ಮರೆಯಾಗುತ್ತಿವೆ ದೊಡ್ಡಾಟ-ಸಣ್ಣಾಟ: ರಾಠೊಡ
Team Udayavani, Apr 21, 2022, 11:48 AM IST
ಚಿಂಚೋಳಿ: ಆಧುನಿಕತೆ ಭರಾಟೆಯಲ್ಲಿ ಬೆಳ್ಳಿಪರದೆ, ಟಿವಿ, ಇಂಟರ್ನೆಟ್, ಮೊಬೈಲ್ಗಳಿಂದ ಬಯಲಾಟಗಳು (ದೊಡ್ಡಾಟ- ಸಣ್ಣಾಟ) ಮರೆಯಾಗುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಸುಭಾಶ ರಾಠೊಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಗಾರಂಪಳ್ಳಿ ಗ್ರಾಮದೇವತೆ ಜಾತ್ರೆ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಮಲಕ್ಷ್ಮಣ ವನವಾಸ ಬಯಲಾಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಮ-ಲಕ್ಷ್ಮಣ, ಧುರ್ಯೋಧನ- ಭೀಮನ ಕಾಳಗ, ಬಾಲನಾಗಮ್ಮ, ಸತ್ಯ ಹರಿಶ್ಚಂದ್ರ, ಶ್ರವಣಕುಮಾರ, ಕುಂತಿಪುತ್ರ, ಸತ್ಯವಾನ ಸಾವಿತ್ರಿ, ರೇಣುಕಾ ಯಲ್ಲಮದೇವಿಯಂತ ಪೌರಾಣಿಕ ಬಯಲಾಟಗಳು ಅನೇಕ ವರ್ಷಗಳಿಂದ ಹಳ್ಳಿಗಳಲ್ಲಿ ನಡೆಯುತ್ತಲೇ ಬರುತ್ತಿವೆ. ಈ ಆಧುನಿಕ ಯುಗದಲ್ಲೂ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ನ್ಯಾಯವಾದಿ ಶರಣು ಮೋತಕಪಳ್ಳಿ, ಮಹೇಶ ಗುತ್ತೇದಾರ, ಚಂದ್ರಶೇಖರ ಗುತ್ತೇದಾರ, ಮಲ್ಲಿಕಾರ್ಜುನ ಗುಲಗುಂಜಿ ಬಯಲಾಟ ಕುರಿತು ಮಾತನಾಡಿದರು. ಮುಖಂಡರಾದ ಅನಿಲಕುಮಾರ ಜಮಾದಾರ, ಸಂತೋಷ ಗುತ್ತೇದಾರ, ಸುನೀಲ ದೊಡ್ಡಮನಿ, ನಾಗೇಶ ಗುಣಾಜಿ, ಪವನ ಪಾಟೀಲ, ಬಾಬುರಾವ್ ಗುತ್ತೇದಾರ, ಶ್ರೀಧರ ವಗ್ಗಿ, ಸಂಜೀವಕುಮಾರ ಕಟ್ಟಿಮನಿ, ಮರೆಪ್ಪ,ಗೋಪಾಲ ಕೊರಡಂಪಳ್ಳಿ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್