
ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ
Team Udayavani, May 30, 2023, 10:15 PM IST

ಹುಣಸೂರು: ಗುಡುಗು, ಸಿಡಿಲು, ಬಿರುಗಾಳಿ ಸಹಿತದ ಬಿರುಸಿನ ಮಳೆಗೆ ಮೂರು ಜಾನುವಾರುಗಳು ಬಲಿಯಾಗಿದ್ದರೆ. 5 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮನೆ-ಮಳಿಗೆಗಳಿಗೆ ನೀರು ನುಗ್ಗಿದೆ, ಅಲ್ಲಲ್ಲಿ ಮರು ಬಿದ್ದು ವಿದ್ಯುತ್ ಕಂಬ-ವಾಹನ ಜಖಂಗೊಂಡಿದೆ. ಹೊಲದ ಮಣ್ಣನ್ನು ಹೊತ್ತೊಯ್ದಿದೆ.
ಸಿಡಿಲಿಗೆ ಹನಗೋಡಿನ ನಾಗೇಗೌಡರಿಗೆ ಸೇರಿದ ಹೋರಿ, ನಾಸೀರ್ ಪಾಷಾರ ಹಸು, ಮುದಗನೂರಿನ ಸೂರೇಗೌಡರ ಹಸು ಬಲಿಯಾಗಿದ್ದು, ಸುಮಾರು 2 ಲಕ್ಷರೂ ಲುಕ್ಸಾನಾಗಿದ್ದು, ಮೇಯಲು ಬಿಟ್ಟಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾಗೂ ಡಾ.ದರ್ಶನ್ ಸಾವನ್ನಪ್ಪಿದ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಗ್ರಾಮಲೆಕ್ಕಾಧಿಕಾರಿ ಕರಿಬಸಪ್ಪ ಭೇಟಿ ನೀಡಿ ಪರಿಶೀಲಿಸಿ ಹಾನಿ ಬಗ್ಗೆ ವರದಿ ಸಲ್ಲಿಸಿದ್ದಾರೆ.
ಹನಗೋಡು ಸರ್ಕಲ್ ಬಳಿಯ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನದ ಮೇಲೆ ಮರದ ಕೊಂಬೆ ಬಿದ್ದು ಆಕ್ಸಲ್ ತುಂಡಾಗಿದ್ದು, ವಾಹನದ ಬಾಡಿ ಜಖಂಗೊಂಡಿದೆ. ಆಂಜನೇಯ ದೇವಾಲಯದ ಬಳಿಯ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಸೋಮಪ್ಪರಿಗೆ ಸೇರಿದ ಮನೆ ಆರ್.ಸಿ.ಸಿ.ಮೇಲೆ ಸಾಕಷ್ಟು ನೀರು ಸಂಗ್ರಹವಾಗಿತ್ತು.
ಧರೆಗುರುಳಿದ ವಿದ್ಯುತ್ ಕಂಬಗಳು: ಮಾಜಿ ಗುರುಪುರದ ಜಯಮ್ಮರ ಜಮೀನಿನಲ್ಲಿದ್ದ ಬೃಹತ್ ಮರ ವಿದ್ಯುತ್ ಲೈನ್ ಮೇಲೆ ಬಿದ್ದು, ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, ಹನಗೋಡಿನಲ್ಲೂ ಸಹ ಮೂರು ಕಂಬಗಳು ಮುರಿದು ಬಿದ್ದಿದ್ದು ಚೆಸ್ಕಾಂ ಸಿಬ್ಬಂದಿಗಳು ದುರಸ್ತಿ ಕೈಗೊಂಡಿದ್ದಾರೆಂದು ಎಇಇ ಸಿದ್ದಪ್ಪ ಮಾಹಿತಿ ನೀಡಿದ್ದಾರೆ. ಇನ್ನು ಹಾರಂಗಿ ನಾಲೆಯಲ್ಲಿ ಗ್ರಾಮದ ವಿವಿಧ ಬಡಾವಣೆಯ ಅಪಾರ ಪ್ರಮಾಣದ ಚರಂಡಿ ನೀರು ಹರಿದು ಮುರಳಿಧರ್ರಿಗೆ ಸೇರಿದ ಜಮೀನಿನ ಮೇಲೆ ಹರಿದು ಇತ್ತೀಚೆಗಷ್ಟೆ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಸಹಿತ ಅಪಾರ ಪ್ರಮಾಣದಲ್ಲಿ ಮಣ್ಣನ್ನು ಹೊತ್ತು ಹಾಕಿದೆ.
ಮನೆಯ ಮೇಲ್ಚಾವಣಿ ಹಾನಿ;
ಹಿಂಡಗುಡ್ಲು ಗ್ರಾಮದ ಶಿವಯ್ಯರ ಮಗ ರಾಜೇಶ್ರ ಮನೆ ಮೇಲ್ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಮನೆಯವರು ಒಳಗಿದ್ದ ವೇಳೆಯೇ ಬಿರುಗಾಳಿಗೆ ಹಾರಿ ಹೋಗಿ ಮನೆಯಲ್ಲಿದ್ದ ದವಸ ಧಾನ್ಯ ಮಳೆ ನೀರಿನಲ್ಲಿ ನೆನೆದು ಹೋಗಿವೆ. ಆದರೆ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Karnataka Bandh: ಕಾವೇರಿಗಾಗಿ ಕಾಫಿನಾಡಲ್ಲಿ ತೀವ್ರಗೊಂಡ ಹೋರಾಟ.. ಅರೆಬೆತ್ತಲೆ ಉರುಳು ಸೇವೆ
MUST WATCH
ಹೊಸ ಸೇರ್ಪಡೆ

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Yash 19; ರಾಜ್ಯೋತ್ಸವಕ್ಕೆ ಯಶ್ ಹೊಸ ಚಿತ್ರ ಘೋಷಣೆ?