ಫೆ: 11: ಹನುಮಗಿರಿ ಕ್ಷೇತ್ರದಲ್ಲಿ ಹುತಾತ್ಮ ಯೋಧರ ಅಮರಗಿರಿ ಅಮರಜ್ಯೋತಿ ಮಂದಿರ ಲೋಕಾರ್ಪಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಲೋಕಾರ್ಪಣೆ ; ವಿಶಿಷ್ಠ ರಚನೆಯಿಂದ ಕೂಡಿದ ಭಾರತ ಮಾತೆಯ ವಿಗ್ರಹ

Team Udayavani, Feb 9, 2023, 1:22 PM IST

4-amaragairi

ಈಶ್ವರಮಂಗಲ: ಪ್ರಕೃತಿಯ ಮಡಿಲಲ್ಲಿ ತನ್ನದೇ ರೀತಿಯ ವೈಶಿಷ್ಠೆಯನ್ನು ಹೊಂದಿರುವ ಹನುಮಗಿರಿಯ ಪಂಚಮುಖಿ ಆಂಜನೇಯ, ಕೋದಂಡರಾಮ ಕ್ಷೇತ್ರದ ಸನಿಹದಲ್ಲಿ ಇದೀಗ ಭಾರತ ಮಾತೆ, ಯೋಧರನ್ನು ಹಾಗೂ ಅನ್ನದಾತರನ್ನು ನೆನಪಿಸುವ, ಗೌರವಿಸುವ ತಾಣವಾಗಿ ಅಮರಗಿರಿ ರೂಪುಗೊಂಡಿದೆ.

ಆಧ್ಯಾತ್ಮಿಕದ ಜೊತೆ ದೇಶಾಭಿಮಾನವನ್ನು ಗೌರವಿಸಿ, ಪೋತ್ಸಾಹಿಸುವ ನಿಟ್ಟಿನಲ್ಲಿ ಹನುಮಗಿರಿ, ರಾಮಗಿರಿ ಜೊತೆಯಲ್ಲಿ ಅಮರಗಿರಿ ಖ್ಯಾತಿ ಪಡೆದುಕೊಳ್ಳಲಿದೆ.

ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನಿಂದ ಸುಮಾರು 23 ಕಿ.ಮೀ. ದೂರದಲ್ಲಿ ಹನುಮಗಿರಿ ಕ್ಷೇತ್ರದ ಸನಿಹದಲ್ಲಿ ಅಮರಗಿರಿ ಇದೆ. ಮೊದಲಿಗೆ ಶ್ರೀ ಭಾರತೀ ಅಮರಜ್ಯೋತಿ ವೀಕ್ಷಣೆ. ಯೋಧನ ಪ್ರತಿಮೆ, ಇದರ ಹಿಂದೆ ವಂದೇ ಮಾತರಂ ಶಿಲಾ ಫಲಕ ಗಮನ ಸೆಳೆಯುತ್ತದೆ. ನಂತರ ಸಿಗುವುದೇ ಅಮರಗಿರಿ.

ಸುಮಾರು ಎರಡು ಎಕರೆ ವಿಸ್ತಾರದಲ್ಲಿ ವಿಶಿಷ್ಠ ತಂತ್ರಜ್ಷಾನದ ಮೂಲಕ ಅಷ್ಟಭುಜಾಕಾರದ ಆಲಯ ನಿರ್ಮಾಣಗೊಂಡಿದೆ. ವೀಕ್ಷಣೆ ಮಾಡಲು ಬರುವಾಗ ಯೋಧರ ವಿಜಯ ಸಂಕೇತದ ಹಸ್ತ ಆಕಾರದ ಶಿಲ್ಪ, ವೀರಕಂಭ, ಭೂ, ವಾಯು, ನೌಕ ಸೇನೆಗಳ ಲಾಂಛನ ಹೊತ್ತ ಸ್ತಂಭ, ಗಡಿಯಲ್ಲಿ ಕಾವಲು ಕಾಯುತ್ತಿರುವ ವೀರ ಸೈನಿಕರ ಶಿಲಾಕೃತಿಗಳು ದೇಶದ ರಕ್ಷಣಾ ವ್ಯವಸ್ಥೆಯನ್ನು ನೆನಪಿಸುತ್ತದೆ.

ಆಲಯದೊಳಗೆ ಪ್ರವೇಶಿಸಿದರೆ ದಕ್ಷಿಣ ಭಾರತದಲ್ಲಿಯೇ ವಿಶಿಷ್ಠ ರೀತಿಯಲ್ಲಿ ರೂಪುಗೊಂಡಿರುವ ವಿಶಿಷ್ಠ ಹಾಗೂ ಅಪೂರ್ವವಾದ ದೇಶಾಭಿಮಾನ, ಗೌರವದ ಆರಡಿ ಎತ್ತರದ ಏಕೈಕ ಶ್ವೇತಾವರ್ಣದ ಅಮೃತಶಿಲೆಯ ಭಾರತ ಮಾತೆಯ ವಿಗ್ರಹ ಮನಸೆಳೆಯುತ್ತದೆ.

ಇದರ ಎಡ ಮತ್ತು ಬಲಭಾಗದಲ್ಲಿ ರೈತ ಮತ್ತು ಯೋಧರ ಪ್ರತಿಮೆಗಳು ಮನಸೆಳೆಯುತ್ತವೆ. ಭಾರತಾಂಬೆಯ ಎದುರಿಗೆ ಅಮರ ಜವಾನ್ ಸ್ಮಾರಕ ಶಿಲೆ ಇದೆ. ಗೋಡೆಗಳಲ್ಲಿ ದಾರ್ಶನಿಕರ, ವೀರ ಸೇನಾನಿಗಳ ತೈಲ ಶಿಲ್ಪಗಳು ಅವರ ಇತಿಹಾಸವನ್ನು ಕಣ್ಣೆದುರಿಗೆ ನಿಲ್ಲಿಸುತ್ತವೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಯುವಜನರನ್ನು ಆಕರ್ಷಿಸುತ್ತಿವೆ. ಕುಳಿತುಕೊಳ್ಳಲು ವಿಶಾಲವಾದ ಸ್ಥಳ ಇಲ್ಲಿದೆ.

ಅಮರಗಿರಿಯ ಆವರಣದಲ್ಲಿ ಯುದ್ಧಭೂಮಿಯ ವರ್ಲಿ ಚಿತ್ತಾರಗಳು, ಒಂದೊಂದು ಚಿತ್ರಗಳು ದೇಶ, ಸೈನ್ಯದ ಕುರಿತಾದ ಕುರುಹುಗಳು ಮುಂದಿನ ಜನಾಂಗಕ್ಕೆ ಉತ್ತಮ ಸಂದೇಶಗಳನ್ನು ಸಾರುತ್ತಿದೆ. ದೇಶದ ರಕ್ಷಣೆಯಲ್ಲಿ ಅನೇಕ ಸಾಹಸಿಗರ ತ್ಯಾಗ ಬಲಿದಾನಗಳು ಮಹತ್ತರವಾದದು.

ಇವರೆಲ್ಲರ ಜೀವನವನ್ನು ನೆನಪಿಸಿಕೊಳ್ಳುವುದರ ಜೊತೆ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿಯು ಉದ್ದೀಪನಗೊಳಿಸುವುದೇ ಅಮರ ಗಿರಿಯ ಉದ್ದೇಶ ಮತ್ತು ಸಂದೇಶವಾಗಿದೆ. ಒಳಹೊಕ್ಕು ಹೊರ ಬರುವಾಗ ದೇಶ ಪೂಜನದ ಅನುಭಾವ ಮೂಡಿ ಭವ್ಯ ಭಾರತ ಕಟ್ಟುವ ಪ್ರಕ್ರಿಯೆಗೆ ನೂತನ ಅಮರಗಿರಿ ಮುನ್ನುಡಿಯಾಗಲಿದೆ.

3 ಕೋಟಿ ವೆಚ್ಚದಲ್ಲಿ ನಿರ್ಮಾಣ: ದೇಶಾಭಿಮಾನಿಗಳ ಸಹಕಾರದೊಂದಿಗೆ ಸುಮಾರು 3ಕೋಟಿ ವೆಚ್ಚದಲ್ಲಿ ಆಮರಗಿರಿ ರೂಪುಗೊಂಡಿದೆ. ಶಾಸಕ ಸಂಜೀವ ಮಠಂದೂರು ಅವರು ಇಂಟರ್ ಲಾಕ್‌ಗೆ ರೂ.25 ಲಕ್ಷ ಮತ್ತು ತಡೆಗೋಡೆಗೆ ರಚನೆಗೆ 30 ಲಕ್ಷ ಅನುದಾನ ನೀಡಿದ್ದಾರೆ. ಲೋಕಾರ್ಪಣೆ ಬಳಿಕ ಶನಿವಾರ, ಭಾನುವಾರ ಹಾಗೂ ಸರಕಾರಿ ರಜಾದಿನಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಇದ್ದು ಸಂಜೆಯ ಸಮಯದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ.

ಫೆ. 11 ರಂದು ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಶಾ ಅಮರಗಿರಿಯಲ್ಲಿ ಯೋಧನ ಪುತ್ತಳಿಗೆ ರಾಷ್ಟ್ರ ಧ್ವಜ ಇರಿಸಿ, ದೀಪ ಪ್ರಜ್ವಲಿಸಿ ಲೋಕಾರ್ಪಣೆ ಮಾಡಲಿದ್ದಾರೆ.

ಭಾರತಮಾತೆ, ರೈತ, ಯೋಧನ ಪ್ರತಿಮೆಗಳಿಗೆ ಪುಷ್ಪಾರ್ಚನೆಗೈಯಲಿದ್ದಾರೆ. ಸಂದರ್ಶಕ ಪುಸ್ತಕದಲ್ಲಿ ಸಹಿ ಹಾಕಿ ಹೊರಭಾಗದಲ್ಲಿ ಶುಭ ಸಂದೇಶ ನೀಡಲಿದ್ದಾರೆ. ಇವರೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ, ರಾಜ್ಯ ಸರಕಾರಗಳ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ.

ಆಧ್ಯಾತ್ಮಿಕ ಜತೆಗೆ ರಾಷ್ಟಾಭಿಮಾನ ಉದ್ದೀಪನಗೊಳಿಸುವ ಕೇಂದ್ರ: ಹನುಮಗಿರಿ ಕ್ಷೇತ್ರ ಆಧ್ಯಾತ್ಮಿಕ ಕೇಂದ್ರವಾಗಿ ಗಮನಸೆಳೆದಿದೆ. ಇದೀಗ ಹೊಸದಾಗಿ ಅಮರಗಿರಿ ಸೇರ್ಪಡೆಯಾಗುವ ಮೂಲಕ ಆಧ್ಯಾತ್ಮಿಕ ಜತೆಗೆ ರಾಷ್ಟಾಭಿಮಾನ ಉದ್ದೀಪನಗೊಳಿಸುವ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. – ಸಂಜೀವ ಮಠಂದೂರು,ಪುತ್ತೂರು ಶಾಸಕ

ಮಾಧವ ನಾಯಕ್ ಕೆ.

 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.