ಗುರು-ಗೆಳೆತನ ಅಮೂಲ್ಯ ಆಸ್ತಿ: ತಾಹೇರ್
Team Udayavani, Feb 10, 2022, 12:27 PM IST
ವಾಡಿ: ಶಾಲೆಗೆ ಕಳುಹಿಸಿದ ಹೆತ್ತವರು, ಅಕ್ಷರ ಕಲಿಸಿದ ಗುರುಗಳು ಬದುಕಿನ ಭವಿಷ್ಯ ಬರೆದ ರತ್ನಗಳಾದರೆ, ಕೂಡಿ ಆಡಿದ ಬಾಲ್ಯದ ಗೆಳೆಯರು ಜೀವನದ ಅಮೂಲ್ಯ ಆಸ್ತಿಗಳಿದ್ದಂತೆ ಎಂದು ಸ್ಥಳೀಯ ಸರ್ಕಾರಿ ಎಂಪಿಎಸ್ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಂ.ಡಿ.ತಾಹೇರ್ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 1991-92ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳು, ಬಾಲ್ಯದ ಗೆಳೆಯರ ಬಳಗ ವೇದಿಕೆಯಡಿ ಅಕ್ಷರ ಕಲಿಸಿ ನಿವೃತ್ತಿ ಹೊಂದಿದ ಗುರುಗಳಿಗಾಗಿ ಏರ್ಪಡಿಸಲಾಗಿದ್ದ ಗುರುವಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕರು ಎಂದರೆ ರಾಷ್ಟ್ರದ ತಳಪಾಯವಿದ್ದಂತೆ. ವಿದ್ಯಾರ್ಥಿಗಳು, ಯುವಜನರು ಈ ದೇಶದ ಭವಿಷ್ಯ. ಈ ಯುವಶಕ್ತಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದ ಆಸ್ತಿಯಾಗಿ ನಿಲ್ಲಬೇಕು ಎಂದರು.
ನಿವೃತ್ತ ಶಿಕ್ಷಕ ವಸಂತ ಕಟ್ಟಿಮನಿ ಮಾತನಾಡಿ, ದಿಕ್ಕಿಗೊಬ್ಬರಂತೆ ಹಂಚಿ ಹೋದ ಶಿಕ್ಷಕರನ್ನು ಮತ್ತು ಸಹಪಾಟಿ ಗೆಳೆಯರನ್ನು ಕರೆದು ಒಂದೆಡೆ ಸೇರಿಸಿ ಸತ್ಕರಿಸುವ ಮೂಲಕ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಪರಿ ಮೆಚ್ಚುವಂತಹದ್ದು ಎಂದರು.
ಹಳೆಯ ವಿದ್ಯಾರ್ಥಿಗಳಿಂದ ಆತ್ಮೀಯ ಸನ್ಮಾನ ಸ್ವೀಕರಿಸಿದ ಗಣಿತ ಶಿಕ್ಷಕಿ ಲಕ್ಷ್ಮೀಬಾಯಿ ಕಟ್ಟಿಮನಿ, ವಿಜ್ಞಾನ ಶಿಕ್ಷಕಿ ಇಂದ್ರಾಬಾಯಿ ರಾಠೊಡ ಮಾತನಾಡಿ, ನಿವೃತ್ತಿಯಾದ ನಮ್ಮನ್ನು ಹುಡುಕಿ, ಮರಳಿ ಶಾಲೆಗೆ ಕರೆತರುವ ಮೂಲಕ ಭಾವನಾ ಲೋಕದಲ್ಲಿ ಮುಳುಗಿಸಿದ್ದೀರಿ ಎಂದರು.
ಕಲಬುರಗಿ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಂಡ ಜೇವರ್ಗಿ ತಾಲೂಕಿನ ಬಿರಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಎಂ. ವೀರೇಶ ಅವರನ್ನು ಬಾಲ್ಯದ ಗೆಳೆಯರ ಬಳಗದಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಎಂಪಿಎಸ್ ಶಾಲೆಯ ಹಾಲಿ ಮುಖ್ಯಶಿಕ್ಷಕರಾದ ಭಗವಾನ ದಂಡಗುಲಕರ, ಗೀತಾ ಠಾಕೂರ, ಯಾಸ್ಮೀನ್, ಆಲಿಯಾಬೇಗಂ, ಶಮಶದಾ, ಬಾಲ್ಯದ ಗೆಳೆಯರ ಬಳಗದ ನಾಗರಾಜ ಗೌಡಪ್ಪನೋರ, ದೇವಿಂದ್ರ ದೊಡ್ಡಮನಿ, ಗುರುಮೂರ್ತಿ ಜ್ಯೋಶಿ, ಗುಂಡಪ್ಪ ಹೇರೂರ, ಮಹಾಂತೇಶ ಬಿರಾದಾರ, ಮಹ್ಮದ್ ವಸೀಲ್, ಪಾಂಡುರಂಗ ಕಾನಕುರ್ತೆ, ರಮೇಶ ಬಡಿಗೇರ, ಮರೆಪ್ಪ ಬುಕನಾಳ, ಲಕ್ಷ್ಮೀಕಾಂತ, ಚಂದ್ರು, ಇಲಿಯಾಸ್, ಮಲ್ಲಿಕಾರ್ಜುನ ಚಿಟೇಲಕರ, ರಾಕೇಶ, ನೆಹರು, ಮಲ್ಲಿಕಾರ್ಜುನ, ಮೋತಿಲಾಲ ಜಾಧವ, ಸುನೀಲ ರಾಠೊಡ, ವೀರಣ್ಣ ಯಾರಿ, ಪ್ರಕಾಶ ಚಂದನಕೇರಿ, ಕಾಶೀನಾಥ ಶೆಟಗಾರ, ಚಂದ್ರಕಾಂತ ಬೆಣ್ಣೂರ, ಆನಂದ ಇಂಗಳಗಿ, ಫ್ರಾನ್ಸಿಸ್, ಬಸವರಾಜ ನಾಟೀಕಾರ ಪಾಲ್ಗೊಂಡಿದ್ದರು. ಮಡಿವಾಳಪ್ಪ ಹೇರೂರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ