ಅಕ್ಷಯ ತೃತೀಯಾ: 45 ಕೋಟಿ ರೂಪಾಯಿ ವ್ಯವಹಾರ
Team Udayavani, Apr 27, 2020, 6:14 AM IST
ಬೆಂಗಳೂರು: ಅಕ್ಷಯ ತೃತೀಯಾ ದಿನವಾದ ರವಿವಾರ ರಾಜ್ಯಾದ್ಯಂತ ಸುಮಾರು 45 ಕೋ.ರೂ. ವಹಿವಾಟು ನಡೆದಿದೆ. ಪ್ರತಿ ವರ್ಷದ ಅಕ್ಷಯ ತೃತೀಯಾ ದಿನದ ವ್ಯವಹಾರಕ್ಕೆ ಹೋಲಿಸಿದರೆ ಈ ಬಾರಿ ಕೇವಲ ಶೇ.3ರಷ್ಟು ಮಾತ್ರ ವಹಿವಾಟು ನಡೆದಿದೆ ಎಂದು ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.
ಕೋವಿಡ್- 19 ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಆಗಿರುವ ನಷ್ಟವನ್ನು ಭರಿಸಲು ಲಾಕ್ಡೌನ್ ಮುಗಿದ ಅನಂತರ ರಾಜ್ಯಾದ್ಯಂತ “ಆಭರಣ ಜಾತ್ರೆ’ ಮಾಡುವ ಚಿಂತನೆ ಮಾಡಲಾಗಿದೆ. ಹಾಗೆಯೇ ಆಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರಿಗೆ ಸಿಹಿಯೊಂದಿಗೆ ಆಭರಣಗಳನ್ನು ಮನೆಗೆ ತಲುಪಿಸಲಾಯಿತು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ| ಬಿ. ರಾಮಾಚಾರಿ ತಿಳಿಸಿದರು.
ರವಿವಾರ ರಾಜ್ಯಾದ್ಯಂತ ಸುಮಾರು 100 ಕೆ.ಜಿ. ಚಿನ್ನ, 100 ಕೆ.ಜಿ. ಬೆಳ್ಳಿ ಮಾರಾಟವಾಗಿದ್ದು 45 ಕೋ.ರೂ.ಗಳಿಗೂ ಅಧಿಕ ವಹಿವಾಟು ನಡೆಯಿತು ಎಂದರು.