಕಳೆದ ಬಾರಿ ಎಕರೆಗೆ 6 ಸಾವಿರ ರೂ. ಅಂತೆ ಪರಿಹಾರವನ್ನು ತೋಟಗಾರಿಕಾ ಇಲಾಖೆಯವರು ಕೊಟ್ಟಿದ್ದರು. ಈ ಬಾರಿಯೂ ನಷ್ಟ ಪರಿಹಾರ ಸಿಕ್ಕರೆ ಪ್ರಯೋಜನವಾಗಲಿದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಎಕರೆಯಲ್ಲಿ ಬೆಳೆಯದೇ ಸೆಂಟ್ಸ್‌ ಲೆಕ್ಕಾಚಾರದಲ್ಲಿ ಬೆಳೆಯುತ್ತಾರೆ. ಅದಲ್ಲದೆ ಕೆಲವರು ಲೀಸ್‌ಗೆ ಪಡೆದು ಬೆಳೆಯುತ್ತಾರೆ. ಅವರಿಗೂ ಪರಿಹಾರ ಸಿಗಬೇಕು.
– ಮಹಾಬಲ ದೇವಾಡಿಗ, ಅಧ್ಯಕ್ಷರು ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ

ಬೆಳೆ ಕಡಿಮೆ
ಸೆಕೆಯಿಂದಾಗಿ ಬೆಳೆ ಕಡಿಮೆಯಾಗಿದೆ. ಇದರಿಂದ ಈ ಬಾರಿ ಎಲ್ಲರಿಗೂ ನಷ್ಟ ಉಂಟಾಗಿದೆ. ಮಾರಣಕಟ್ಟೆ ಜಾತ್ರೆಗೆ ಈ ಬಾರಿ ಅಗತ್ಯದಷ್ಟು ಸೇವಂತಿಗೆ ಹೂವು ಇಲ್ಲದಿರುವುದರಿಂದ ಹೂವಿನ ವ್ಯಾಪಾರಸ್ಥರು ಚಿತ್ರದುರ್ಗ ಮತ್ತಿತರ ಜಿಲ್ಲೆಗಳಿಂದ ಕಸ್ತೂರಿ ಸೇವಂತಿಗೆಯನ್ನೇ ಹೋಲುವ ಶ್ಯಾಮಿನಿ ಹೂವು ತರಿಸಿದ್ದಾರೆ. ಅದು ದುಬಾರಿಯಾಗಿದ್ದು, 1 ಕೆಜಿಗೆ 180 ರೂ., 1 ಕ್ವಿಂಟಲ್‌ ಹೂವಿಗೆ 18 ಸಾವಿರ ರೂ. ಕೊಟ್ಟು ತರಲಾಗಿದೆ.
– ದಿವಾಕರ್‌ ಕೋಟ್ಯಾನ್‌, ಸೇವಂತಿಗೆ ಬೆಳೆಗಾರರು, ವ್ಯಾಪಾರಿಗಳು

ಪರಿಹಾರಕ್ಕೆ ಪ್ರಯತ್ನ
ಕಳೆದ ಬಾರಿ ಸೇವಂತಿಗೆ ಬೆಳೆಗಾರರಿಗೆ ಇಲಾಖೆಯಿಂದ ನಷ್ಟ ಪರಿಹಾರವನ್ನು ಕೊಡಲು ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡಲಾಗಿತ್ತು. ಈ ಬಾರಿ ಬೆಳೆಗಾರರಿಗೆ ನಿರೀಕ್ಷಿತ ಪ್ರಮಾಣದ ಹೂವು ಸಿಗದೇ ನಷ್ಟದಲ್ಲಿದ್ದು, ನಷ್ಟ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು.
– ಶೋಭಾ ಜಿ. ಪುತ್ರನ್‌, ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ ಉಡುಪಿ ಜಿ.ಪಂ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.