ಬೆಳೆಯುತಲೇ ಹೊರಟಿದೆ ನೀರಿನ ಬಾಕಿ


Team Udayavani, Jan 15, 2021, 12:41 PM IST

whater

ಹುಬ್ಬಳ್ಳಿ: ಅವಳಿ ನಗರದಲ್ಲಿ ನೀರಿನ ಬಾಕಿ ವಸೂಲಿ ನಿಟ್ಟಿನಲ್ಲಿ ಸರಕಾರ ಹಾಗೂ ಜಲಮಂಡಳಿಯಿಂದ ಹಲವು ಕ್ರಮ ಕೈಗೊಂಡರೂ ಬಾಕಿ ಮಾತ್ರ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತಿದೆ.

ಇದುವರೆಗೆ ಜನರಿಂದ ಜಲಮಂಡಳಿಗೆ 66.73 ಕೋಟಿ ರೂ.ಗಳ ಬಾಕಿ ಬರಬೇಕಿದೆ. ಜನರಿಂದ ಜಲಮಂಡಳಿಗೆ ಕೋಟಿ ಕೋಟಿ ಬಾಕಿ ಬರಬೇಕಿದ್ದು, ಅದರಲ್ಲಿ 2ಲಕ್ಷ ರೂ.ಗಳ ಮೇಲ್ಪಟ್ಟ ನೀರಿನ ಕರ ಬಾಕಿ ಉಳಿಸಿಕೊಂಡವರು 284, 1ರಿಂದ 2ಲಕ್ಷ ರೂ.ಗಳ ಮೇಲ್ಪಟ್ಟು ಬಾಕಿ ಉಳಿಸಿಕೊಂಡವರು 173, 50ರಿಂದ 1ಲಕ್ಷ ರೂ.ಗಳವರೆಗೆ ಬಾಕಿ ಉಳಿಸಿಕೊಂಡವರು 4409, 25ರಿಂದ50 ಸಾವಿರ ರೂ. ಗಳ ಬಾಕಿ ಉಳಿಸಿಕೊಂಡವರು 3643, 20 ರಿಂದ 25 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 1686, 15 ರಿಂದ 20 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 2123, 10 ರಿಂದ 15 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 2304, 5 ರಿಂದ 10 ಸಾವಿರ ರೂ. ಗಳ ಬಾಕಿ ಉಳಿಸಿಕೊಂಡವರು 3316, 2 ರಿಂದ 5 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 46047, 2 ಸಾವಿರ ರೂ.ಗಳ ಮೇಲ್ಪಟ್ಟವರು 14251 ಸಂಪರ್ಕ ಪಡೆದವರು ಸುಮಾರು 66,73,10,336 ರೂ.ಗಳ ಬಾಕಿ ಜಲಮಂಡಳಿಗೆ ಸಂದಾಯವಾಗಬೇಕಿದೆ. ಅವಳಿನಗರದಲ್ಲಿ ಎಲ್ಲ 67 ವಾರ್ಡ್‌ಗಳಲ್ಲಿ 24/7 ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದ್ದು, ಹಲವು ವಾರ್ಡುಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಅವಳಿನಗರದ ವ್ಯಾಪ್ತಿಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದೇ ನಿಟ್ಟಿನಲ್ಲಿ ಜಲಮಂಡಳಿ ಕೂಡಾ ವೇಗ ಪಡೆಯಬೇಕಿತ್ತು. ಆದರೆ ಆರ್ಥಿಕ ಹೊರೆಯಿಂದ ಜಲಮಂಡಳಿ ಹಿನ್ನಡೆ ಅನುಭವಿಸುವಂತಾಗಿದೆ.

ಇದನ್ನೂ ಓದಿ:ಸಂಕ್ರಮಣ ಸಂಭ್ರಮ

ಒಂದೆಡೆ 24/7 ಇನ್ನೊಂದೆಡೆ ಜಲಮಂಡಳಿ: ಹೌದು. ಈಗಾಗಲೇ ಅವಳಿನಗರದ ಕೆಲ ವಾರ್ಡುಗಳನ್ನು 24/7 ಪ್ರಾಯೋಗಿಕ ಚಾಲನೆಗೆ ನೀಡಲಾಗಿದ್ದು, ಅವುಗಳನ್ನು ಜಲಮಂಡಳಿಂದ ನೀಡಲಾಗಿದೆ. ಇದರಲ್ಲಿ 27ಎ, 31, 32, 33, 42, 44, 46, 47, 55, 56, 57, 58 ಹಾಗೂ 66ನೇ ವಾರ್ಡುಗಳಲ್ಲಿ 24/7 ಪ್ರಾಯೋಗಿಕ ಚಾಲನೆ ನಡೆಯುತ್ತಿವೆ. ಈ ಎಲ್ಲ ವಾರ್ಡುಗಳಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಯವರು ಪರಿಶೀಲನೆ ಹಾಗೂ ತಪಾಸಣೆ ನಡೆಸುತ್ತಿದ್ದಾರೆ.

ಬಾಕಿ ಉಳಿಸಿಕೊಂಡ ವಾರ್ಡುಗಳು: ನಗರದ ವಾರ್ಡುಗಳಲ್ಲಿ ವಾರ್ಡು ನಂ 60-4.72 ಕೋಟಿ ರೂ. ವಾರ್ಡು 38-3.89 ಕೋಟಿ ರೂ. ವಾರ್ಡು 24-3.89 ಕೋಟಿ ರೂ. ವಾರ್ಡು 50-2.91 ಕೋಟಿ ರೂ. ವಾರ್ಡು 30-1.18 ಕೋಟಿ, ವಾರ್ಡು 34-2.14 ಕೋಟಿ, ವಾರ್ಡು 37-1.44 ಕೋಟಿ, ವಾರ್ಡು 39-2.34 ಕೋಟಿ, ವಾರ್ಡು 40-1.82 ಕೋಟಿ, ವಾರ್ಡು 42-1.76 ಕೋಟಿ, ವಾರ್ಡು 44-1.32 ಕೋಟಿ, ವಾರ್ಡು 45-1.40 ಕೋಟಿ, ವಾರ್ಡು 45ಎ-1.22 ಕೋಟಿ, ವಾರ್ಡು 46-1.59 ಕೋಟಿ, ವಾರ್ಡು 47-1.90 ಕೋಟಿ, ವಾರ್ಡು 49-1.80 ಕೋಟಿ, ವಾರ್ಡು 50-2.91 ಕೋಟಿ, ವಾರ್ಡು 51-1.46 ಕೋಟಿ, ವಾರ್ಡು 52-2.6 ಕೋಟಿ, ವಾರ್ಡು 53-1.63 ಕೋಟಿ, ವಾರ್ಡು 54-2.35 ಕೋಟಿ, ವಾರ್ಡು 58-1.17 ಕೋಟಿ, ವಾರ್ಡು 59-2.46 ಕೋಟಿ, ವಾರ್ಡು 62-1.91 ಕೋಟಿ, ವಾರ್ಡು 64-1.29 ಕೋಟಿ, ವಾರ್ಡು 65-2.38 ಕೋಟಿ, ವಾರ್ಡು 65ಎ-1.72 ಕೋಟಿ, ವಾರ್ಡು 67-1.7 ಕೋಟಿ ರೂ.ಗಳ ಬಾಕಿ ಇದ್ದರೆ ಇನ್ನುಳಿದ ವಾರ್ಡುಗಳು ಕೋಟಿ ರೂ.ಗಳ ಒಳಗಡೆ ಇವೆ.

ಇನ್ನು ಅತಿ ಕಡಿಮೆ ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ವಾರ್ಡು 27-62218 ರೂ.ಗಳ ಪ್ರಥಮ, ವಾರ್ಡು 28-88226 ದ್ವಿತೀಯ ಹಾಗೂ ವಾರ್ಡು 31-1 ಲಕ್ಷ ರೂ.ಗಳ ಬಾಕಿ ಉಳಿಸಿಕೊಳ್ಳುವ ತೃತೀಯ ಸ್ಥಾನ ಪಡೆಯುತ್ತವೆ. ಹಲವಾರು ವರ್ಷಗಳಿಂದ ಜನರು ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಕೆಲ ಬಡಾವಣೆಗಳಲ್ಲಿ ನೀರಿನ ಬಿಲ್‌ ಬಾಕಿ ಕೇಳಲಾರದಂತಹ ಸ್ಥಿತಿ ಇದೆ. ಕೆಲ ಬಡಾವಣೆಗಳಲ್ಲಿ ಕೇವಲ ಬಿಲ್‌ ನೀಡುವುದು, ಬಿಟ್ಟರೆ ನೋಟಿಸ್‌ ನೀಡುವುದು ಮಾತ್ರ ಮಾಡಬಹುದು. ಅದನ್ನು ಬಿಟ್ಟರೆ ಮತ್ತೇನೂ ಮಾಡುವಂತಿಲ್ಲ. ಅಂತಹ ಸ್ಥಿತಿ ನಗರದ ಕೆಲ ಬಡಾವಣೆಗಳಲ್ಲಿದೆ. ಕೆಲ ಬಡಾವಣೆಗಳಲ್ಲಿ ಮನೆ ಬಿಟ್ಟು ಹೋಗಿರುವುದು,

ಜಲಮಂಡಳಿಯೊಂದಿಗೆ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ ಬಿಲ್‌ ಬಾಕಿ ಉಳಿದುಕೊಂಡಿವೆ. ಒಟ್ಟಿನಲ್ಲಿ ಹಲವಾರು ಕಾರಣಗಳಿಂದ ಜಲಮಂಡಳಿಗೆ ಮಾತ್ರ ಕೋಟ್ಯಂತರ ರೂ.ಗಳ ಬಾಕಿ ಶುಲ್ಕ ಪಾವತಿಯಾಗಬೇಕಿದೆ.

ಬಸವರಾಜ ಹೂಗಾರ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.