Hunsur: ಭಾರೀ ಮಳೆಗೆ ಮನೆ ಗೋಡೆ, ಮೇಲ್ಚಾವಣಿ ಹಾನಿ; ನಷ್ಟ
Team Udayavani, Oct 10, 2023, 11:23 AM IST
ಹುಣಸೂರು: ಭಾರೀ ಮಳೆಗೆ ನಗರದ ಮೂರು ಮನೆಗಳಿಗೆ ಹಾನಿಯಾದ ಘಟನೆ ಬ್ರಾಹ್ಮಣರ ಬಡಾವಣೆಯಲ್ಲಿ ಆ.9ರ ಸೋಮವಾರ ಸಂಜೆ ಸಂಭವಿಸಿದೆ.
ಮದುಸೂಧನ್ ಎಂಬವರು ಮನೆಗೋಡೆ ಬಾಗಶಃ ಬಿದ್ದು ಹೋಗಿದೆ.
ಈ ಮನೆಯ ಪಕ್ಕದ ಕುಮಾರಿ ಎಂಬವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆಯೇ ಮೇಲ್ಚಾವಣಿ ಕುಸಿದು ಬಿದ್ದಿದ್ದು ಈಕೆ ಹೊರಗೋಡಿ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆಯ ಪಾತ್ರೆ ಸೇರಿದಂತೆ ಪದಾರ್ಥ,ದಿನಸಿ ಸಾಮಗ್ರಿಗಳು ಹಾಳಾಗಿದೆ.
ಇದಕ್ಕೆ ಹೊಂದಿಕೊಂಡಂತಿರುವ ಆರ್.ಆರ್. ಫಾಸ್ಟ್ ಫುಡ್ ಮಾಲಿಕ ಅಶೋಕ್ ಎಂಬವರ ಮನೆ ಮೇಲ್ಚಾವಣಿ ಕುಸಿದು ಬಿದ್ದು, ದಿನಸಿ ಪದಾರ್ಥ, ಗ್ರೈಂಡರ್, ಪಾತ್ರೆಗಳು ನಜ್ಜು ಗುಜ್ಜಾಗಿದ್ದು ಸಾಕಷ್ಟು ನಷ್ಟವಾಗಿದೆ.
ಸಂಕಷ್ಟಕ್ಕೊಳಗಾದ ಮನೆಯವರೆಲ್ಲರೂ ಬಡವರಾಗಿದ್ದು, ತಾಲೂಕು ಆಡಳಿತ ಸೂಕ್ತ ಪರಿಹಾರ ಕಲ್ಪಿಸುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು