ಬಾಳೆಹಣ್ಣು ತಿಂದರೆ ಅನಾರೋಗ್ಯ ಗ್ಯಾರಂಟಿ!

ಅತಿ ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಿದ ಬಾಳೆಹಣ್ಣು ಅಪಾಯಕಾರಿ

Team Udayavani, Apr 12, 2020, 1:19 PM IST

12-April-09

ಮುದ್ದೇಬಿಹಾಳ: ಕಪ್ಪುಬಣ್ಣಕ್ಕೆ ತಿರುಗಿರುವ ಬಾಳೆಹಣ್ಣು. ಸಿಪ್ಪೆ ತೆಗೆದಾಗ ಹಣ್ಣಿನೊಳಗೆ ಇಂಜೆಕ್ಟ್ ಮಾಡಿರುವಂತೆ ಕಂಡುಬಂರುತ್ತಿರುವ ಕಪ್ಪುಬಣ್ಣದ ರಂಧ್ರಗಳು.

ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆ ಕಳಪೆ ಮಟ್ಟದ, ಅತಿಯಾದ ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಿದ ಬಾಳೆಹಣ್ಣು ವ್ಯಾಪಕವಾಗಿ ಮಾರಾಟವಾಗತೊಡಗಿದ್ದು, ಆರೋಗ್ಯ ವೃದ್ಧಿಸಬೇಕಿರುವ ಹಣ್ಣು ಸೇವನೆಯಿಂದಲೇ ಅನಾರೋಗ್ಯ ಕಾಡುವ ಆತಂಕವಿದ್ದು, ಗ್ರಾಹಕರು ಹಣ್ಣು ಖರೀದಿಸುವ ಮುನ್ನ ಎಚ್ಚರ ವಹಿಸಬೇಕಿದೆ.

ಕೊರೊನಾದಿಂದಾಗಿ ಲಾಕ್‌ ಡೌನ್‌ ಆಗಿರುವ ಪರಿಣಾಮ ಜನರು ತಳ್ಳುಗಾಡಿಯಲ್ಲಿ ಬಡಾವಣೆಗೆ ಬರುವ ಮಾರಾಟಗಾರರಿಂದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಬಾಳೆಹಣ್ಣು ಉಪಯುಕ್ತ, ಆರೋಗ್ಯವರ್ಧಕವೆಂದು ತಿಳಿದಿರುವ ಅನೇಕರು ಸೇವಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇದರ ದುರ್ಲಾಭ ಪಡೆಯುತ್ತಿರುವ ಕೆಲವು ಸಗಟು ಮಾರಾಟಗಾರರು ಕೃತಕವಾಗಿ ಹಣ್ಣುಮಾಡಿದ ಬಾಳೆಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಹಣದಾಸೆಗೆ ಕೆಲವು ಹಣ್ಣು ಮಾರಾಟಗಾರರು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ಇಲ್ಲಿನ ಗ್ರಾಹಕರೊಬ್ಬರು ಬೆಳಗ್ಗೆ ಖರೀದಿಸಿದ್ದ ಬಾಳೆಹಣ್ಣು ಮರುದಿನವೇ ಸಿಪ್ಪೆ ಹಳದಿ ಬಣ್ಣ ಕಳೆದುಕೊಂಡು ಕಂದುಬಣ್ಣಕ್ಕೆ ತಿರುಗಿದೆ. ಸಿಪ್ಪೆ ಸುಲಿದು ನೋಡಿದರೆ ತಿರುಳಿನಲ್ಲಿ ಚುಕ್ಕೆರೂಪದ ಸಣ್ಣ ಪ್ರಮಾಣದ ಕಪ್ಪು ರಂಧ್ರಗಳು ಕಂಡುಬಂದಿದ್ದು, ಗ್ರಾಹಕರಲ್ಲಿ ಇನ್ನೂ ಆತಂಕ ಹೆಚ್ಚಿಸಿದೆ. ಇಂಥದ್ದೇ ಅನುಭವ ಹಲವರಿಗೆ ಆಗಿದ್ದು, ಕಾಯಿ ಬೇಗ ಮಾಗಲು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕದಲ್ಲಿ ಅದ್ದಿರಬಹುದು. ಅಥವಾ ಹಣ್ಣಿನೊಳಕ್ಕೆ ನೇರವಾಗಿ ಇಂಜೆಕ್ಷನ್‌ನ ಮೂಲಕ ರಾಸಾಯನಿಕ ಬಿಟ್ಟು ಬೇಗ ಹಣ್ಣಾಗುವಂತೆ ಮಾಡಿರಬಹುದು.

ತೋಟದಿಂದ ತರುವ ಕಾಯಿಯನ್ನು ಹಣ್ಣು ಮಾಡಲು ಸಗಟು ಮಾರಾಟಗಾರರು ಮಿಥೈಲ್‌ ಅಥವಾ ಕ್ಯಾಲ್ಸಿಯಂ ಕಾಬೈìಡ್‌ ಬಳಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಇವುಗಳ ಪ್ರಮಾಣ ಹೆಚ್ಚಾದಲ್ಲಿ ಹೃದಯ ರೋಗ ಹಾಗೂ ಕಿಡ್ನಿ ಅಪಾಯ ಸಂಭವವಿದೆ. ಎರಡೂ ಪ್ರಕರಣಗಳಲ್ಲಿ ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರಿಂದಲೇ ಬಾಳೆಹಣ್ಣು ಕಂದು ಬಣ್ಣಕ್ಕೆ ತಿರುಗಿರಬಹುದು. ಇದನ್ನು ತಡೆಗಟ್ಟಿ ಜನರ ಆರೋಗ್ಯ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ .

ಬಾಳೆಹಣ್ಣಿನಲ್ಲಿ ಕಪ್ಪುರಂಧ್ರ ಕ್ಯಾಲ್ಸಿಯಂ ಕಾರ್ಬೈಡ್‌ ಇಂಜೆಕ್ಟ್ ಮಾಡಿದ್ದರ ಸಂಕೇತ ಇರಬಹುದು. ಇದು ಮಾನವ ದೇಹಕ್ಕೆ ವಿಷಕಾರಿ. ಜನರು ಇಂಥ ಬಾಳೆಹಣ್ಣು ಸೇವನೆಯಿಂದ ದೂರ ಇರುವುದು ಉತ್ತಮ. ಸಿಪ್ಪೆ ಸುಲಿದ ಮೇಲೆ ಹಣ್ಣು ನೋಡದೆ ತಿನ್ನಬಾರದು.
ಡಾ| ಉತ್ಕರ್ಷ, ನಾಗೂರ

ಕೃತಕವಾಗಿ ಮಾಗಿಸಲು ಬಳಸುವ ಮಿಥೈಲ್‌, ಕ್ಯಾಲ್ಸಿಯಂ ಕಾರ್ಬೈಡ್‌ ಸುಲಭವಾಗಿ ದೊರೆಯುತ್ತಿಲ್ಲ. ಆದರೂ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಶೀಘ್ರ ತನಿಖೆ ನಡೆಸಿ ದಂಧೆ ಮಟ್ಟಹಾಕುತ್ತೇವೆ.
ಶಂಕರಗೌಡ ಕಂತಲಗಾಂವಿ,
ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿ, ಮುದ್ದೇಬಿಹಾಳ

ಡಿ.ಬಿ.ವಡವಡಗಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.