ನೆಟ್‌ವರ್ಕ್‌ಗಾಗಿ ನಿತ್ಯ 15-18 ಕಿ.ಮೀ. ಟೆಕ್ಕಿಗರ ಸಂಚಾರ


Team Udayavani, Aug 15, 2020, 6:10 AM IST

ನೆಟ್‌ವರ್ಕ್‌ಗಾಗಿ ನಿತ್ಯ 15-18 ಕಿ.ಮೀ. ಟೆಕ್ಕಿಗರ ಸಂಚಾರ

ಹಳ್ಳಿಹೊಳೆ ಗ್ರಾಮದ ಚಕ್ರಾ ಮೈದಾನ ಬಳಿಯ ಬಿಎಸ್ಸೆನ್ನೆಲ್‌ ಟವರ್‌

ಕುಂದಾಪುರ: ಕೋವಿಡ್ ನಿಂದಾಗಿ ಸಾಕಷ್ಟು ಮಂದಿ ಐಟಿ ಉದ್ಯೋಗಿಗಳು ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಂದ ಊರಿಗೆ ಬಂದು ಮನೆಯಿಂದಲೇ (ವರ್ಕ್‌ ಫ್ರಂ ಹೋಮ್‌) ಕೆಲಸ ಮಾಡುವಂತಾಗಿದೆ. ಹಲವರಿಗೆ ಇದರಿಂದ ಅನುಕೂಲವಾದರೆ ಕೆಲವರಿಗೆ ಸರಿಯಾದ ನೆಟ್‌ವರ್ಕ್‌ ಇಲ್ಲದೆ ಪರದಾಡಬೇಕಾದ ಸ್ಥಿತಿ. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಹಳ್ಳಿಹೊಳೆ, ಕಮಲಶಿಲೆ ಗ್ರಾಮಗಳ ಟೆಕ್ಕಿಗರು ನೆಟ್‌ವರ್ಕ್‌ಗಾಗಿ ದಿನವೂ 15-18 ಕಿ.ಮೀ. ದೂರದ ಪೇಟೆಗೆ ಬಂದು ಕರ್ತವ್ಯ ನಿರ್ವಹಿಸಿ ಮನೆಗೆ ಮರಳುತ್ತಿದ್ದಾರೆ.

ಹಳ್ಳಿಹೊಳೆಯಲ್ಲಿ ಬಿಎಸ್ಸೆನ್ನೆಲ್‌ ಮತ್ತು ಖಾಸಗಿ ಸ್ವಾಮ್ಯದ ಟವರ್‌ ಇದೆ. ಅದನ್ನೂ ಈಗ ಬಳಕೆದಾರರ ಸಮಸ್ಯೆಯಿಂದಾಗಿ ಕಳಚುತ್ತಿದ್ದಾರೆ. ದೇವರಬಾಳು, ಕಬ್ಬಿನಾಲೆ, ಕಟ್ಟಿನಾಡಿ, ಕಾರೇಬೈಲು ಮತ್ತಿತರ ಗ್ರಾಮೀಣ ಭಾಗ, ಕಮಲಶಿಲೆ ಗ್ರಾಮದ ಕೆಲವು ಊರುಗಳ ಜನರಿಗೂ ನೆಟ್‌ವರ್ಕ್‌ ಸಮಸ್ಯೆಯಿದೆ. ಮಳೆಯಿಂದಾಗಿ ವಿದ್ಯುತ್‌ ಇಲ್ಲವಾದರೆ ಯಾವುದೇ ನೆಟ್‌ವರ್ಕ್‌ ಇಲ್ಲ.

ಟೆಕ್ಕಿಗರ ಸಮಸ್ಯೆಯೇನು?
ಹಳ್ಳಿಹೊಳೆ, ಕಮಲಶಿಲೆ ಗ್ರಾಮಗಳ 50ಕ್ಕೂ ಅಧಿಕ ಮಂದಿ ಟೆಕ್ಕಿಗರು ಕೊರೊನಾದಿಂದಾಗಿ ಊರಿಗೆ ಬಂದಿದ್ದಾರೆ. ಆದರೆ ಅವರಿಗೆ ಮನೆಯಲ್ಲಿ ನೆಟ್‌ವರ್ಕ್‌ ಸಿಗುತ್ತಿಲ್ಲ. ಹೀಗಾಗಿ ಕಮಲಶಿಲೆ ಮತ್ತು ಸಿದ್ದಾಪುರ ಪೇಟೆಯಲ್ಲಿ ಬಾಡಿಗೆ ರೂಂ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. “ಬೆಳಗ್ಗೆ ಮನೆಯಿಂದ ಬುತ್ತಿ, ಲ್ಯಾಪ್ಟ್ಯಾಪ್‌ ಹಿಡಿದು ಹೊರಡುತ್ತೇವೆ, ಸಂಜೆ ಮನೆಗೆ ಮರಳುತ್ತೇವೆ. ಆದರೆ ರಾತ್ರಿ ಶಿಫ್ಟ್‌ ಇದ್ದಾಗ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಹಳ್ಳಿಹೊಳೆ ಗ್ರಾಮದ ಸಮೃದ್ಧ್.

ಆನ್‌ಲೈನ್‌ ಕ್ಲಾಸ್‌ಗೂ ಅಡ್ಡಿ
ಹಳ್ಳಿಹೊಳೆ ಗ್ರಾಮದ ಅನೇಕ ಮಂದಿಗೆ ಈಗ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಎಂಜಿನಿಯರಿಂಗ್‌, ಮೆಡಿಕಲ್‌ ಮತ್ತಿತರ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕೆಲವರನ್ನು ಹೆತ್ತವರೇ ಪ್ರತೀ ದಿನ ಪೇಟೆಗಳಲ್ಲಿರುವ ಸಂಬಂಧಿಕರ ಮನೆಗೆ ಬಿಟ್ಟು, ತರಗತಿ ಮುಗಿದ ಮೇಲೆ ಕರೆದೊಯ್ಯುತ್ತಿದ್ದಾರೆ.

ಅಂಕಿ- ಸಂಖ್ಯೆ
ಹಳ್ಳಿಹೊಳೆ ಮತ್ತು ಕಮಲಶಿಲೆ ಒಳಗೊಂಡ ಗ್ರಾ.ಪಂ. ವ್ಯಾಪ್ತಿಯಲ್ಲಿ 973 ಮನೆಗಳಿವೆ. 4,438 ಜನಸಂಖ್ಯೆಯಿದೆ. ಪ್ರತೀ ಮನೆಯಲ್ಲಿ 2 ಅಥವಾ ಹೆಚ್ಚು ಮೊಬೈಲ್‌ ಫೋನ್‌ಗಳಿವೆ.

ಟವರ್‌ಗೆ ಪ್ರಸ್ತಾವನೆ ಸಲ್ಲಿಕೆ
ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದ ನೆಟ್‌ವರ್ಕ್‌ ಸಮಸ್ಯೆ ಗಮನಕ್ಕೆ ಬಂದಿದ್ದು, ಈಗಾಗಲೇ 20ಕ್ಕೂ ಹೆಚ್ಚು ಕಡೆ ಹೊಸದಾಗಿ ಟವರ್‌ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿನ ನೆಟ್‌ವರ್ಕ್‌ ಸಮಸ್ಯೆ ನೀಗಿಸುವ ಸಂಬಂಧ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತೇನೆ.
– ಬಿ.ವೈ. ರಾಘವೇಂದ್ರ, ಸಂಸದರು ಶಿವಮೊಗ್ಗ ಕ್ಷೇತ್ರ

ಮಾರ್ಚ್‌ ನಲ್ಲಿ ಊರಿಗೆ ಬಂದಿದ್ದೇನೆ. ಮನೆಯಲ್ಲಿದ್ದರೆ ನೆಟ್‌ವರ್ಕ್‌ ಸಿಗುವುದಿಲ್ಲ. ನಾನು ಮತ್ತು ನನ್ನಂಥ ಹಲವರು ಪ್ರತೀ ದಿನ ಮನೆಯಿಂದ 10 ಕಿ.ಮೀ. ದೂರದ ಕಮಲಶಿಲೆಗೆ ಬಂದು ಕೆಲಸ ಮಾಡಿ ಮನೆಗೆ ವಾಪಸಾ ಗುತ್ತಿದ್ದೇವೆ. ಕೆಲವೊಮ್ಮೆ ಮನೆ ಯಲ್ಲಿದ್ದಾಗ ತುರ್ತಾಗಿ ಆನ್‌ಲೈನ್‌ ವೀಡಿಯೋ ಮೀಟಿಂಗ್‌ ಕರೆದರೆ ಸಮಸ್ಯೆಯಾಗುತ್ತಿದೆ.
– ರಘುರಾಮ್‌ ಹಳ್ಳಿಹೊಳೆ, ಬೆಂಗಳೂರಿನ ಖಾಸಗಿ ಸಂಸ್ಥೆ ಉದ್ಯೋಗಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.