![court](https://www.udayavani.com/wp-content/uploads/2024/07/court-7-415x231.jpg)
ಕೈ ಸಂಸದನಲ್ಲಿ 220 ಕೋ.ರೂ. ನೋಟು ಕಂತೆ!
156 ಚೀಲಗಳಲ್ಲಿ ಪೇರಿಸಿಟ್ಟಿತ್ತು ರಾಶಿ ರಾಶಿ ಕರೆನ್ಸಿ
Team Udayavani, Dec 9, 2023, 1:00 AM IST
![jharkhand mon](https://www.udayavani.com/wp-content/uploads/2023/12/jharkhand-mon-620x349.jpg)
ಹೊಸದಿಲ್ಲಿ: ಒಂದಲ್ಲ ಎರಡಲ್ಲ, ಬರೋಬ್ಬರಿ 220 ಕೋಟಿ ರೂ.! ಇದು ಝಾರ್ಖಂಡ್ನಿಂದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮತ್ತು ಅಬಕಾರಿ ಉದ್ಯಮಿ ಧೀರಜ್ ಪ್ರಸಾದ್ ಸಾಹೂ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳಲ್ಲಿ ಪತ್ತೆಯಾದ ನೋಟಿನ ಕಂತೆಗಳ ಮೌಲ್ಯ.
ಒಡಿಶಾದಲ್ಲಿ ಅವರಿಗೆ ಸೇರಿದ ಬೋಧ್ ಡಿಸ್ಟಿಲರಿ ಪ್ರೈ.ಲಿ. (ಬಿಡಿಪಿಎಲ್)ಯ ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಿಂದ ನಿರಂತರವಾಗಿ ದಾಳಿ ನಡೆಸಿ ಶೋಧ ನಡೆಸುತ್ತಿದ್ದ ವೇಳೆ ರಾಶಿ ರಾಶಿ ನೋಟುಗಳು ಪತ್ತೆಯಾಗಿವೆ. ಅವರ ನಿವಾಸದಲ್ಲಿ 500 ರೂ., 200 ರೂ., 100 ರೂ. ನೋಟುಗಳನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಕಬ್ಬಿಣದ
ರ್ಯಾಕ್ನಲ್ಲಿ 156 ಬ್ಯಾಗ್ಗಳಲ್ಲಿ ಸಾಲಾಗಿ ಪೇರಿಸಿ ಇರಿಸಲಾಗಿತ್ತು. ರಾಶಿ ನೋಟು ಎಣಿಸುವುದಕ್ಕಾಗಿ ಹಲವು ನೋಟು ಎಣಿಕೆ ಯಂತ್ರಗಳನ್ನು ಅಧಿಕಾರಿಗಳು ಬಳಸಬೇಕಾಯಿತು.
ಗುರುವಾರ ವಂತೂ ನೋಟು ಎಣಿಸಿ ದಣಿದ ಒಂದು ಯಂತ್ರ ಕೆಟ್ಟು ಹೋಗಿ ಬೇರೊಂದನ್ನು ತರಿಸಬೇಕಾಯಿತು. ಪಶ್ಚಿಮ ಬಂಗಾಲ, ಒಡಿಶಾ, ಜಾರ್ಖಂಡ್ಗಳಲ್ಲಿ ಸಂಸದ ಸಾಹು ಅವರ ಕುಟುಂಬ ಸದಸ್ಯರಿಗೆ ಸೇರಿದ ಇತರ ಉದ್ಯಮಗಳ ಮೇಲೆ ಕೂಡ ದಾಳಿ ನಡೆಸಿ ಶೋಧಿಸಲಾಗಿದೆ.
ಸಿಬಿಐ ತನಿಖೆಗೆ ಒತ್ತಾಯ
ರಾಶಿ ರಾಶಿ ನೋಟಿನ ಕಂತೆಗಳು ಕಂಡುಬಂದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒಡಿಶಾದ ಬಿಜೆಪಿ ನಾಯಕ ಮನೋಜ್ ಮಹಾಪಾತ್ರ ಒತ್ತಾಯಿಸಿದ್ದಾರೆ. ಒಡಿಶಾದಲ್ಲಿ ಬಿಜೆಡಿ ಸರಕಾರದ ಸಚಿವೆಯೊಬ್ಬರು ಸಂಸದ ಧೀರಜ್ ಪ್ರಸಾದ್ ಸಾಹೂಗೆ ಸೇರಿದ ಕಂಪೆನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಅವರು ಪ್ರದರ್ಶಿಸಿದ್ದಾರೆ. ಒಡಿಶಾದ ಅಬಕಾರಿ, ವಿಚಕ್ಷಣಾ ದಳ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಯಾರಿದು ಧೀರಜ್ ಪ್ರಸಾದ್ ಸಾಹೂ?
ಸತತ ಮೂರನೇ ಬಾರಿಗೆ ಕಾಂಗ್ರೆಸ್ನಿಂದ ರಾಜ್ಯಸಭಾ ಸದಸ್ಯರಾಗಿರುವ ಧೀರಜ್ ಪ್ರಸಾದ್ ಸಾಹೂ ಜಾರ್ಖಂಡ್ನವರು. ರಾಜಕೀಯವಾಗಿ ಮತ್ತು ಅಬಕಾರಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಿಂದಲೂ ಅವರ ಕುಟುಂಬ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದೆ. 2009ರ ಜೂನ್ನಿಂದ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರ ಸಹೋದರ ಶಿವಪ್ರಸಾದ್ ಸಾಹೂ ಕೂಡ ಒಂದು ಬಾರಿ ಸಂಸದರಾಗಿದ್ದರು.
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
![rahul-Gandhi-Car](https://www.udayavani.com/wp-content/uploads/2024/07/rahul-Gandhi-Car-150x111.jpg)
Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್: ರಾಹುಲ್ ಆರೋಪ
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.