ಬಿಯರ್ ದಾಸ್ತಾನು ಬಿಕರಿಗೆ ಅನುಮತಿ
Team Udayavani, May 16, 2020, 4:28 AM IST
ಬೆಂಗಳೂರು: ಲಾಕ್ಡೌನ್ನಿಂದ ಬಿಕರಿಯಾಗದ ಬಿಯರ್ನ ಬಳಕೆ ಅವಧಿ (ಆರು ತಿಂಗಳು) ಮುಗಿದು ವ್ಯರ್ಥವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರ್.ವಿ.ಬಿ. ಜತೆಗೆ ಬಾಟಲ್ಡ್ ಬಿಯರ್ ಮಾರಾಟಕ್ಕೆ ಅನುಮತಿ ಪಡೆದಿರುವ ಸನ್ನದುದಾರರಿಗೆ ಮೇ 17ರವರೆಗೆ ಹಾಲಿ ಬಿಯರ್ ದಾಸ್ತಾನು ಮಾರಾಟಕ್ಕೆ ಅಬಕಾರಿ ಇಲಾಖೆ ಷರತ್ತು ಬದಟಛಿ ಅನುಮತಿ ನೀಡಿದೆ. ಸೀಲ್ ಮಾಡಿರುವ ಬಿಯರ್ ಬಾಟಲ್ಗಳನ್ನು ಎಂಆರ್ಪಿ ದರದಲ್ಲೇ ಮಾರಾಟ ಮಾಡಬೇಕು.
ಆರ್.ವಿ.ಬಿ.ಗಳನ್ನು ಹೊಂದಿ ಬಾಟಲ್ಡ್ ಬಿಯರ್ ಮಾರಾಟ ಅನುಮತಿಯಿರುವ ಸನ್ನದುಗಳಲ್ಲಿನ ಬಾಟಲ್ಡ್ ಬಿಯರ್ ಸನ್ನದಿನಲ್ಲಿ ಊಟ, ತಿಂಡಿ ಪಾರ್ಸೆಲ್ ನೀಡಲು ಅವಕಾಶ ಕಲ್ಪಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಹಾಲಿ ದಾಸ್ತಾನು ಮಾರಾಟಕ್ಕೆ ಅವಕಾಶವಿದ್ದು, ಹೊಸ ಖರೀದಿಗೆ ಅವಕಾಶವಿಲ್ಲ. ಕಂಟೈನ್ಮೆಂಟ್ ವಲಯದಲ್ಲಿನ ಸನ್ನದುಗಳಿಗೆ ಈ ಅವಕಾಶ ಅನ್ವಯಿಸುವುದಿಲ್ಲ. ಬೆಳಗ್ಗೆ 9ರಿಂದ ರಾತ್ರಿ 7ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಷರತ್ತು ಉಲ್ಲಂಘನೆ ಇಲ್ಲವೇ ದುರುಪಯೋಗವಾದರೆ ಸನ್ನದುದಾರರೇ ಜವಾಬ್ದಾರರಾಗಲಿದ್ದು, ಸನ್ನದು ಅಮಾನತು ಇಲ್ಲವೇ ರದ್ದುಪಡಿಸುವುದಾಗಿ ಅಬಕಾರಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಪಾರ್ಸೆಲ್ಗೆ ಅವಕಾಶ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಎಲ್- 2, ಸಿಎಲ್- 4, ಸಿಎಲ್- 7, ಸಿಎಲ್- 6ಎ, ಸಿಎಲ್- 7ಎ, ಸಿಎಲ್- 9, ಸಿಎಲ್- 16, ಸಿಎಲ್- 18 ಹಾಗೂ ವೈನ್ ಟ್ಯಾವರಿನ್ ಸನ್ನದುಗಳಲ್ಲಿ ಮಾರಾಟವಾಗದೆ ಉಳಿದ ಮದ್ಯವನ್ನು ಮೇ 17ರವರೆಗೆ ಬೆಳಗ್ಗೆ 9ರಿಂದ ರಾತ್ರಿ 7ರವರೆಗೆ ಮಾರಾಟ ಮಾಡಲು ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರೆಸ್ಟೋರೆಂಟ್ನಲ್ಲಿ ಊಟ/ ತಿಂಡಿ ಪಾರ್ಸೆಲ್ ರೂಪದಲ್ಲಿ ಇತರೆ ರೆಸ್ಟೋರೆಂಟ್ಗೆ ನಿಗದಿಪಡಿಸಿರುವ ಕಾಲಮಿತಿಯಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ