ವಿಶೇಷಚೇತನರ ವಿಷಯದಲ್ಲಿ ಅಸಡ್ಡೆ ತೋರಬೇಡಿ: ಗಂಗಾ

ತಾಯಂದಿರು ತಮ್ಮ ಪೂರ್ಣ ಸಮಯ ಇಂತಹ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ

Team Udayavani, Feb 4, 2023, 9:50 AM IST

ವಿಶೇಷಚೇತನರ ವಿಷಯದಲ್ಲಿ ಅಸಡ್ಡೆ ತೋರಬೇಡಿ: ಗಂಗಾ

ಹುಬ್ಬಳ್ಳಿ: ವಿಕಲಚೇತನರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಣ್ಣಿಗೇರಿ ಪುರಸಭೆ ಅಧ್ಯಕ್ಷೆ ಗಂಗಾ ಆರ್‌. ಕರೆಟ್ಟನವರ ಹೇಳಿದರು.

ಅಣ್ಣಿಗೇರಿಯ ಶ್ರೀ ಪುರದಿರೇಶ್ವರ ದೇವಸ್ಥಾನ ಆವರಣದಲ್ಲಿ ಪುರಸಭೆ ಕಾರ್ಯಾಲಯ, ಆರೂಢ ಸಂಸ್ಥೆ ಧಾರವಾಡ, ಎಪಿಡಿ ಬೆಂಗಳೂರು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರ, ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿ ಕುಂಠಿತ ಮಕ್ಕಳು ಹಾಗೂ ವಿಶೇಷಚೇತನರ ಬಗ್ಗೆ ಅಸಡ್ಡೆ ತೋರಬೇಡಿ. ಅವರಲ್ಲೂ ಸಹಿತ ಶಿಕ್ಷಣ, ಆಟ-ಪಾಠ ಸೇರಿದಂತೆ ಎಲ್ಲಾ ರಂಗಗಳಲ್ಲಿ ಸಾಧಿಸುವ ಛಲ- ಶಕ್ತಿ ಇರುತ್ತದೆ. ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಆದ್ಯತೆ ಮೇರೆಗೆ ಪುರಸಭೆಯಿಂದ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವುದಾಗಿ ಭರವಸೆ ನೀಡಿದರು.

ಅಣ್ಣಿಗೇರಿ ಪುರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿಜಕರಡ್ಡಿ ಮಾತನಾಡಿ, ವಿಕಲಚೇತನ ಮಕ್ಕಳ ಪಾಲನೆ-ಪೋಷಣೆ, ನಿರ್ವಹಣೆ ಕಾರ್ಯ ಅತ್ಯಂತ ಕಠಿಣವಾದದ್ದು. ಇಂತಹ ಸವಾಲಿನ ಕೆಲಸವನ್ನು ನಿಭಾಯಿಸುವುದರ ಜತೆಗೆ ತಾಯಂದಿರು ತಮ್ಮ ಪೂರ್ಣ ಸಮಯ ಇಂತಹ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ. ಹೀಗಾಗಿ ವಿಕಲಚೇತನ ಮಕ್ಕಳ ಸೇವೆ ಮಾಡುವುದು ನಿಜವಾದ ದೇವರ ಕಾರ್ಯ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಪ್ರಾಸ್ತಾವಿಕ ಮಾತನಾಡಿ, ಎಸ್‌ಎಫ್‌ಸಿ ಯೋಜನೆಯಡಿ ಸುಮಾರು 42.50 ಲಕ್ಷಕ್ಕೂ ಹೆಚ್ಚು ಹಣ ಮೀಸಲಿಟ್ಟು ಸಮುದಾಯದ ಶಾಸಕರ ಮಾದರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಯೋಜನಾ ಚಟುವಟಿಕೆಗಳಿಗೂ ಸಿದ್ಧತೆ ನಡೆಸಲಾಗಿದೆ ಎಂದರು. ಸರ್ಕಾರಿ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ| ಕೃಷ್ಣ ಜಗ್ಗಲ, ಆರೂಢ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಾಗರಾಜ ಹೂಗಾರ, ನಿರ್ದೇಶಕಿ ಗೀತಾ ಮಗರ, ಪುರಸಭೆ ಸದಸ್ಯೆ ಶೋಭಾ ಗೊಲ್ಲರ, ವಿಕಲಚೇತನರ ಸಂಘಟನೆ ಮುಖ್ಯಸ್ಥೆ ಫಾತಿಮಾ ನವಲಗುಂದ, ಮಂಗಳಾ ಉಳ್ಳಾಗಡ್ಡಿ, ಲಲಿತಾ ಹಿರೇಮಠ ಮೊದಲಾದವರಿದ್ದರು. ಎ.ಕೆ. ಭೂಸನೂರಮಠ ಸ್ವಾಗತಿಸಿದರು. ಉಮಾಮಹೇಶ್ವರಿ ಕರಬಿಸ್ಟಿ ನಿರೂಪಿಸಿದರು. ಎನ್‌. ಎಸ್‌. ಸಜ್ಜನಶೆಟ್ಟರ ವಂದಿಸಿದರು.

ಟಾಪ್ ನ್ಯೂಸ್

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

politi

ಡೈಲಿಡೋಸ್:ಫ್ಲೆಕ್ಸ್‌ ಸಾಹೇಬ್ರ ಫಿಕ್ಸ್ಡ್‌ ರಾಜಕೀಯ-ಇವ್ರಿಗೆ ಗೆಲ್ಲೋಕ್ಕಿಂತ ನಿಲ್ಲೋದೇ ಮುಖ್ಯ

rcbಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

vote

ಹೀಗೂ ಉಂಟು: ಗೆಲುವಿನ ಅಂತರ ಬರೀ 24 ಓಟು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದರ್ಭದಿಂದ ಕರುನಾಡಿಗೆ ಗಾರ್ದಭ ಗುಳೆ; 6 ತಿಂಗಳಿಗೆ 5 ಲಕ್ಷ ರೂ. ದುಡಿಯುವ ತಂಡ

ವಿದರ್ಭದಿಂದ ಕರುನಾಡಿಗೆ ಗಾರ್ದಭ ಗುಳೆ; 6 ತಿಂಗಳಿಗೆ 5 ಲಕ್ಷ ರೂ. ದುಡಿಯುವ ತಂಡ

ಮೀಸಲಾತಿ ಬಗ್ಗೆ ಧೈರ್ಯದ ನಿರ್ಧಾರ: ಸಚಿವ ಪ್ರಹ್ಲಾದ ಜೋಷಿ

ಮೀಸಲಾತಿ ಬಗ್ಗೆ ಧೈರ್ಯದ ನಿರ್ಧಾರ: ಸಚಿವ ಪ್ರಹ್ಲಾದ ಜೋಷಿ

ಚುನಾವಣೆಗಾಗಿ ಮೀಸಲು ಹೆಚ್ಚಿಸಿಲ್ಲ: ಸಚಿವ ಮುರುಗೇಶ ನಿರಾಣಿ

ಚುನಾವಣೆಗಾಗಿ ಮೀಸಲು ಹೆಚ್ಚಿಸಿಲ್ಲ: ಸಚಿವ ಮುರುಗೇಶ ನಿರಾಣಿ

ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪ್ರಕಟ; ಇಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ

ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪ್ರಕಟ; ಇಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ

basavaraj bommai ramesh jarkiholi

ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

politi

ಡೈಲಿಡೋಸ್:ಫ್ಲೆಕ್ಸ್‌ ಸಾಹೇಬ್ರ ಫಿಕ್ಸ್ಡ್‌ ರಾಜಕೀಯ-ಇವ್ರಿಗೆ ಗೆಲ್ಲೋಕ್ಕಿಂತ ನಿಲ್ಲೋದೇ ಮುಖ್ಯ

rcbಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.