Stock Market: ಷೇರುಪೇಟೆ ಹೂಡಿಕೆದಾರರಿಗೆ 5.50 ಲಕ್ಷ ಕೋಟಿ ರೂ. ನಷ್ಟ
ಬಿಎಸ್ಇನಲ್ಲಿ ಸೂಚ್ಯಂಕ ಮತ್ತೆ 570 ಪಾಯಿಂಟ್ಸ್ ಇಳಿಕೆ- ಒಟ್ಟು ಸೂಚ್ಯಂಕ 1,608 ಪಾಯಿಂಟ್ಸ್ ಪತನ
Team Udayavani, Sep 21, 2023, 9:35 PM IST
ಮುಂಬೈ: ಬಾಂಬೆ ಷೇರು ಪೇಟೆಯಲ್ಲಿ ಗುರುವಾರ ಕೂಡ ಸಂವೇದಿ ಸೂಚ್ಯಂಕ 570.60 ಪಾಯಿಂಟ್ಸ್ ಕುಸಿದಿದೆ. ಹೀಗಾಗಿ, ದಿನಾಂತ್ಯಕ್ಕೆ 66,230.24ರಲ್ಲಿ ಮುಕ್ತಾಯಗೊಂಡಿತು. ಮಧ್ಯಂತರದಲ್ಲಿ 672.13 ಪಾಯಿಂಟ್ಸ್ ಇಳಿಕೆಯಾಗಿ 66,128.71ರ ವರೆಗೆ ಕುಸಿತ ಕಂಡಿದೆ. ನಿಫ್ಟಿ ಸೂಚ್ಯಂಕ 159.05 ಪಾಯಿಂಟ್ಸ್ ಕುಸಿತವಾಗಿ 19, 742.35 ಪಾಯಿಂಟ್ಸ್ಗೆ ಕೊನೆಗೊಂಡಿದೆ.
ಮೂರು ದಿನಗಳಿಂದ ಸತತವಾಗಿ ಸೂಚ್ಯಂಕ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಮೂರು ದಿನಗಳಲ್ಲಿ 5.50 ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದರ ಜತೆಗೆ ಮೂರು ದಿನಗಳಲ್ಲಿ ಬಿಎಸ್ಇ ಸೂಚ್ಯಂಕ ಒಟ್ಟು 1,608.39 ಪಾಯಿಂಟ್ಸ್ ಕುಸಿತಗೊಂಡಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಲಿದೆ ಎಂಬ ಕಾರಣಕ್ಕಾಗಿ ಬುಧವಾರ ಸೂಚ್ಯಂಕ ಪತನಗೊಂಡಿತ್ತು. ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡರೂ, ಸಿಯೋಲ್, ಟೋಕ್ಯೋ, ಶಾಂಘೈ ಮತ್ತು ಹಾಂಕಾಂಗ್ ಷೇರು ಪೇಟೆಗಳಲ್ಲಿ ವಹಿವಾಣು ತೃಪ್ತಿದಾಯಕವಾಗಿರಲಿಲ್ಲ. ಕಚ್ಚಾ ತೈಲದ ಬೆಲೆಯಲ್ಲಿ ಏರಿಳತವೂ ಈ ಬೆಳವಣಿಗೆಗೆ ಕಾರಣವಾಗಿದೆ.
ಏರಿಕೆ:
ಗಮನಾರ್ಹ ಅಂಶವೆಂದರೆ ಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 83.06 ರೂ.ಗೆ ಮುಕ್ತಾಯಗೊಂಡಿದೆ.
ಮತ್ತೆ ಕುಸಿತ ಕಂಡ ಬಿಎಸ್ಇ ಸೂಚ್ಯಂಕ
ಮುಂಬೈ: ಬಾಂಬೆ ಷೇರು ಪೇಟೆಯಲ್ಲಿ ವಾರಾಂತ್ಯವಾಗಿರುವ ಶುಕ್ರವಾರ ಕೂಡ ಸಂವೇದಿ ಸೂಚ್ಯಂಕ 570.60 ಪಾಯಿಂಟ್ಸ್ ಕುಸಿದಿದೆ. ಹೀಗಾಗಿ, ದಿನಾಂತ್ಯಕ್ಕೆ 66,230.24ರಲ್ಲಿ ಮುಕ್ತಾಯಗೊಂಡಿತು. ಮಧ್ಯಂತರದಲ್ಲಿ 672.13 ಪಾಯಿಂಟ್ಸ್ ಇಳಿಕೆಯಾಗಿ 66,128.71ರ ವರೆಗೆ ಕುಸಿತ ಕಂಡಿದೆ. ನಿಫ್ಟಿ ಸೂಚ್ಯಂಕ 159.05 ಪಾಯಿಂಟ್ಸ್ ಕುಸಿತವಾಗಿ 19, 742.35 ಪಾಯಿಂಟ್ಸ್ಗೆ ಕೊನೆಗೊಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡರೂ ಸೂಚ್ಯಂಕದಲ್ಲಿ ಏರಿಳಿಕೆ ಉಂಟಾಗಿದೆ.
ಬಿಎಸ್ಇನಲ್ಲಿ ಐಸಿಐಸಿಐ ಬ್ಯಾಂಕ್ ಷೇರಗಳು ಹೆಚ್ಚಿನ ನಷ್ಟ ಅನುಭವಿಸಿತು. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 83.06 ರೂ.ಗೆ ಮುಕ್ತಾಯಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
MUST WATCH
ಹೊಸ ಸೇರ್ಪಡೆ
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ