ಹೆಣ್ಣು ಮಕ್ಕಳ ಪಾಲಿನ ಕಳ್ಳ-ಪೊಲೀಸ್‌ ಆಟ


Team Udayavani, May 19, 2020, 5:15 AM IST

aata poli

ಹಳ್ಳಿ ಮತ್ತು ಸಿಟಿ, ಈ ಎರಡೂ ಕಡೆಗಳಲ್ಲಿ ಹೆಣ್ಣು ಮಕ್ಕಳು ಬಹಳ ಸಂಭ್ರಮದಿಂದ ಆಡುತ್ತಿದ್ದ ಆಟವೆಂದರೆ, ಐ ಸ್ಪೈ. ತಮಾಷೆ ಅಂದರೆ, ಅದನ್ನು ಎಲ್ಲರೂ ಐಸ್‌ ಪೈಸ್‌ ಎಂದು ಕರೆಯುತ್ತಿದ್ದುದು. ಈಗಲೂ ಹೆಚ್ಚಿನವರು ಐಸ್‌ ಪೈಸ್‌  ಎಂದೇ ಕರೆಯುವುದುಂಟು. ಐ ಸ್ಪೈ ಅಂದರೆ, ನಾನು ಪತ್ತೆಹಚ್ಚಿದೆ ಎಂದು ಅಥವಾ ನಾನು ಕಂಡುಹಿಡಿದೆ ಎಂದು ಅರ್ಥ. ಹುಡುಗರು, ಹುಡುಗಿಯರು ಒಟ್ಟಿಗೇ ಸೇರಿ, ಅಥವಾ ಪ್ರತ್ಯೇಕವಾಗಿ ಈ ಆಟ ಆಡಬಹುದು.

ಇದನ್ನು ಹೆಚ್ಚಾಗಿ   ಹೆಣ್ಣುಮಕ್ಕಳು ಮಾತ್ರ ಆಡುವುದರಿಂದ, ಹುಡುಗಿಯರ ಆಟವೆಂದೇ ಪ್ರಸಿದ್ಧಿ. ಮನೆಗಳ ಎದುರು ಇರುವ ಗೋಡೆಯೇ ಈ ಆಟದ ಸ್ಟಾರ್ಟಿಂಗ್‌ ಪಾಯಿಂಟ್. ಇನ್ನು ಈ ಆಟದ ವಿಧಾನವೂ ಸೊಗಸಿನದ್ದೇ. ಆಟಕ್ಕೆ 10 ಜನ ಸೇರಿರುತ್ತಾರೆ  ಅಂದುಕೊಳ್ಳೋಣ. ಆ ಹತ್ತು ಜನರೂ ಮೊದಲು ಪ್ಲಸ್‌ ಹಾಕುತ್ತಾರೆ. ಯಾರು ಫೇಲ್‌ ಆಗುತ್ತಾರೋ, ಅವರಿಗೆ ಉಳಿದವರನ್ನು ಹಿಡಿಯಬೇಕಾದ ಕೆಲಸ. ಆಟ ಶುರುವಾಗುವುದು ಹೀಗೆ- ಪ್ಲಸ್‌ ಹಾಕಿದಾಗ ಪಾಸ್‌ ಆಗದೆ ಉಳಿಯುತ್ತಾರಲ್ಲ,

ಅವರು ಗೋಡೆಗೆ ಮುಖ ಮುಚ್ಚಿಕೊಂಡು ನಿಂತು 1 ರಿಂದ 10 ರವರೆಗೆ ಎಣಿಸಬೇಕು. (ಕೆಲವು ಕಡೆ ಯಾವುದಾದರೂ ಹಾಡು ಹೇಳುವ ಪದತಿಯೂ ಇದೆ.) 10 ಎಂದು ಎಣಿಸಿ ಮುಗಿಸುವುದರೊಳಗೆ ಎಲ್ಲರೂ ಗೋಡೆಯ ಆಚೀಚೆ,  ಮನೆಯ ಮೂಲೆ, ಬಾಗಿಲಿನ ಮರೆ…ಹೀಗೆ, ಎಲ್ಲೆಲ್ಲೋ ಅಡಗಿಕೊಳ್ಳಬೇಕು. 10 ಎಣಿಸಿದ್ದು ಮುಗಿದ ತಕ್ಷಣ, ಯಾರ್ಯಾರು ಎಲ್ಲೆಲ್ಲಿ ಅಡಗಿದ್ದಾರೆ ಎಂದು ನೋಡಿ, ಅವರಿಗಿಂತ ಮೊದಲೇ ಗೋಡೆಯ ಬಳಿ ಬಂದು, ಅದನ್ನು ಮುಟ್ಟಿ,  ಕಮಲಾ ಐ ಸ್ಪೈ, ಸೋನು ಐ ಸ್ಪೈ, ಪ್ರಿಯಾ ಐ ಸ್ಪೈ ಎಂದು ಹೇಳಬೇಕು.

ಹೀಗೇ ಆಟಕ್ಕೆ ಸೇರಿರುವ ಎಲ್ಲರನ್ನೂ ಪತ್ತೆ ಹಚ್ಚಬೇಕು. ಮೊದಲು ಸಿಕ್ಕಿಬಿದ್ದರಲ್ಲ: ಅವರು ಆಟ ಮುಂದುವರಿದಾಗ, ಗೋಡೆಗೆ ಮುಖ ಹಚ್ಚಿ, ಒಂದು- ಎರಡು ಹೇಳಿ,  ಉಳಿದವರನ್ನು ಹಿಡಿಯುವ ಕೆಲಸ ಮಾಡಬೇಕು. ಅಕಸ್ಮಾತ್‌, ಅಡಗಿದ್ದವರು ಬೇಗ ಓಡಿ ಬಂದು ತಾವೇ ಮೊದಲು ಗೋಡೆ ಮುಟ್ಟಿ, ಐ ಸ್ಪೈ ಅಂದುಬಿಟ್ಟರೆ, ಮೊದಲು ಹಿಡಿಯಲು ನಿಂತಿದ್ದವರೇ ಮತ್ತೆ ಅದೇ ಕೆಲಸ ಮಾಡಬೇಕು! ಇದು, ಐ  ಸ್ಪೈ ಆಟದ ಗಮ್ಮತ್ತು. ಹೆಣ್ಣುಮಕ್ಕಳು ಮನೆಯ ಮುಂದೆಯೇ ಇದ್ದು ಆಡಬಲ್ಲಂಥ ಆಟ ಇದು. ಹಾಗಾಗಿ, ಈ ಆಟಕ್ಕೆ ಮನೆಯ ಹೆಂಗಸರ/ ಹಿರಿಯರ ಆಕ್ಷೇಪ ಇರಲಿಲ್ಲ. ಇದು ಹೆಣ್ಣು ಮಕ್ಕಳ ಪಾಲಿಗೆ ಕಳ್ಳ- ಪೊಲೀಸ್‌ ಥರದ ಆಟ  ಆಗಿದ್ದರಿಂದ, ಅವರೂ ಆಟವನ್ನು ಎಂಜಾಯ್‌ ಮಾಡುತ್ತಿದ್ದರು.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.