ತಹಶೀಲ್ದಾರ್ ರಿಂದಲೇ ಖುದ್ದು ಕೆರೆ ಏರಿಯ ಗುಂಡಿ ಮುಚ್ಚಲು ಪ್ರಯತ್ನ
ಕಾಣೆಯಾದ ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು
Team Udayavani, Oct 15, 2022, 8:58 PM IST
ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಏರಿಯ ಮೇಲೆ ಬಿದ್ದಿರುವ ಭಾರಿ ಗುಂಡಿಗಳನ್ನು ತಹಶೀಲ್ದಾರ್ ಸಿಗ್ಬತುಲ್ಲಾ ಮತ್ತು ರಾಜಸ್ವ ನಿರೀಕ್ಷಕ ಲಕ್ಷ್ಮೀನಾರಾಯಣ ಹಾಗೂ ಪತ್ರಕರ್ತರರು ಸೇರಿ ದೂಳು ಮಿಶ್ರಿತ ಜೆಲ್ಲಿ ಮೂಟೆಯಿಂದ ಮುಚ್ಚಿದರು.
ಅಮಾನಿಬೈರಸಾಗರ ಏರಿಯ ಮೇಲೆ ಗುಂಡಿಗಳು ಬಿದ್ದು, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗಿದ್ದು, ಅಲ್ಲದೆ ಹರಿಯುತ್ತಿರುವ ನೀರಿನಲ್ಲಿ ಗುಂಡಿಗಳು ಕಾಣಿಸದೇ ಅನೇಕ ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ಬಿದ್ದು, ಗಾಯಗಳನ್ನು ಮಾಡಿಕೊಳ್ಳುತ್ತಿದ್ದು, ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಿಗೆ ತಹಶೀಲ್ದಾರ್, ಸಾರ್ವಜನಿಕರು ಹೇಳುತ್ತಿದ್ದರು, ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಖುದ್ದಾಗಿ ಹೇಳಿದರು, ಇಲಾಖಾ ಅಧಿಕಾರಿಗಳು ಮಾತ್ರ ಏನೂ ನಡೆದೇ ಇಲ್ಲವೆಂಬಂತೆ ಕಣ್ಣು ಮುಚ್ಚಿರುವುದನ್ನು ಗಮನಿಸಿದ, ತಹಶೀಲ್ದಾರ್ ಹಾಗೂ ಸಿಬ್ಬಂದಿ ಮತ್ತು ಪತ್ರಕರ್ತರೇ ಒಂದು ಟಿಪ್ಪರ್ ಲೋಡ್ ದೂಳು ಮಿಶ್ರಿತ ಜೆಲ್ಲಿಯನ್ನು ತರಿಸಿ, ಅವರುಗಳೇ ಖುದ್ದು ನೀರಿನಲ್ಲಿ ಇಳಿದು, ಮೂಟೆಗಳಲ್ಲಿ ಜೆಲ್ಲಿ ಯನ್ನು ತುಂಬಿಕೊಂಡು ಗುಂಡಿಯಲ್ಲಿ ತಾತ್ಕಾಲಿಕವಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡಲು ತೊಂದರೆಯಾಗದೆ ಮಾಡಿದ್ದಾರೆ.
ಇದ್ದನ್ನು ನೋಡಿದ ಸಾರ್ವಜನಿಕರು ತಹಶೀಲ್ದಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಿಗೆ ಚೀಮಾರಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಚನ್ನಕೃಷ್ಣ, ಪತ್ರಕರ್ತರಾದ ಬಾಲಾಜಿ, ಸತೀಶ್ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!