ಸಂಭ್ರಮಾಚರಣೆಯಲ್ಲ: ನ್ಯಾ| ಗೊಗೊಯ್ ಸ್ಪಷ್ಟನೆ
Team Udayavani, Dec 11, 2021, 6:25 AM IST
ಹೊಸದಿಲ್ಲಿ: ಅಯೋಧ್ಯೆ ತೀರ್ಪು ನೀಡಿದ ದಿನ ತಾವು, ಸುಪ್ರೀಂ ನ್ಯಾಯಮೂರ್ತಿಗಳ ಜತೆೆ ಸ್ಟಾರ್ ಹೊಟೇಲೊಂದ ರಲ್ಲಿ ಔತಣಕೂಟದಲ್ಲಿ ಭಾಗಿಯಾಗಿದ್ದರ ಬಗ್ಗೆ ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪಷ್ಟನೆ ನೀಡಿದ್ದಾರೆ.
“ನಾವು ನ್ಯಾಯಮೂರ್ತಿಗಳು ಅಯೋಧ್ಯೆ ತೀರ್ಪಿಗಾಗಿ ಬರೋ ಬ್ಬರಿ 4 ತಿಂಗಳ ಕಾಲ ಕಠಿನ ಪರಿಶ್ರಮದಿಂದ ಕೆಲಸ ಮಾಡಿದ್ದೆವು. ಅಷ್ಟೊಂದು ಕೆಲಸ ಮಾಡಿದ್ದ ನಾವು, ತೀರ್ಪಿನ ಅನಂತರದಲ್ಲಿ ದೊಡ್ಡ ಕೆಲಸ ಮುಗಿಯಿತೆಂಬ ಖುಷಿಯಲ್ಲಿ ಔತಣಕೂಟ ನಡೆಸಿದ್ದೆವು. ನಾನೇ ಅವರೆಲ್ಲರನ್ನೂ ತಾಜ್ ಮಾನ್ಸಿಂಗ್ ಹೊಟೇಲ್ಗೆ ಕರೆದುಕೊಂಡು ಹೋಗಿದ್ದೆ. ಅದೊಂದು ಔಪಚಾರಿಕ ಕೂಟ, ಅಯೋಧ್ಯೆ ತೀರ್ಪಿನ ಬಗ್ಗೆ ಸಂಭ್ರಮಾಚರಣೆಯಾಗಿರಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಮೊಟ್ಟೆ ಬದಲು ತಾಯಿ ಕೈಗೆ ದುಡ್ಡು ಕೊಡಿ: ಶೋಭಾ
ಇತ್ತೀಚೆಗೆ ಮಾಜಿ ಸಿಜೆಐ ನ್ಯಾ| ಗೊಗೊಯ್ ಅವರ ಆತ್ಮಕಥನ ಬಿಡುಗಡೆಯಾಗಿದೆ. ಅದರಲ್ಲಿ ಹೊಟೇಲ್ನಲ್ಲಿ ನ್ಯಾ| ಗೊಗೊಯ್ ಔತಣಕೂಟ ನಡೆಸಿದ್ದ ಫೋಟೋ ಅಚ್ಚಾಗಿದೆ. ಈ ಬಗ್ಗೆ ಅನೇಕ ಚರ್ಚೆಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು