ಭೂಮಾಪಕರಿಗೆ ಹದ್ದು ಬಸ್ತು ಕಡತ ಹಂಚಲು ಮನವಿ
Team Udayavani, Nov 10, 2021, 11:47 AM IST
ಅಫಜಲಪುರ: ಇಲ್ಲಿನ ಹೈದ್ರಾಬಾದ ಕರ್ನಾಟಕ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ಪರವಾನಗಿ ಭೂಮಾಪಕರಿಗೆ ಹದ್ದುಬಸ್ತು ಕಡತ ಹಂಚಿಕೆ ಮಾಡುವಂತೆ ಹಾಗೂ ಸರ್ಕಾರಿ ಭೂಮಾಪಕರಿಗೆ 11ಇ ಕಡತ ಹಂಚಿಕೆ ಮಾಡುವಂತೆ ಮನವಿ ಸಲ್ಲಿಸ ಲಾಯಿತು.
ಪರವಾನಗಿ ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಕಲ್ಲಯ್ಯ ಕೆ. ಮಠ ಮಾತನಾಡಿ, ಆಯುಕ್ತರ ಆದೇಶದಂತೆ ನಮಗೆ ಹದ್ದುಬಸ್ತು ಕಡತಗಳು ಹಂಚಿಕೆಯಾಗಿವೆ. ಸರ್ಕಾರಿ ಭೂಮಾಪಕರಿಗೆ ನಮ್ಮ ಹಕ್ಕಾದ 11ಇ ಕಡತಗಳು ಹಂಚಿಕೆಯಾಗಿವೆ ಎಂದರು.
2002ನೇ ಇಸ್ವಿಯಿಂದ ಇಲ್ಲಿಯ ವರೆಗೆ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ ಎಲ್ಲ ಆದೇಶಗಳು ಹಾಗೂ ಸುತ್ತೋಲೆಗಳಂತೆ ಕೆಲಸ ನಿರ್ವಹಿಸುತ್ತಲೇ ಬಂದಿದ್ದೇವೆ. ಅನೇಕ ಬಾರಿ 11ಇ ತತ್ಕಾಲ್, ಪೋಡಿ ಅಲಿಗೇಶನ್, ಪೋಡಿ ಮುಕ್ತ ಗ್ರಾಮ ಅಭಿಯಾನದ ಸಂಭಾವನೆ ಹಣ ಪಾವತಿಸಬೇಕೆಂದು 11ಇ ಹಾಗೂ ತಕರಾರರು ಕಡತ, ವಿಲೆ ಮಾಡಲಾದ ಕಡತಗಳನ್ನು ಮೌಖೀಕವಾಗಿ ಹಾಗೂ ಪತ್ರದ ಮೂಲಕ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ ಎಂದು ಹೇಳಿದರು.
ಮನವಿ ಪರಿಗಣಿಸಿ ಹದ್ದುಬಸ್ತು ಕಡತಗಳನ್ನು ಹಂಚಿಕೆ ಮಾಡಿದರೆ ಮಾತ್ರ ಅಳತೆ ಮಾಡಿಕೊಡುತ್ತೇವೆ ಎಂದು ಹೇಳಿದರು. ಮುಖಂಡರಾದ ಅನೀಲ ಪಾಗಾ, ಉಮೇಶ ಕುಂಬಾರ, ಮಾಳಪ್ಪ ಇಂಗಳಗಿ, ರಾಜು ಹಸರಗುಂಡಗಿ, ಹರ್ಷ ಕುಲಕರ್ಣಿ, ರಾಘವೇಂದ್ರ ರಾಠೊಡ, ದಾನಯ್ಯ ಹಿರೇಮಠ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು