ಗ್ರಾಮೀಣರ ಹೊರೆ ತಗ್ಗಿಸಲು “ಅಮೃತ ಆರೋಗ್ಯ’: ಶೀಘ್ರ ರಾಜ್ಯದ 3,146 ಗ್ರಾ.ಪಂ.ಗಳಲ್ಲಿ ಜಾರಿ
Team Udayavani, Jun 2, 2022, 7:30 AM IST
ಬೆಂಗಳೂರು: ಗ್ರಾಮೀಣ ಜನತೆಯ ಆರೋಗ್ಯವಂತ ಜೀವನ ಶೈಲಿಗೆ ಒತ್ತು ನೀಡುವ ಮತ್ತು ಗ್ರಾಮೀಣ ಜನರ ರೋಗದ ಹೊರೆ ತಗ್ಗಿಸುವ ಉದ್ದೇಶ ಹೊಂದಿರುವ “ಪಂಚಾಯತ್ ಅಮೃತ ಆರೋಗ್ಯ ಯೋಜನೆ’ಯ ಭಾಗ್ಯ ಶೀಘ್ರದಲ್ಲೇ ರಾಜ್ಯದ ಎಲ್ಲ ಗ್ರಾಮ ಪಂಚಾಯತ್ಗಳಿಗೂ ಸಿಗಲಿದೆ.
ಈಗಾಗಲೇ ರಾಜ್ಯದ 14 ಜಿಲ್ಲೆಗಳ 114 ತಾಲೂಕುಗಳ 2,816 ಗ್ರಾ.ಪಂ.ಗಳಲ್ಲಿ ಪಂಚಾ ಯತ್ ಆರೋಗ್ಯ ಅಮೃತ ಅಭಿಯಾನ ಜಾರಿಯಲ್ಲಿದ್ದು, ಈಗ 2022-23ನೇ ಸಾಲಿನ ಬಜೆಟ್ ಘೋಷಣೆಯನ್ನು ಜಾರಿಗೆ ತರಲು ಮುಂದಾಗಿರುವ ಸರಕಾರ ಉಳಿದ 3,146 ಗ್ರಾ.ಪಂ.ಗಳಿಗೂ ಅಮೃತ ಆರೋಗ್ಯ ಯೋಜನೆ ವಿಸ್ತರಿಸಲು ನಿರ್ಣಯಿಸಿದೆ.
ಗ್ರಾ.ಪಂ. ಅಮೃತ ಆರೋಗ್ಯ ಯೋಜನೆ ಯನ್ನು ರಾಜ್ಯದ 3,146 ಗ್ರಾ.ಪಂ.ಗಳಿಗೆ ವಿಸ್ತರಿಸಿ ಆರೋಗ್ಯ ಕಿಟ್ಗಳನ್ನು ವಿತರಿಸಲು ಸರಕಾರ ಆದೇಶಿಸಿದ್ದು, ಅದರಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸುತ್ತೋಲೆ
ಹೊರಡಿಸಿದೆ. ಸದ್ಯ ಕೆಲವು ಗ್ರಾ.ಪಂ.ಗಳಲ್ಲಿ ಅಮೃತ ಆರೋಗ್ಯ ಅಭಿಯಾನ ಅನುಷ್ಠಾನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಗ್ರಾ.ಪಂ.ಗಳಿಗೆ ವಿಸ್ತರಿಸಲಾಗುವುದು. ಈ ಬಗ್ಗೆ ಶೀಘ್ರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
25 ಸಾವಿರ ರೂ.ಗಳ ಕಿಟ್
ಪಂ. ಅಮೃತ ಆರೋಗ್ಯ ಯೋಜನೆ ಯಡಿ ಪ್ರತೀ ಗ್ರಾ.ಪಂ.ಗೆ ತಲಾ 25 ಸಾವಿರ ರೂ. ಮೊತ್ತದ ಆರೋಗ್ಯ ಕಿಟ್ ವಿತರಿಸ ಲಾಗುವುದು. ಅದರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಪರೀಕ್ಷೆ ಉಪಕರಣ ಗಳು, ಜ್ವರ, ರಕ್ತ ಪರೀಕ್ಷೆ ಉಪಕರಣಗಳು ಇರುತ್ತವೆ. ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ತಪಾಸಣೆ ಮತ್ತು ಪರೀಕ್ಷೆ ನಡೆಸಿ, ಜನರಿಗೆ ವೈದ್ಯಕೀಯ ಸಲಹೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ