ಡಾ| ನಾಗಲೋಟಿಮಠ ಬದುಕು ಯುವಕರಿಗೆ ಆದರ್ಶ

ರ್‍ಯಾಂಕ್‌ ಪಡೆದಾಗ ಇಂತಹ ಪುಸ್ತಕವನ್ನು ಉಡುಗೊರೆಯಾಗಿ ನೀಡಬೇಕು

Team Udayavani, Oct 25, 2021, 6:23 PM IST

ಡಾ| ನಾಗಲೋಟಿಮಠ ಬದುಕು ಯುವಕರಿಗೆ ಆದರ್ಶ

ಹುಬ್ಬಳ್ಳಿ: ಡಾ| ಎಸ್‌.ಜೆ. ನಾಗಲೋಟಿಮಠ ಅವರ ನಡೆ, ನುಡಿ ಮತ್ತು ಪ್ರಾಮಾಣಿಕತೆ ಇಂದಿನ ಜನಾಂಗಕ್ಕೆ ಆದರ್ಶವಾಗಬೇಕಾಗಿದೆ ಎಂದು ವಿಶ್ರಾಂತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಿ.ಆರ್‌. ತಮಗೊಂಡ ಹೇಳಿದರು. ವಿದ್ಯಾನಗರ ಸುಶ್ರುತ ಆಸ್ಪತ್ರೆ ಸಭಾಭವನದಲ್ಲಿ ಬೆಳಗಾವಿಯ ಡಾ| ಎಸ್‌.ಜೆ.ನಾಗಲೋಟಿಮಠ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಕಲಬುರಗಿಯ ಷಡಕ್ಷರಿಸ್ವಾಮಿ ದಿಗ್ಗಾಂವಕರ ಟ್ರಸ್ಟ್‌ ಮತ್ತು ಜನಾಂದೋಲನ ಟ್ರಸ್ಟ್‌ನ ಸಹಯೋಗದಲ್ಲಿ ಸಜನಾ ಅವರ ಬಿಚ್ಚಿದ ಜೋಳಿಗೆಯ ಇಂಗ್ಲಿಷ್‌ ಆವೃತ್ತಿ(ಆ್ಯನ್‌ ಓಪನ್‌ ಬ್ಯಾಗ್‌ ಆಪ್‌ ಆಲ್ಮ್ಸ್) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಡಾ| ನಾಗಲೋಟಿಮಠ ಅವರು ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುವ ಜ್ಯೋತಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯ ಎಂದರು. ಪತ್ರಕರ್ತ ಹರ್ಷವರ್ಧನ ಶೀಲವಂತರ ಪುಸ್ತಕ ಕುರಿತು ಮಾತನಾಡಿ, ಇತ್ತೀಚಿನ ಬರಹಗಾರರು ವಾಸ್ತವವನ್ನು ಬರೆಯುವುದು ವಿರಳ. ಆದರೆ ಎಸ್‌.ಜೆ ನಾಗಲೋಟಿಮಠ ಅವರು ಬದುಕಿದಂತೆ ಬರೆದವರು ಅವರ ಬಿಚ್ಚಿದ ಜೋಳಿಗೆ ಪುಸ್ತಕ ಅವರ ಅನುಭವದ ಸಾರವನ್ನು ತಿಳಿಸಿದೆ ಎಂದು ಹೇಳಿದರು.

ನಾಗಲೋಟಿಮಠ ಅವರು ಪುಸ್ತಕ ಬಿತ್ತಿ ಬೆಳೆದಿದ್ದೇವೆ. ಅದನ್ನು ಮುಂದಿನ ಪೀಳಿಗೆಯವರಿಗೆ ಮುಟ್ಟಿಸುವ ಕೆಲಸ ನಾವು ಮಾಡಬೇಕು. ಜನ್ಮದಿನ ಅಥವಾ ರ್‍ಯಾಂಕ್‌ ಪಡೆದಾಗ ಇಂತಹ ಪುಸ್ತಕವನ್ನು ಉಡುಗೊರೆಯಾಗಿ ನೀಡಬೇಕು. ಮೌಲ್ಯ ಮತ್ತು ಆದರ್ಶ ನಾಲಿಗೆಯಾಗಬೇಕು. ಚೆನ್ನಾಗಿ ಮಾತನಾಡುವವರು ನಮಗೆ ಮಾದರಿಯಾಗಬಾರದು, ನಡೆದಂತೆ ಮಾತನಾಡುವವರು ಮಾದರಿಯಾಗಬೇಕು. ಅಂತಹ ವ್ಯಕ್ತಿತ್ವ ನಾಗಲೋಟಿಮಠರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಶ್ರುತ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ| ದೇವರಾಜ ರಾಯಚೂರ ಮಾತನಾಡಿದರು. ಶಾಂತಾ ನಾಗಲೋಟಿಮಠ, ಪ್ರಕಾಶಕ ಎಸ್‌.ಎಸ್‌. ಹಿರೇಮಠ ಮತ್ತು ಡಾ| ಜಿ.ನಾಗೇಶಪ್ಪ, ಮಹಾನಂದಾ ದಿಗ್ಗಾಂವಕರ, ಉಮೇಶ ನಾಗಲೋಟಿಮಠ, ಬಸವರಾಜ ಕೆಂದೋಳಿ, ಸುಶ್ಮಾ ಹಿರೇಮಠ, ಶಿವಶಂಕರ ಹಿರೇಮಠ, ಪಿಐ ಎನ್‌.ಸಿ. ಕಾಡದೇವರ ಇನ್ನಿತರರಿದ್ದರು. ಡಾ| ಭಾಗ್ಯಜ್ಯೋತಿ ಕೋಟಿಮಠ
ನಿರೂಪಿಸಿದರು.

ಟಾಪ್ ನ್ಯೂಸ್

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-saddsdsadd

ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ

1-3qeqwreqwrw3

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಹರಿಪ್ರಿಯಾ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

ಬೆಳಪು :27 ವರ್ಷದ ವಿವಾಹಿತೆ ನಾಪತ್ತೆ

1-wdsadasd

ಗೋಕರ್ಣ: ಅಥರ್ವಣ ವೇದ ಪಂಡಿತ ಆಚಾರ್ಯ ಶ್ರೀಧರ ಅಡಿ ವಿಧಿವಶ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

1-apc

ಭಾರತೀಯ ಸಂಸ್ಕೃತಿಯ ಪರಂಪರೆ ಆದಿ-ಅನಂತ…: ರಾಜ್ಯಪಾಲ ಗೆಹ್ಲೋಟ್

1-sadsasa-d

ಎಳ್ಳಾರೆ ವೈ.ವಿಟ್ಠಲ ಪ್ರಭು ಹೃದಯಾಘಾತದಿಂದ ನಿಧನ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

police crime

ಬೆಳಪು :27 ವರ್ಷದ ವಿವಾಹಿತೆ ನಾಪತ್ತೆ

1-wdsadasd

ಗೋಕರ್ಣ: ಅಥರ್ವಣ ವೇದ ಪಂಡಿತ ಆಚಾರ್ಯ ಶ್ರೀಧರ ಅಡಿ ವಿಧಿವಶ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

1-apc

ಭಾರತೀಯ ಸಂಸ್ಕೃತಿಯ ಪರಂಪರೆ ಆದಿ-ಅನಂತ…: ರಾಜ್ಯಪಾಲ ಗೆಹ್ಲೋಟ್

1-sadsasa-d

ಎಳ್ಳಾರೆ ವೈ.ವಿಟ್ಠಲ ಪ್ರಭು ಹೃದಯಾಘಾತದಿಂದ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.