ಕೊಲೆಗೆ ಯತ್ನಿಸಿದ್ದ ಆರೋಪಿಗಳ ಸೆರೆ
Team Udayavani, Jun 14, 2020, 5:14 AM IST
ಬೆಂಗಳೂರು: ರೌಡಿಶೀಟರ್ ಲೋಕೇಶ್ ಎಂಬುವನ ಮೇಲೆ ಮಾರಕಾಸOಉಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರು ಮಂದಿ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಲೇಔಟ್ ನಿವಾಸಿ ಸೈಯದ್ ನವಾಜ್ (22), ಸೈಯದ್ ತೋಹಿದ್ (27), ಸೈಯದ್ (21), ತಬ್ರೇಜ್ಬೇಗ್ (33), ಅಗ್ರಹಾರ ಲೇಔಟ್ನ ಗಣೇಶ್ (19) ಹಾಗೂ ಕಾಮಾಕ್ಷಮ್ಮ ಲೇಔಟ್ ನಿವಾಸಿ ರಮೇಶ್ ಅಲಿಯಾಸ್ ಟಾಟಾ (40) ಬಂಧಿತರು.
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕ್ಯಾಟ್ ಮಂಜ ಕುಮ್ಮಕ್ಕು ನೀಡಿದ್ದ ಎಂಬುದು ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ರೌಡಿಶೀಟರ್ ಲೋಕೇಶ್ ಈ ಹಿಂದೆ ಹಲ್ಲೆ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ. ನವಾಜ್ ಜತೆ ಗಲಾಟೆ ಮಾಡಿಕೊಂಡಿದ್ದ. ಕುಡಿದ ಅಮಲಿನಲ್ಲಿ ನವಾಜ್ಗೆ ಅವಾಚ್ಯವಾಗಿ ನಿಂದಿಸುತ್ತಿದ್ದ. ಈ ವಿಚಾರವನ್ನು ನವಾಜ್ ತನ್ನ ಸ್ನೇಹಿತ ರಮೇಶ್ಗೆ ತಿಳಿಸಿದ್ದ.
ಬಳಿಕ ನವಾಜ್ ಮತ್ತು ರಮೇಶ್ ಸೇರಿ ಜೈಲಿನಲ್ಲಿರುವ ಕ್ಯಾಟ್ ಮಂಜನನ್ನು ಸಂಪರ್ಕಿಸಿದ್ದರು. ಲೋಕೇಶ್ ಗಲಾಟೆ ವಿಚಾರ ತಿಳಿಸಿದ್ದರು. ಲೋಕೇಶ್ ಹತ್ಯೆಗೆ ಸಂಚು ರೂಪಿಸಿದ್ದು, ರಮೇಶ್ ತನ್ನ ಸಹಚರರನ್ನು ನವಾಜ್ ಜತೆಗೆ ಕಳುಹಿಸಿದ್ದ. ಲೋಕೇಶ್ ಜೂ. 6ರಂದು ಮಧ್ಯಾಹ್ನ 1 ಗಂಟೆಯಲ್ಲಿ ಫ್ಯಾಕ್ಟರಿಯೊಂದರ ಬಳಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳು ಮಾರಕಾಸOಉಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ