ನಿರಾಶ್ರಿತ ಕುಟುಂಬಗಳಿಗೆ ಬೆಳಕು ಕಲ್ಪಿಸಿದ ಎಎಸ್ಐ ದೊರೆಸ್ವಾಮಿ
Team Udayavani, Jan 7, 2021, 2:39 PM IST
ಎಚ್.ಡಿ.ಕೋಟೆ: ಜೀವನೋ ಪಾಯಕ್ಕಾಗಿ ನೆರೆಯ ಆಂಧ್ರಪ್ರದೇಶದಿಂದ ಆಗಮಿಸಿ ಬಯಲಿನಲ್ಲಿ ಟೆಂಟ್ ಹಾಕಿಕೊಂಡು
ಕಗ್ಗತ್ತಲಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತ ಕುಟುಂಬಗಳಿಗೆ ಸೋಲಾರ್ ಲೈಟ್ ಕಲ್ಪಿಸುವ ಮೂಲಕ ಎಎಸ್ಐ ದೊರೆಸ್ವಾಮಿ
ಮಾನವೀಯತೆ ಮೆರೆದಿದ್ದಾರೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆ ಎಎಸ್ಐ ದೊರೆಸ್ವಾಮಿ, 10 ಸಾವಿರ ರೂ. ಮೌಲ್ಯದ 3 ಸೋಲಾರ್ ದೀಪಗಳನ್ನು ಕೊಡುಗೆಯಾಗಿ ನೀಡಿ, ನಿರಾಶ್ರಿತರ ಕುಟುಂಬಗಳಿಗೆ ಬೆಳಕು ಮೂಡಿಸಿದ್ದಾರೆ. ಪಟ್ಟಣದಲ್ಲಿ ಒಂದು ವರ್ಷದ ಹಿಂದೆ
ಆಂಧ್ರಪ್ರದೇಶದಿಂದ ಸುಮಾರು 6-7 ಬಡ ಕುಟುಂಬಗಳು 25ಕ್ಕೂ ಅಧಿಕ ಮಂದಿ ಪುಟಾಣಿಗಳೊಟ್ಟಿಗೆ ಟೆಂಟ್ ನಿರ್ಮಿಸಿಕೊಂಡು ನೆಲೆಯೂರಿದ್ದಾರೆ. ತಲೆ ಕೂದಲು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಈ ಟೆಂಟ್ ಸಮೀಪ ಭಾರೀ ಗಾತ್ರದ ವಿಷ ಪೂರಿತ ಹಾವು ಕಾಣಿಸಿಕೊಂಡಿತ್ತು. ಅಲ್ಲದೇ ಈ ಟೆಂಟ್ಗಳು ಬಟಬಯಲಿನಲ್ಲಿ ಹಾಕಿ ರುವುದರಿಂದ ಹುಳಗಳು, ಹಾವು, ಚೇಳುಗಳು ಬರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ:ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದ ಸಾರಿಗೆ ಸಂಸ್ಥೆ ಚಾಲಕ ಅತ್ಮಹತ್ಯೆ ಯತ್ನ
ಈ ವಿಷಯ ತಿಳಿಯುತ್ತಿದ್ದಂತೆ ಎಎಸ್ಐ ದೊರೆ ಸ್ವಾಮಿ ಅವರು ಸ್ಥಳಕ್ಕೆ ಆಗಮಿಸಿ, ನಿರಾಶ್ರಿತ ಕುಟುಂಬಗಳ ದುಸ್ಥಿತಿಯನ್ನು
ಕಂಡು, ತಮ್ಮ ಸ್ವಂತ ಹಣದಿಂದ ಸೋಲಾರ್ ದೀಪ ಹಾಕಿಸಿಕೊಟ್ಟಿದ್ದಾರೆ. ಸಮಾಜಮುಖೀ ಕೆಲಸಗಳ ಮೂಲಕ ಜನ ಮನ್ನಣೆ ಪಡೆದಿರುವ ಎಎಸ್ಐ ದೊರೆಸ್ವಾಮಿ ಅವರು ಈ ಹಿಂದೆ ನಾಲ್ಕೈದು ಕಿ.ಮೀ. ಹದಗೆಟ್ಟಿದ್ದ ರಸ್ತೆಯನ್ನು ಸ್ವಂತ ಹಣ ವ್ಯಯಿಸಿ ದುರಸ್ತಿಪಡಿಸಿದ್ದರು.
ಜೊತೆಗೆ ಇಬ್ಬರು ಅನಾಥ ಬಾಲಕಿಯರನ್ನು ದತ್ತು ಪಡೆದು ಅವರ ಶಿಕ್ಷಣವನ್ನು ಸಂಪೂರ್ಣ ಹೊಣೆಯನ್ನು ಹೊತ್ತಿದ್ದಾರೆ.
ಅಲ್ಲದೇ ಈ ಅವರಿಗೆ ಮನೆಯನ್ನು ನವೀಕರಣಗೊಳಿಸಿ, ಆಸರೆಯಾಗಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಕಿಟ್, ಮಾಸ್ಕ್ಗಳನ್ನು ದೊರೆಸ್ವಾಮಿ ಉಚಿತವಾಗಿ ವಿತರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ