ಪಡಿತರ ದಾಸ್ತಾನು ಪರಿಶೀಲನೆ
ಲೆಕ್ಕಪತ್ರ ನಮೂದಿಸದ ಅಧಿಕಾರಿಗಳಿಗೆ ಡೀಸಿ ತರಾಟೆ
Team Udayavani, Apr 23, 2020, 3:39 PM IST
ಚಾಮರಾಜನಗರ: ನಗರದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಉಗ್ರಾಣಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ದಿಢೀರ್ ಭೇಟಿ ನೀಡಿ ಪಡಿತರ ಆಹಾರ ಧಾನ್ಯಗಳ ದಾಸ್ತಾನು ಪರಿಶೀಲಿಸಿದರು. ಅನೀಕ್ಷಿತವಾಗಿ ಆಹಾರ ನಿಗಮದ ಉಗ್ರಾಣಕ್ಕೆ ಭೇಟಿಕೊಟ್ಟ ಜಿಲ್ಲಾಧಿಕಾರಿ, ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡಿರುವ ಪಡಿತರ ಪ್ರಮಾಣ, ಎತ್ತುವಳಿ ವಿವರಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಪರಾಮರ್ಶಿಸಿದರು. ವಿತರಣೆ, ಎತ್ತುವಳಿ ದಾಸ್ತಾನು ಮಾಡಿರುವ ಲೆಕ್ಕಪತ್ರ, ಭೌತಿಕವಾಗಿ ಹಾಗೂ ಲಿಖೀತವಾಗಿ ವಹಿಗಳಲ್ಲಿ ನಮೂದು ಮಾಡದೇ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆನ್ಲೈನ್ ಮೂಲಕ ದಾಖಲು ಎಂಬ ಸಬೂಬು ಹೇಳುವುದು ಬೇಡ. ಪ್ರತಿ ವಿತರಣೆ ಹಾಗೂ ದಾಸ್ತಾನು ಬಗ್ಗೆ ಲಿಖೀತವಾಗಿ ನಿಯಮಾನುಸಾರ ನಮೂದು ಮಾಡುವಂತೆ ತಾಕೀತು ಮಾಡಿದರು. ಸ್ಟಾಕ್ ರಿಜಿಸ್ಟರ್ನ್ನು ಇನ್ನು ಮುಂದೆ ಆಯಾ ದಿನವೇ ದಾಸ್ತಾನು ವಿತರಣೆ ದಾಖಲು ಮಾಡಬೇಕು. ಲೆಕ್ಕಪತ್ರದಲ್ಲಿ ಗೊಂದಲವಿರಬಾರದು. ಆಹಾರ ಇಲಾಖೆಯ ಶಿರಸ್ತೇದಾರರು ಆಗಿಂದಾಗ್ಗೆ ಗೋದಾಮಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಾಚಪ್ಪ, ತಹಶೀಲ್ದಾರ್ ಮಹೇಶ್, ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಾಲಕೃಷ್ಣ, ಆಹಾರ ಶಿರಸ್ತೇದಾರ್ ಲಕ್ಷ್ಮೀ, ಗೋದಾಮು ವ್ಯವಸ್ಥಾಪಕ ಲಕ್ಕೇಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ