ವಕ್ವಾಡಿಗೆ ವಾರಾಹಿ ನೀರು: ಹೊಳೆಯ ಹೂಳೆತ್ತಲು ಗ್ರಾಮಸ್ಥರ ಆಗ್ರಹ
Team Udayavani, Apr 20, 2020, 5:03 AM IST
ವಕ್ವಾಡಿ: ಬಹುನಿರೀಕ್ಷಿತ ವಾರಾಹಿ ಯೋಜನೆ ನೀರು ಅಸೋಡಿನಿಂದ ವಕ್ವಾಡಿ ಹೊಳೆಗೆ ಹರಿದು ಬಿಡಲಾಗಿದ್ದು ಈ ಭಾಗದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಯೋಜನೆ ತ್ವರಿತಗತಿಯಲ್ಲಿ ಸಾಗಲು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷದ್ ಸದಸ್ಯರಾದ ಕೆ. ಪ್ರತಾಪ್ ಚಂದ್ರ ಶೆಟ್ಟಿ ಈ ಹಿಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಕೂಡ ಯೋಜನೆ ಪೂರ್ಣ ಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಿದ್ದರು. ವಕ್ವಾಡಿಗೆ ನೀರು ಬರಲು ಕಾರಣಕರ್ತರಾದ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ಚಂದ್ರ ಶೆಟ್ಟಿ, ಕಾಳಾವರ ಗ್ರಾ.ಪಂ. ಅಧ್ಯಕ್ಷ ಸುಖಾನಂದ ಹೆಗ್ಡೆ, ರೈತ ಸಂಘದ ಮುಖಂಡ ಸಂದಾನಂದ ಶೆಟ್ಟಿ ಕೆದೂರು, ವಾರಾಹಿ ಯೋಜನೆ ಎಂಜಿನಿಯರ್ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಎಲ್ಲ ಸದಸ್ಯರಿಗೆ ವಕ್ವಾಡಿ ಗ್ರಾಮಸ್ಥರ ಪರವಾಗಿ ರಮೇಶ್ ಶೆಟ್ಟಿ ವಕ್ವಾಡಿ ಅಭಿನಂದಿಸಿದ್ದು ಹೊಳೆಯ ಹೂಳೆತ್ತುವಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ