ಒಂದೇ ದಿನ 46,426 ಕೋವಿಡ್ ಸೋಂಕು ದೃಢ: 32 ಸಾವು
ಕೋವಿಡ್ ಪರೀಕ್ಷೆ 1.40ಲಕ್ಷಕ್ಕೆ ಇಳಿಕೆ: ಪಾಸಿಟಿವಿಟಿ ದರ ಏರಿಕೆ
Team Udayavani, Jan 24, 2022, 9:30 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಸೋಮವಾರ 46,426 ಮಂದಿಗೆ ಸೋಂಕು ದೃಢಗೊಂಡಿದ್ದು, 32ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಸೋಂಕಿನ ದರ ಶೇ.32.95ಕ್ಕೆ ಹಾಗೂ ಮರಣ ಪ್ರಕರಣ ಶೇ.0.6ಕ್ಕೆ ಏರಿಕೆಯಾಗಿದೆ.
ಐಸಿಎಂಆರ್ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಕೇವಲ ಲಕ್ಷಣಗಳಿರುವವರಿಗೆ ಸ್ವಾéಬ್ಗಳ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಮಾದರಿ ಪರೀಕ್ಷೆ 2.50 ಲಕ್ಷದಿಂದ 1.40ಲಕ್ಷಕ್ಕೆ ಇಳಿಕೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಏರಿಳಿತಗಳು ಕಂಡು ಬರುತ್ತಿವೆ. ಜ.23ರಂದು 26,299 ಪ್ರಕರಣ ದಾಖಲಾದರೆ ಜ.24ರಂದು 21,569 ಮಂದಿ ಸೋಂಕಿಗೆ ತುತ್ತಾಗುವ ಮೂಲಕ 24ಗಂಟೆಯಲ್ಲಿ 6,000 ಪ್ರಕರಣಗಳು ಕಡಿಮೆಯಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣ 2,26385 ಇದೆ. ರಾಜ್ಯದಲ್ಲಿ 41,703ಮಂದಿ ಗುಣಮುಖರಾಗಿದ್ದಾರೆ.
ಮೈಸೂರು 4105, ತುಮಕೂರು 2960,ಹಾಸನ 1908, ಮಂಡ್ಯ 1837, ಬೆಂಗಳೂರು ಗ್ರಾಮಾಂತರ 1607,ಧಾರವಾಡ 1407, ಚಿಕ್ಕಬಳ್ಳಾಪುರ 905,ಬಳ್ಳಾರಿ 817, ಉಡುಪಿ 677, ಕೋಲಾರ 661,ಕೊಡಗು 657, ದಕ್ಷಿಣ ಕನ್ನಡ 655,ಚಾಮರಾಜನಗರ 656, ಚಿತ್ರದುರ್ಗ 642, ಉತ್ತರ ಕನ್ನಡ 626, ಬೆಳಗಾವಿ 625, ಕೊಪ್ಪಳ 525, ಶಿವಮೊಗ್ಗ 537, ದಾವಣಗೆರೆ 467,ಕಲಬುರಗಿ 379,ಹಾವೇರಿ 304 , ಬಾಗಲಕೋಟೆ 291,ಬೀದರ್ 284,ರಾಮನಗರ 288,ರಾಯಚೂರು 281, ವಿಜಯಪುರ 270, ಗದಗ 257, ಚಿಕ್ಕಮಗಳೂರು 144, ಯಾದಗಿರಿ ಜಿಲ್ಲೆಯಲ್ಲಿ 85 ಪಾಸಿಟಿವ್ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾದಿಂದ ಬಳಲುತ್ತಿದ್ದ 9, ಮೈಸೂರು, ತುಮಕೂರು ಹಾಗೂ ದ.ಕ. ತಲಾ 3, ಹಾವೇರಿ, ಕಲಬುರಗಿ ಜಿಲ್ಲೆಯಲ್ಲಿ ತಲಾ 2 , ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಗದಗ, ಹಾಸನ, ಮಂಡ್ಯ, ರಾಯಚೂರು, ಉಡುಪಿ ಜಿಲ್ಲೆಯಲ್ಲಿ ತಲಾ 1ರಂತೆ 32 ಮರಣ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ