1ರಿಂದ ರೈಲುಗಳ ಸಂಚಾರ ವೇಗ ಹೆಚ್ಚಳ -ವೇಳೆ ಪರಿಷ್ಕರಣೆ


Team Udayavani, May 22, 2022, 11:30 AM IST

3

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಜೂ. 1ರಿಂದ ಕೆಲ ರೈಲುಗಳ ವೇಗವೃದ್ಧಿ ಮತ್ತು ವೇಳೆ ಪರಿಷ್ಕರಣೆ ಮಾಡಲು ನಿರ್ಧರಿಸಿದೆ. ಬೆಂಗಳೂರು-ಕಾರವಾರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16595) ರೈಲು ಸಂಜೆ 6:40ರ ಬದಲು 6:50 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕಾರವಾರ-ಬೆಂಗಳೂರು (16596) ರೈಲು ಬೆಳಗ್ಗೆ 8ರ ಬದಲು 7:15 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕಾರವಾರ-ಹಾಸನ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬೆಂಗಳೂರು-ಕನ್ನೂರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16511) ರೈಲು ರಾತ್ರಿ 9:30ರ ಬದಲು 9:35 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕನ್ನೂರ-ಬೆಂಗಳೂರು (16512) ರೈಲು ಬೆಳಗ್ಗೆ 6:50ರ ಬದಲು 6:30 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕನ್ನೂರ-ಹಾಸನ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮಿರಜ್‌-ಬೆಂಗಳೂರು ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16590) ರೈಲು ಬೆಂಗಳೂರಿಗೆ ಬೆಳಗ್ಗೆ 6:30ರ ಬದಲು 6:15 ಗಂಟೆಗೆ ತಲುಪಲಿದೆ.  ಮಿರಜದಿಂದ ಯಶವಂತಪುರ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿಜಯಪುರ-ಮಂಗಳೂರು ಜಂಕ್ಷನ್‌ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ ಸ್ಪೇಶಲ್‌ (07377) ರೈಲು ಸಂಜೆ 6:15ರ ಬದಲು 6:35 ಗಂಟೆಗೆ ವಿಜಯಪುರದಿಂದ ಹೊರಟು ಬಸವನ ಬಾಗೇವಾಡಿ ರೋಡ್‌ (7:12), ಆಲಮಟ್ಟಿ (7:30), ಬಾಗಲಕೋಟೆ (ರಾತ್ರಿ 8:18), ಗುಳೇದಗುಡ್ಡ ರೋಡ್‌ (8:33), ಬಾದಾಮಿ (8:47), ಹೊಳೆಆಲೂರು (9:11), ಮಲ್ಲಾಪೂರ (9:31), ಗದಗ (10:30), ಹುಬ್ಬಳ್ಳಿ (11:55) ಮಾರ್ಗವಾಗಿ ಮಂಗಳೂರು ಜಂಕ್ಷನ್‌ ತಲುಪಲಿದೆ. ಕರ್ಜಗಿಯಿಂದ ಮಂಗಳೂರು ಜಂಕ್ಷನ್‌ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅರಸೀಕೆರೆ-ಹುಬ್ಬಳ್ಳಿ ನಿತ್ಯ ಸಂಚಾರ ಪ್ಯಾಸೆಂಜರ್‌ ಸ್ಪೇಶಲ್‌ (07367) ರೈಲು ಅರಸೀಕೆರೆಯಿಂದ ಬೆಳಗ್ಗೆ 5:10ರ ಬದಲು 5:30 ಗಂಟೆಗೆ ಹೊರಟು ವೇಳೆ ಪರಿಷ್ಕರಣೆಯೊಂದಿಗೆ ಬಾಣಾವರ, ಕಡೂರು, ಬಿರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಸವಣೂರು ಮಾರ್ಗವಾಗಿ ಎಂದಿನಂತೆ ಮಧ್ಯಾಹ್ನ 12:15 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಜೂ. 4ರಿಂದ ಹುಬ್ಬಳ್ಳಿ-ಯಶವಂತಪುರ ವಾರದ ಎಕ್ಸ್‌ಪ್ರೆಸ್‌ (16544) ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 11:20ರ ಬದಲು 11:30 ಗಂಟೆಗೆ ಹೊರಡಲಿದೆ. ಹಾವೇರಿಯಿಂದ ಯಶವಂತಪುರ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 1ರಿಂದ ಹಜರತ್‌ ನಿಜಾಮುದ್ದೀನ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರ ಸೂಪರ್‌ಫಾಸ್ಟ್‌ ಎಕ್‌ Õಪ್ರಸ್‌ (12630) ರೈಲು ಯಶಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ಜೂ. 2ರಿಂದ ಯಶವಂತಪುರ-ಹಜರತ್‌ ನಿಜಾಮುದ್ದೀನ (12629) ರೈಲು ಯಶವಂತಪುರದಿಂದ ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38), ಹಾವೇರಿ (7:45) ಮಾರ್ಗವಾಗಿ ಹಜರತ್‌ ನಿಜಾಮುದ್ದೀನ ತಲುಪಲಿದೆ. ಹಾವೇರಿ-ಹಜರತ್‌ ನಿಜಾಮುದ್ದೀನ-ಹಾವೇರಿ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮೇ 31ರಿಂದ ಚಂಡಿಗಢ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ಪ್ರೆಸ್‌ (22686) ರೈಲು ಯಶವಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಜೂ. 1ರಿಂದ ಯಶವಂತಪುರ-ಚಂಡಿಗಢ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ ಪ್ರಸ್‌ (22685) ರೈಲು ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಯಶವಂತಪುರದಿಂದ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38) ಮಾರ್ಗವಾಗಿ ಚಂಡಿಗಢ ತಲುಪಲಿದೆ. ದಾವಣಗೆರೆ-ಚಂಡಿಗಂಢ-ದಾವಣಗೆರೆ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 3ರಿಂದ ಪಂಢರಪುರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ (16542) ರೈಲು ಯಶವಂತಪುರದಿಂದ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ಹೊರಡಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ವೇಳೆಯಲ್ಲಿ ಯಾವುದೇ ಬದಲಾವಣೆಗಳಿಲ್ಲವೆಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

1-sasadas

India’s first ever ಬುಲೆಟ್‌ ಟ್ರೈನ್‌ ಟರ್ಮಿನಲ್‌ ಅನಾವರಣ ; Video

1—–ssas

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ  ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

1-wewewqe

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

1-sdsadsad

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

1-sadsdsa-d

BJP ಜನರ ಆಯ್ಕೆ ಎನ್ನುವುದು ಸಾಬೀತು: 3 ರಾಜ್ಯಗಳ ಗೆಲುವಿನ ಬಗ್ಗೆ ಮೋದಿ ಬಣ್ಣನೆ

1-sadasdd

Pro Kabaddi-10; ಗುಜರಾತ್‌ಗೆ ಆಘಾತ: ಪಾಟ್ನಾ ಜಯಭೇರಿ

1-sadasd

Painkiller ‘ಮೆಫ್ತಾಲ್’ ಮಾತ್ರೆ ಅಡ್ಡಪರಿಣಾಮ ಬೀರುತ್ತದೆ: ಸರಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಬಾಂಬ್ ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ: ಸೈಯದ್ ತಾಜಾವುದ್ದೀನ್ ಖಾದ್ರಿ

Hubli; ಬಾಂಬ್ ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ: ಸೈಯದ್ ತಾಜಾವುದ್ದೀನ್ ಖಾದ್ರಿ

Why bother with fake bomb call issue: Satish Jarakiholi

Hubli; ಹುಸಿ ಬಾಂಬ್ ಕರೆ ವಿಚಾರವನ್ನೇ ಹಿಡಿದು ಜಗ್ಗಾಡುವುದು ಯಾಕೆ: ಸತೀಶ್ ಜಾರಕಿಹೊಳಿ

Hubballi; ಕೋಟಿ ಕೋಟಿ ಸುರಿದರೂ ಮುಗಿಯದ ರಸ್ತೆ

Hubballi; ಕೋಟಿ ಕೋಟಿ ಸುರಿದರೂ ಮುಗಿಯದ ರಸ್ತೆ

Government ಕರುನಾಡಿಗೆ ಮರಳಲು: ಕಾಯುತ್ತಿವೆ ದಾಖಲೆಗಳು

Government ಕರುನಾಡಿಗೆ ಮರಳಲು: ಕಾಯುತ್ತಿವೆ ದಾಖಲೆಗಳು

1-asdsad

Hubballi; ಚಾಕು ದಾಳಿಗೆ ಮುಂದಾದ ರೌಡಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

1-sasadas

India’s first ever ಬುಲೆಟ್‌ ಟ್ರೈನ್‌ ಟರ್ಮಿನಲ್‌ ಅನಾವರಣ ; Video

1—–ssas

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ  ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

1-wewewqe

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

cen

Politics: ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌,ಅರ್ಜುನ್‌ ಮುಂಡಾಗೆ ಹೆಚ್ಚುವರಿ ಖಾತೆ

vijayendra R Ashok

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್‌, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.