ಗೃಹ ಬಂಧನ: ಛಾವಣಿಯಲ್ಲಿ ತೋಟಗಾರಿಕೆ


Team Udayavani, Apr 5, 2020, 11:34 AM IST

ಗೃಹ ಬಂಧನ: ಛಾವಣಿಯಲ್ಲಿ  ತೋಟಗಾರಿಕೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ಜನರ “ಗೃಹ ಬಂಧನ’ಕ್ಕೂ ನಗರದಲ್ಲಿರುವ ಮನೆಗಳ ಮೇಲ್ಛಾವಣಿಯಲ್ಲಿನ ಹಸಿರೀಕರಣಕ್ಕೂ ಸಂಬಂಧ ಇದೆಯೇ? – ನಿಕಟ ಸಂಬಂಧ ಇದೆ. ಯಾಕೆಂದರೆ, ಕ್ವಾರಂಟೈನ್‌ ನಂತರದ ದಿನಗಳಲ್ಲಿ ಜನ ತಾರಸಿಯಲ್ಲಿ ತೋಟಗಾರಿಕೆ, ಗಾರ್ಡನಿಂಗ್‌ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಸಿರಿನೊಂದಿಗೆ ಹೆಚ್ಚು ಹೊತ್ತು ಕಳೆಯುತ್ತಿರುವುದರ ಜತೆಗೆ ತಾಜಾ ತರಕಾರಿ-ಹಣ್ಣು ಬೆಳೆಯುವುದರಲ್ಲಿ ಬ್ಯುಸಿ ಆಗಿದ್ದಾರೆ ಎನ್ನುತ್ತಾರೆ ತಜ್ಞರು.

ತಪ್ಪದೆ ನಿತ್ಯ ಎರಡು ಹೊತ್ತು ನೀರುಣಿಸುವುದು, ಆ ಗಿಡಗಳ ಮಧ್ಯೆ ಕುಳಿತು ಹರಟುವುದು ಮತ್ತು ಶುದ್ಧಗಾಳಿ ಸೇವಿಸುವುದು, ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿನಿಂದ ಗಿಡಗಳನ್ನು ರಕ್ಷಿಸಲು ಮನೆಯಲ್ಲಿನ ಹಳೆಯ ಸೀರೆ, ಪಂಚೆಗಳ ಹೊದಿಕೆ ಮಾಡುವುದು, ಒಣಗಿದ ಎಲೆಗಳಿಂದ ಮಲ್ಟಿಂಗ್‌, ಕಾಲ-ಕಾಲಕ್ಕೆ ಗೊಬ್ಬರ ಹಾಕುವುದು ಸೇರಿದಂತೆ ಮನೆ ಮಕ್ಕಳಂತೆ ಜನ ತಾರಸಿ ತೋಟವನ್ನು ಪೋಷಿಸುತ್ತಿದ್ದಾರೆ. ಹೀಗಾಗಿ ಕೆಲವು ಛಾವಣಿಗಳು ಹಸಿರಿನಿಂದ ಕೂಡಿವೆ ಈ ಮೊದಲು ಬೆಳಗ್ಗೆಯಿಂದ ಸಂಜೆವರೆಗೂ ಕೆಲಸದ ಒತ್ತಡ, ಮಕ್ಕಳನ್ನು ತಯಾರು ಮಾಡುವುದು, ಶಾಲೆಗೆ ಬಿಡುವುದು, ಅಡಿಗೆ ಹೀಗೆ ಬಿಡುವಿಲ್ಲದ ವೇಳೆಯ ಮಧ್ಯೆ ಟೆರೇಸ್‌ನಲ್ಲಿ ತರಕಾರಿ ಬೆಳೆಯಲು ಆಸಕ್ತಿ ಇದ್ದರೂ ಪುರಸೊತ್ತಿರಲಿಲ್ಲ. ಆದರೆ, ಕಳೆದ 8-10 ದಿನಗಳಿಂದ ನಗರದ ಜೀವನಶೈಲಿ ಬದಲಾಗಿದ್ದು, ಹೊತ್ತು ಕಳೆಯುವುದು ಸವಾಲಾಗಿದೆ. ಮೊಬೈಲ್‌, ಮಕ್ಕಳೊಂದಿಗೆ ಆಟ, ವಾಯುವಿಹಾರದ ನಂತರವೂ ಸಮಯ ಉಳಿಯುತ್ತದೆ. ಅದನ್ನು ಜನ ಟೆರೇಸ್‌ ಗಾರ್ಡನ್‌ನಲ್ಲಿ ಕಳೆಯುತ್ತಿರುವುದು ಕಂಡುಬರುತ್ತಿದೆ.

ಶೇರ್‌ ಮಾಡಿ ಖುಷಿಪಡ್ತಾರೆ: “ಕಳೆದ ಒಂದು ವಾರದಿಂದ ಟೆರೇಸ್‌ ಗಾರ್ಡನ್‌ ಬಗ್ಗೆ ಮಾಹಿತಿ ಕೋರಿ ಜನರಿಂದ ಕರೆಗಳು ಬರುತ್ತಿವೆ. ಗಿಡಗಳನ್ನು ಬೆಳೆಯುವುದು ಹೇಗೆ? ಬಿಸಿಲಿನಿಂದ ರಕ್ಷಿಸಲು ಏನು ಮಾಡಬೇಕು? ಕೀಟಬಾಧೆ ಕಂಡುಬರುತ್ತಿದ್ದು, ಏನು ಸಿಂಪಡಣೆ ಮಾಡಬೇಕು? ಇಂತಹ ಹಲವು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಇನ್ನು ತಾವೇ ಬೆಳೆದ ತರಕಾರಿಗಳ ಫೋಟೋಗಳನ್ನು ವಾಟ್ಸ್‌ ಆ್ಯಪ್‌ ಮೂಲಕ ಶೇರ್‌ ಮಾಡಿ ಖುಷಿಪಡುತ್ತಿದ್ದಾರೆ. ಎಂದು ಭಾರತೀಯ ತೋಟಗಾರಿಕೆ ಸಂಸ್ಥೆ (ಐಐಎಚ್‌ಆರ್‌) ಪ್ರಧಾನ ವಿಜ್ಞಾನಿ ಡಾ.ಸಿ. ಅಶ್ವಥ್‌ ತಿಳಿಸಿದರು.  “2 ತಿಂಗಳ ಹಿಂದೆ ನಡೆದ ತೋಟಗಾರಿಕೆ ಮೇಳದಲ್ಲಿ ಭಾಗ ವಹಿಸಿದ್ದವರೂ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ.

ಲಕ್ಷಕ್ಕೂ ಅಧಿಕ ಜನ ಆಸಕ್ತಿ? : ತಾರಸಿ ತೋಟಗಾರಿಕೆಗೆ ನಿತ್ಯ ಎರಡು ಹೊತ್ತು ನೀರು ಹಾಕಿ, ಉತ್ತಮವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಕೆಲಸದ ಒತ್ತಡದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಈಗ ಸಮಯ ಇದ್ದುದರಿಂದ ಅದರ ಪ್ರವೃತ್ತಿ ಕಂಡುಬರುತ್ತಿದೆ. ಎಷ್ಟು ಪ್ರಮಾಣ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ನಗರದಲ್ಲಿ ನೂರಕ್ಕೆ ನೂರರಷ್ಟು ಜನರಿಗೆ ಲಾಕ್‌ ಡೌನ್‌ನಿಂದ ಕೆಲಸವಿಲ್ಲ. ನಗರದ ಜನಸಂಖ್ಯೆ 1.30 ಕೋಟಿ. ಲಕ್ಷಾಂತರ ಕುಟುಂಬಗಳಿದ್ದು, ಶೇ. 1ರಷ್ಟು ತೆಗೆದುಕೊಂಡರೂ ಒಂದು ಲಕ್ಷಕ್ಕಿಂತ ಹೆಚ್ಚು ಜನ ಆಗುತ್ತಾರೆ. ಆ ಪ್ರಮಾಣವನ್ನು ನಾವು ತೆಗೆದುಕೊಳ್ಳ ಬಹುದು ಎಂದು ಡಾ.ಅಶ್ವಥ್‌ ಅಭಿಪ್ರಾಯಪಡುತ್ತಾರೆ.

 

ಬೆಲೆ ಏರಿಕೆ ಕಾರಣ :  ಜನರಿಗೆ ಆರಂಭದಲ್ಲಿ ಹಣ್ಣು-ತರಕಾರಿಗಾಗಿ ಪರದಾಡಿದ್ದೂ ಇದೆ. ದುಬಾರಿ ಬೆಲೆಗೆ ಖರೀದಿಸಿದ್ದೂ ಇದೆ. ಜನ ತಾರಸಿ ತರಕಾರಿ ಬೆಳೆಯಲು ಆಸಕ್ತಿ ತೋರಿಸಲು ಇದೂ ಒಂದು ಕಾರಣ ಇರಬಹುದು ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.