ಹೊನ್ನಮ್ಮನಹಳ್ಳ ಹಾಗೂ ದಬೆದಬೆ ಜಲಪಾತ: ಖಾಸಗಿಯಿಂದ ಮುಕ್ತಗೊಳಿಸಿ
Team Udayavani, Oct 20, 2021, 6:02 PM IST
ಚಿಕ್ಕಮಗಳೂರು: ಹೊನ್ನಮ್ಮನಹಳ್ಳ ಹಾಗೂ ದಬೆದಬೆ ಜಲಪಾತವನ್ನು ಖಾಸಗಿಯವರಿಂದ ಮುಕ್ತ ಗೊಳಿಸಬೇಕೆಂದು ಒತ್ತಾಯಿಸಿ ಐ.ಡಿ. ಪೀಠದ ಗ್ರಾಮಸ್ಥರು ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂಬಂಧ ಮನವಿ ಸಲ್ಲಿಸಿದ ಗ್ರಾಮಸ್ಥರು, ಐ.ಡಿ. ಪೀಠ ಗ್ರಾಮದ ಅತ್ತಿಗುಂಡಿ ಸಮೀಪದ ಹೊನ್ನಮ್ಮನಹಳ್ಳ ಮತ್ತು ದಬೆದಬೆ ಜಲಪಾತ ಆಕರ್ಷಣೀಯ ಸ್ಥಳವಾಗಿದೆ. ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಖಾಸಗಿಯವರು ನಿರ್ವಹಿಸುವ ಮೂಲಕ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಶಾಸಕರು ಪ್ರವಾಸಿ ತಾಣಗಳನ್ನು ಗ್ರಾಪಂ ವಶಕ್ಕೆ ಪಡೆದು ನಿರ್ವಹಣೆ ಮಾಡುವಂತೆ ಮೌಖೀಕವಾಗಿ ಸೂಚಿಸಿದ್ದರೂ ಪಂಚಾಯತ್ ಅ ಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಖಾಸಗಿಯವರ ಹಿಡಿತದಲ್ಲಿರುವ ದಬೆ ದಬೆ ಜಲಪಾತವನ್ನು ಖಾಸಗಿಯವರಿಂದ ಮುಕ್ತಗೊಳಿಸಿ ಪ್ರವಾಸಿಗರಿಗೆ ಮತ್ತು ಗಾಪಂಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರಾದ ಗುರುವೇಶ್, ಮಂಜು, ಚಂಗಣ್ಣ, ಕುಮಾರ್, ಸುರೇಂದ್ರ, ಅಣ್ಣಪ್ಪ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ