ನೋಂದಣಿ ರಹಿತ ಕ್ರಿಮಿನಾಶಕ ಮಾರಾಟ: ಕೃಷಿ ಜಾಗೃತ ದಳದ ಅಧಿಕಾರಿಗಳಿಂದ 3 ಅಂಗಡಿ ಸೀಝ್
Team Udayavani, Oct 6, 2020, 5:31 PM IST
ವಿಜಯಪುರ : ಜಿ.ಪಂ. ನಲ್ಲಿ ಕಳಪೆ ಕ್ರಿಮಿನಾಶಕ ವ್ಯಾಪಕ ಮಾರಾಟ ಕುರಿತು ಪ್ರತಿಧ್ವನಿಸಿದ 24 ಗಂಟೆ ಕಳೆಯುವ ಮೊದಲೇ ದಾಳಿ ನಡೆಸಿರುವ ಕೃಷಿ ಜಾಗೃತ ದಳದ ಅಧಿಕಾರಿಗಳು, ಪ್ರಕರಣ ದಾಖಲಿಸಿ ಅಂಗಡಿ-ಗೋದಾಮುಗಳನ್ನು ಸೀಝ್ ಮಾಡಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣಗಳಲ್ಲಿ ರಸಗೊಬ್ಬರ-ಕ್ರಿಮಿನಾಶಕ ಮಾರಾಟದ 3 ಅಂಗಡಿಗಳ ಮೇಲೆ ಕೃಷಿ ಇಲಾಖೆಯ ಬೆಳಗಾವಿ ಜಾಗೃತ ದಳ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ 2 ಅಂಗಡಿ 1 ಗೋದಾಮು ಸೀಝ್ ಮಾಡಿದ್ದಾರೆ. ಅಲ್ಲದೇ ನೋಂದಣಿ ಹಾಗೂ ಪರವಾನಿಗೆ ರಹಿತವಾದ ಕ್ರಿಮಿನಾಶಕಗಳನ್ನು ವಶಕ್ಕೆಪಡೆದಿರುವ ಅಧಿಕಾರಿಗಳು, ಅಂಗಡಿ ಮಾಲಿಕರ ವಿರುದ್ಧ ಕೋರ್ಟನಲ್ಲಿ ಮೊಕದ್ದಮೆ ದಾಖಲಿಸುದಾಗಿ ಹೇಳಿದ್ದಾರೆ.
ಇದನ್ನೂ ಓದಿ :ಮಾಸ್ಕ್ ಧರಿಸದ ಮಹಿಳೆಗೆ ದಂಡ! ಆಕ್ಷೇಪಿಸಿದ ಕಾರ್ಪೊರೇಟರ್ ಕಾಲು ಮುರಿದ ಪೊಲೀಸರು
ತಾಳಿಕೋಟೆ ಪಟ್ಟಣದಲ್ಲಿ ಒಂದು ಅಂಗಡಿ ಮಾಲಿಕನಿಗೆ ನೋಟಿಸ್ ನೀಡಿದ್ದು, 40 ಸಾವಿರ ರೂ ಮೌಲ್ಯದ ನೋಂದಣಿ ರಹಿತ ಕೀಟನಾಶಕಗಳ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು