ಸಂವಿಧಾನ ದುರ್ಬಳಕೆ ತಡೆಯಿರಿ: ಡಾ| ದೊಡ್ಮನಿ
Team Udayavani, Nov 27, 2021, 12:39 PM IST
ಜೇವರ್ಗಿ: ಬಹುಭಾಷಾ, ಬಹು ಧರ್ಮ, ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ರಕ್ತರಹಿತ ಕ್ರಾಂತಿ ತರುವ ಮಹೋನ್ನತ ಆದರ್ಶ ಹೊಂದಿದ ಶ್ರೇಷ್ಠ ಸಂವಿಧಾನದ ದುರ್ಬಳಕೆ ತಡೆದರೇ, ನಾವೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಉಪನ್ಯಾಸಕ ಡಾ| ಅಶೋಕ ದೊಡ್ಮನಿ ಹೇಳಿದರು.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ದೇಶದ ಅಭಿವೃದ್ಧಿಗೆ ಹಾಗೂ ಇಲ್ಲಿನ ಜನರ ಬದುಕು ಚೆನ್ನಾಗಿರಲೆಂದು ಭಾರತದ ಸಂವಿಧಾನ ರಚಿಸಿದ್ದಾರೆ ಎಂದರು.
ಸಂವಿಧಾನವನ್ನು 26ನೇ ಜನವರಿ 1950ರಂದು ಭಾರತ ಒಪ್ಪಿಕೊಂಡಿತು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿಗಬೇಕೆಂದು ಅಂಬೇಡ್ಕರ್ ಉತ್ತಮ ಸಂವಿಧಾನ ರಚಿಸಿದ್ದಾರೆ. ಅಲ್ಲದೇ ದೇಶದ ಸಾಮಾಜಿಕ, ಆರ್ಥಿಕ, ಬಡತನ, ಅನಕ್ಷರತೆ, ಮೂಢನಂಬಿಕೆಗಳನ್ನು ಸರಿಪಡಿಸಲು ಅನೇಕ ಹೋರಾಟ ನಡೆಸಿದ್ದರು ಎಂದು ಹೇಳಿದರು.
ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲೀಕ್ ಗಾಯಕ್ವಾಡ್, ಪ್ರಭಾಕರ ಸಾಗರ, ಬಸಣ್ಣ ಸರಕಾರ, ಸಿದ್ರಾಮ ಕಟ್ಟಿ, ಶ್ರೀಮಂತ ಧನಕರ್, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ದೇವಿಂದ್ರ ವರ್ಮಾ, ಶಿವಶರಣ ಮಾರಡಗಿ, ಬಾಗಣ್ಣ ಸಿದ್ನಾಳ, ಸಿದ್ಧು ಜನಿವಾರ, ಪಿರಪ್ಪ ರೆವನೂರ, ವಿಶ್ವರಾಧ್ಯ ಮಾಯೆ, ಮಹೇಶ ಕೊಕೀಲೆ, ಶರಣಪ್ಪ ಲಖಣಾಪುರ, ಸಂಗು ಹರನೂರ, ಮಿಲಿಂದ ಸಾಗರ, ಪ್ರಸನ್ಕುಮಾರ ಸಿಂಗೆ, ವಿಶಾಲ ಕುಲಾಲಿ, ಮೌನೇಶ ಹಂಗರಗಿ, ವಿಶ್ವ ಆಲೂರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ