ಸಂಕಷ್ಟಕ್ಕೆ ಪೊಲೀಸ್ ಇಲಾಖೆ ಸ್ಪಂದನೆ: ಇಶಾ
Team Udayavani, Mar 25, 2022, 9:59 AM IST
ಜೇವರ್ಗಿ: ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೇ ಘನತೆ, ಗೌರವ, ಮರ್ಯಾದೆ ಹಾಳಾಗುತ್ತದೆ ಎನ್ನುವ ಕೀಳರಿಮೆ ಬಿಡಿ, ನೊಂದವರು, ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು.
ತಾಲೂಕಿನ ಗುಡೂರ ಎಸ್.ಎ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್’ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಇಬ್ಬರು ಬೀಟ್ ಪೊಲೀಸರನ್ನು ನೇಮಿಸಲಾಗುವುದು. ರಾತ್ರಿ ಪೆಟ್ರೋಲಿಂಗ್ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಸಿಪಿಐ ಶಿವಪ್ರಸಾದ ಮಠದ್ ಮಾತನಾಡಿ, ಪೊಲೀಸರ ಜತೆ ಒಡನಾಟ ಹೊಂದಲು, ಮುಕ್ತವಾಗಿ ಮಾತನಾಡಲು ಈ ವಿನೂತನ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕಲಬುರಗಿಯಲ್ಲಿ ಎಸ್ಪಿ ಇಶಾ ಪಂತ್ ಹಾಕಿಕೊಂಡಿದ್ದಾರೆ ಎಂದರು.
ಪಿಎಸ್ಐ ಸಂಗಮೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗಂಗಮ್ಮ ಸಾಹೇಬಗೌಡ ಬುಟ್ನಾಳ, ಪಿಡಿಒ ಬಿ.ಆರ್. ಪಾಟೀಲ, ಮುಖಂಡರಾದ ಮಲ್ಲೇಶಗೌಡ ಪೊಲೀಸ್ ಪಾಟೀಲ, ಮೈಲಾರಿ ಹೊನಗುಂಟಿ, ಬಸವರಾಜರೆಡ್ಡಿ ಗದಗಿ, ಸಿದ್ಧು ಪೂಜಾರಿ, ಸುಭಾಷ ದೊಡ್ಮನಿ, ಮಹಾಂತೇಶ ಪವಾರ, ದೊಡ್ಡಪ್ಪ ಪೂಜಾರಿ, ಅಶೋಕ ಪಾಟೀಲ, ಶರಣು ವಡಗೇರಿ, ಕಮಲಾಬಾಯಿ ಖೂಬು, ಸಾವಿತ್ರಿಬಾಯಿ ಪವಾರ, ಕಮಲಾಬಾಯಿ ರಾಠೊಡ, ಅಮರಪ್ಪ ತಳವಾರ, ಬಸವರಾಜ ವಡಗೇರಿ, ಈರಣ್ಣ ಜವಳಿ, ದೇವಿಂದ್ರ ಗುತ್ತೇದಾರ ಅಣಬಿ, ಸದ್ಧಾಮ ಜಮಾದಾರ, ಹಣಮಂತ ಸುಬೇದಾರ, ದೌಲಪ್ಪ ಚನ್ನೂರ, ಮರೆಪ್ಪ ನಾಗರಾಳ ಮತ್ತಿತರರು ಇದ್ದರು.
ಇದೆ ವೇಳೆ ಪ್ರತಿಭಾವಂತ ಇಬ್ಬರು ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕು.ಭಾಗ್ಯಶ್ರೀ ಪ್ರಾರ್ಥನಾಗೀತೆ ಹಾಡಿದರು, ಅಶೋಕ ಪಾಟೀಲ ಸ್ವಾಗತಿಸಿದರು, ಗಂಗಾಧರ ಮಣೂರ ನಿರೂಪಿಸಿ, ವಂದಿಸಿದರು.
ಕಲಬುರಗಿ ಕಾಳಜಿ ತಂಡ, ಜೇವರ್ಗಿ ಪೊಲೀಸರಿಂದ ಮಹಿಳಾ ದೌರ್ಜನ್ಯ, ಕೋಮುವಾದ, ಮಾದಕವಸ್ತು, ಟ್ರಾಫಿಕ್, ಗಾಂಜಾ ಸೇವನೆ ಕುರಿತು ರೂಪಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ಐದು ಬಾರಿ ನಡೆದಿದೆ ಶಾಲೆಯಲ್ಲಿ ಕಳ್ಳತನ ಗುಡೂರ ಎಸ್.ಎ ಗ್ರಾಮದ ಸರ್ಕಾರಿ ಶಾಲೆ ಕೋಣೆಗಳ ಬಾಗಿಲ ಕೀಲಿಯನ್ನು ಐದು ಬಾರಿ ಮುರಿದು ಕಂಪ್ಯೂಟರ್, ಸಿಪಿಒ, ಕ್ರೀಡಾ ಸಾಮಗ್ರಿ, ಸೈಕಲ್ಗಳು, ಮಕ್ಕಳ ಶೂ, ಸಾಕ್ಸ್ ಸೇರಿದಂತೆ ಅನೇಕ ಉಪಯುಕ್ತ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಅಲ್ಲದೇ ಶಾಲೆ ಕೋಣೆ ಆವರಣದಲ್ಲೇ ರಾತ್ರಿ ವೇಳೆ ಇಸ್ಪೀಟ್, ಮಧ್ಯಪಾನ ಮಾಡಲಾಗುತ್ತಿದೆ. ಗ್ರಾಮದ ಕಿರಾಣಿ, ಹೋಟೆಲ್ಗಳಲ್ಲಿಯೂ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆಗೆ ಬರುವಂತಾಗಿದೆ ಎಂದು 8ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ ಸಂಗಣ್ಣ ಎಸ್ಪಿಗೆ ಮಾಹಿತಿ ನೀಡಿದಳು.
ಶಾಲೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಸುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್