ಬಣ್ಣದ ವೈಭವ-2; ವಿದೇಶಿಗರಿಗೂ ಮೆಚ್ಚಿನದ್ದಾಗಿದ್ದವು ಬಡಗು ತಿಟ್ಟಿನ ರಾಕ್ಷಸ ವೇಷಗಳು!

ಬಣ್ಣ ಕಳೆದುಕೊಂಡ ವೇಷಗಳಿಗೆ ಮತ್ತೆ ಹೊಳಪು ಬರಬಹುದೇ?

Team Udayavani, Sep 14, 2022, 6:15 PM IST

WEB EXCLUSIVE BOOK DD vishnu yaksha gana

ಶ್ರೀಮಂತವಾಗಿರುವ ಬಡಗು ತಿಟ್ಟು ಯಕ್ಷಗಾನ ರಂಗದಲ್ಲಿ “ಬಣ್ಣದ ವೇಷ” ವೈಭವ ಕಳೆದುಕೊಳ್ಳುತ್ತಿರುವುದೇಕೆ?ಮೂಲ ಸ್ವರೂಪ ಕಳೆದುಕೊಂಡಿದ್ದೇಕೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಗತ ವೈಭವ ಮತ್ತೆ ಮರುಕಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ವಿಮರ್ಶಕರು, ಹಿರಿಯ ಪ್ರೇಕ್ಷಕರು ಮತ್ತು ವಿಧ್ವಾಂಸರ ಪ್ರಕಾರ ಬಡಗು ತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೈಭವ ವಿಜೃಂಭಿಸಿದ ಕಾಲವೊಂದಿತ್ತು. ಮೇಳದಲ್ಲಿ ಬಣ್ಣದ ವೇಷಧಾರಿಗೆ ಚೌಕಿಯಲ್ಲಿ(ಮೇಕಪ್ ರೂಮ್) 2ನೇ ವೇಷಧಾರಿ (ಪ್ರಧಾನ ವೇಷಧಾರಿ) ಎದುರಿಗೆ ಪೆಟ್ಟಿಗೆ ಇಟ್ಟು ಕುಳಿತು ಕೊಳ್ಳುವ ಅವಕಾಶ ಇತ್ತು. ಅಷ್ಟೊಂದು ಮಹತ್ವ ಮತ್ತು ಗೌರವ ರಾಕ್ಷಸ ಪಾತ್ರಗಳನ್ನು ಮಾಡುವ ವೇಷಧಾರಿಗೆ ನೀಡಲಾಗಿತ್ತು. ಈಗಲೂ ಕೆಲ ಮೇಳಗಳಲ್ಲಿ ಆ ಜಾಗ ರಾಕ್ಷಸ ಪಾತ್ರಗಳನ್ನು ಮಾಡುವ ಕಲಾವಿದರಿಗೆ ಮೀಸಲಿಡಲಾಗಿದೆ.

ಪೌರಾಣಿಕ ಕಥಾನಕಗಳೇ ಯಕ್ಷಗಾನದಲ್ಲಿ ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದುದರಿಂದ ರಾಕ್ಷಸ ಪಾತ್ರಗಳು ರಂಗದಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಯಕ್ಷಗಾನೀಯ ಪರಂಪರೆಯ ಎಲ್ಲರ ಗಮನ ಸೆಳೆಯುವ, ಬೆರಗು ಮೂಡಿಸುವ ವೇಷಗಳಿಗೆ ವಿಶೇಷ ಪ್ರಾಧಾನ್ಯತೆ ಇತ್ತು.

ಕೇವಲ ಕರಾವಳಿಯ ಯಕ್ಷಗಾನಾಭಿಮಾನಿಗಳು ಮಾತ್ರವಲ್ಲದೆ ವಿದೇಶಿಗರೂ ಬಣ್ಣದ ವೇಷಗಳಿಗೆ ಮಾರು ಹೋಗಿದ್ದರು. ಯಕ್ಷಗಾನಕ್ಕೆ ಹೊಸ ಮೆರುಗು ನೀಡಿದ ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತ ಅವರ ನಿರ್ದೇಶನದಲ್ಲಿ ಉಡುಪಿ ಯಕ್ಷಗಾನ ಕೇಂದ್ರದವರು ವಿದೇಶದಲ್ಲಿ ಪ್ರದರ್ಶನ ನೀಡಿದ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನಗಳಲ್ಲಿ ಬಣ್ಣದ ವೇಷಗಳಿಗೂ ಪ್ರಾಮುಖ್ಯತೆ ನೀಡಲಾಗಿತ್ತು. ಆ ವೇಷಗಳು ವಿಶೇಷವಾಗಿ ವಿದೇಶಿಗರಿಗೆ ಇತರೆಲ್ಲಾ ವೇಷಗಳಿಂದ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಬಣ್ಣದ ವೇಷದ ಹೆಚ್ಚುಗಾರಿಕೆ ಎನ್ನಬಹುದಲ್ಲವೇ. ಡಾ. ಕಾರಂತರ ತಂಡದಲ್ಲಿ ವಿದೇಶಗಳಲ್ಲಿ ಬಣ್ಣದ ವೇಷಗಳ ಪ್ರದರ್ಶನ ನೀಡಿದ ಹಿರಿಯ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೇತ್ರಿ ಮಾಧವ ನಾಯ್ಕರು ಈ ಅನುಭವ ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ರಾಮಾಯಣದ ಪ್ರಸಂಗಗಳಲ್ಲಿ ಬರುವ ರಾವಣನ ಪಾತ್ರ ಬಡಗುತಿಟ್ಟು ಯಕ್ಷಗಾನದಲ್ಲಿ ಘೋರ ರೂಪವಾದ ರಾಜ ಬಣ್ಣವಾಗಿತ್ತು. ಇಂದಿಗೂ ತೆಂಕು ತಿಟ್ಟಿನಲ್ಲಿ ರಾವಣನ ಪಾತ್ರವನ್ನು ಪ್ರಮುಖ ಬಣ್ಣದ ವೇಷಧಾರಿ ಮಾಡುವ ಕ್ರಮ ಉಳಿದುಕೊಂಡಿದೆ. ಬಡಗಿನಲ್ಲಿ ಸಂಘ ಸಂಸ್ಥೆಗಳು ಮಾಡುವ ಪ್ರಯೋಗಗಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬಣ್ಣದ ವೇಷಗಳ ಛಾಯೆಯನ್ನು ಕಾಣಬಹುದಾಗಿದೆ.ತಿರುಗಾಟದ ಮೇಳಗಳಲ್ಲಿ ಬಣ್ಣದ ರಾವಣ ವೇಷ ಮರೆಯಾಗಿದೆ ಮಾತ್ರವಲ್ಲದೆ ಪಾರಂಪರಿಕ ಬಣ್ಣದ ವೇಷಗಳು ಮರೆಯಾಗಿವೆ ಎನ್ನುವುದು ವಿಪರ್ಯಾಸ.

ಬಡಗುತಿಟ್ಟಿನಲ್ಲಿ ಪ್ರಸಿದ್ಧ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರು ಬಣ್ಣದ ವೇಷಗಳ ದೈತ್ಯರಾಗಿದ್ದ ಸಕ್ಕಟ್ಟು ಲಕ್ಷ್ಮೀ ನಾರಾಯಣ ಅವರ ಒಡನಾಡಿಯಾಗಿ ಹಲವು ಪಾರಂಪರಿಕ ಅಂಶಗಳನ್ನು, ಬಣ್ಣಗಾರಿಕೆ ಅಂಶಗಳನ್ನು, ಬಣ್ಣದ ವೇಷಗಳ ಸೂಕ್ಷ್ಮತೆಯನ್ನು ತಿಳಿದುಕೊಂಡಿದ್ದರು. ಹಲವು ರಾಜ ಬಣ್ಣ, ಹೆಣ್ಣು ಬಣ್ಣದ ವೇಷಗಳಿಗೆ ಜೀವ ತುಂಬಿದ್ದರು.

ಬಣ್ಣದ ವೈಭವ ಮುಂದುವರಿಯುವುದು….

*ವಿಷ್ಣುದಾಸ್ ಪಾಟೀಲ್

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.