ಬ್ಯಾಡ್ಜ್ ಕಡ್ಡಾಯ ಮಾನದಂಡ: ಸಹಸ್ರಾರು ಆಟೋ ಚಾಲಕರು ಸಹಾಯಧನ ವಂಚಿತರು!


Team Udayavani, May 11, 2020, 11:18 AM IST

ಬ್ಯಾಡ್ಜ್ ಕಡ್ಡಾಯ ಮಾನದಂಡ: ಸಹಸ್ರಾರು ಆಟೋ ಚಾಲಕರು ಸಹಾಯಧನ ವಂಚಿತರು!

ಉಡುಪಿ: ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ಆಟೋ ರಿಕ್ಷಾ ಚಾಲಕರಿಗೆ ಸಹಾಯಧನ ಪಡೆಯಲು ಬ್ಯಾಡ್ಜ್ ಕಡ್ಡಾಯ ಎಂಬ ನಿಯಮದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಸ್ರಾರು ಆಟೋ ಚಾಲಕರು ಸೌಲಭ್ಯ ವಂಚಿತರಾಗುವ ಸಾಧ್ಯತೆಗಳಿವೆ.

ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 13 ಸಾವಿರ ಆಟೋ ರಿಕ್ಷಾ ಚಾಲಕರಿದ್ದಾರೆ. ಅವರ ಪೈಕಿ 6 ಸಾವಿರದಷ್ಟು ಮಂದಿ ಮಾತ್ರ ಬ್ಯಾಡ್ಜ್ ಹೊಂದಿದ್ದು, ಉಳಿದ 7 ಸಾವಿರ ಮಂದಿಯಲ್ಲಿ ಇಲ್ಲ. ದ.ಕ. ಜಿಲ್ಲೆಯಲ್ಲಿ 26 ಸಾವಿರಕ್ಕೂ ಅಧಿಕ ಅಟೋ ರಿಕ್ಷಾ ಚಾಲಕರಿದ್ದು 12,500ದಷ್ಟು ಮಂದಿ ಬ್ಯಾಡ್ಜ್ ಹೊಂದಿಲ್ಲ ಎನ್ನಲಾಗುತ್ತಿದೆ. ನಾನಾ ಕಾರಣಗಳಿಂದ ಅವರೆಲ್ಲ ಬ್ಯಾಡ್ಜ್ ಪಡೆದುಕೊಂಡಿಲ್ಲ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರಿಕ್ಷಾ ಚಾಲಕರಿಗೆ ಸರಕಾರವು ತಲಾ 5,000 ರೂ. ಸಹಾಯಧನ ನೀಡುತ್ತಿದೆ. ಆದರೆ ಅವರು ಚಾಲನಾ ಪರವಾನಿಗೆ ಮತ್ತು ಬ್ಯಾಡ್ಜ್ ಹೊಂದಿರಬೇಕು ಎಂಬ ನಿಯಮದಿಂದಾಗ ಅರ್ಧದಷ್ಟು ಮಂದಿ ಸೌಲಭ್ಯ ವಂಚಿತರಾಗುತ್ತಿದ್ದಾರೆ.

2020ರ ಮಾ. 1ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಪರವಾನಿಗೆಯನ್ನು ಸೇವಾ ಸಿಂಧು ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಜತೆಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ, ಬ್ಯಾಂಕ್‌ನ ಐಎಫ್ಎಸ್‌ಸಿ, ಎಂಐಸಿಆರ್‌ ಕೋಡ್‌ಗಳು, ವಾಹನದ ನೋಂದಣಿ ಸಂಖ್ಯೆ ನಮೂದಿಸಬೇಕು. ಅರ್ಜಿ ಸಲ್ಲಿಸುವ ವೇಳೆ ಚಾಲಕರು ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಪತ್ರವನ್ನೂ ನೀಡಬೇಕು.

ಸಚಿವರಿಂದ ಭರವಸೆ
ಸುಪ್ರೀಂ ಕೋರ್ಟ್‌ ಸಾರಿಗೆ ಇಲಾಖೆಗೆ 2017ರ ಜು. 3ರಂದು ಆದೇಶ ಸಂಖ್ಯೆ 5826ರ ಆದೇಶದಲ್ಲಿ ಬ್ಯಾಡ್ಜ್ ಕಡ್ಡಾಯವಲ್ಲ ಎಂದು ಉಲ್ಲೇಖಿಸಿದೆ. ಹೀಗಾಗಿ ಬ್ಯಾಡ್ಜ್ ರಹಿತರು ಕೂಡ ಸರಕಾರದ ಸಹಾಯಧನ ಪಡೆಯಲು ಅರ್ಹರು. ರಿಕ್ಷಾ ಪರವಾನಿಗೆ ಕೂಡ ತಾಲೂಕು ವ್ಯಾಪ್ತಿಯದ್ದಾಗಿರುತ್ತದೆ. ಆದ್ದರಿಂದ ಬ್ಯಾಡ್ಜ್ ರಹಿತರಿಗೂ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಗಳಿವೆ. ಬ್ಯಾಡ್ಜ್ ರಹಿತರರಿಗೆ ಸೌಲಭ್ಯ ನೀಡು ವುದು, ನಿಯಮಾವಳಿ ಸಡಿಲಿಸಬೇಕು ಇತ್ಯಾದಿ ಬೇಡಿಕೆಗಳ ಮನವಿಯನ್ನು ದ.ಕ. ಜಿಲ್ಲೆಯ ಗುತ್ತಿಗಾರು ಬಿಎಂಎಸ್‌ ಸಂಘಟನೆಯ ಚಂದ್ರಶೇಖರ್‌ ಕಡೋಡಿ ಅವರು ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದು, ಸರಕಾರದ ಮಟ್ಟದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಮಧ್ಯವರ್ತಿಗಳ ಹಾವಳಿ ತಡೆಯಿರಿ
ರಿಕ್ಷಾ ಚಾಲಕರು ದಾಖಲೆ ಇತ್ಯಾದಿ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಸಹಾಯಧನ ವಿಚಾರದಲ್ಲೂ ಮಧ್ಯವರ್ತಿಗಳು ಕೈಯಾಡಿಸುವ ಸಾಧ್ಯತೆ ಇದೆ. ಅವರು ಬಡ ಚಾಲಕರ ದಾರಿ ತಪ್ಪಿಸದಂತೆ ಮತ್ತು ಯೋಜನೆಯ ಹಣ ಪೂರ್ತಿಯಾಗಿ ಚಾಲಕರಿಗೇ ತಲುಪುವಂತೆ ಆಗಬೇಕೆಂದು ರಿಕ್ಷಾ ಚಾಲಕ ಯೂನಿಯನ್‌ಗಳು ಆಗ್ರಹಿಸಿವೆ.

ಅರ್ಜಿ ಸಲ್ಲಿಕೆಗೆ ಸೂಚಿಸಲಾಗಿದ್ದರೂ ಉಡುಪಿ ಜಿಲ್ಲೆಯಲ್ಲಿ ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ಪ್ರಕಟನೆ ಹೊರಡಿಸಿಲ್ಲ. ಬಹುತೇಕ ಚಾಲಕರು ಬಡವರು. ಬ್ಯಾಡ್ಜ್ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬ್ಯಾಡ್ಜ್ ರಹಿತರಿಗೂ ಸೌಲಭ್ಯ ವಿಸ್ತರಿಸಬೇಕು.
– ಸುರೇಶ್‌ ಅಮೀನ್‌,
ಕಾರ್ಯಾಧ್ಯಕ್ಷ , ಆಟೋ ಚಾಲಕರ ಸಂಘದ ಜಿಲ್ಲಾ ಒಕ್ಕೂಟ, ಉಡುಪಿ

ಆಟೋ ರಿಕ್ಷಾ ಚಾಲಕರ ಪೈಕಿ ಶೇ. 40ರಷ್ಟು ಮಂದಿ ಬ್ಯಾಡ್ಜ್ ಹೊಂದಿಲ್ಲ. ಹೀಗಾಗಿ ಅವರು ಸೌಲಭ್ಯದಿಂದ ವಂಚಿತರಾಗುತ್ತಾರೆ. ಬ್ಯಾಡ್ಜ್ ರಹಿತರಿಗೂ ಸಿಗುವಂತೆ ಒತ್ತಡ ತರಲಾಗುವುದು.
-ಭಾಸ್ಕರ ರಾವ್‌, ಜಿಲ್ಲಾಧ್ಯಕ್ಷರು, ಬಿಎಂಎಸ್‌ ಅಟೋ ಚಾಲಕರ ಸಂಘ ದ.ಕ. ಜಿಲ್ಲೆ

ಟಾಪ್ ನ್ಯೂಸ್

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

shirwa

ಕುರ್ಕಾಲು:ಯುವತಿ ನಾಪತ್ತೆ

ಮೂಳೂರು : ಪೆಟ್ರೋಲ್‌ ಪಂಪ್‌ನಲ್ಲಿ ಕಾರು ಚಾಲಕನಿಂದ ಧಾಂದಲೆ ; ಸಿಬಂದಿಗೆ ಹಲ್ಲೆ

ಮೂಳೂರು : ಪೆಟ್ರೋಲ್‌ ಪಂಪ್‌ನಲ್ಲಿ ಕಾರು ಚಾಲಕನಿಂದ ಧಾಂದಲೆ ; ಸಿಬಂದಿಗೆ ಹಲ್ಲೆ

ಉದ್ಯಾವರ: ಅಕ್ರಮ ಮರಳುಗಾರಿಕೆ ಬಗ್ಗೆ ಧ್ವನಿಯೆತ್ತಿದ ವ್ಯಕ್ತಿಗೆ ಬೆದರಿಕೆ, ಸ್ಕೂಟರ್‌ ಧ್ವಂಸ

ಉದ್ಯಾವರ: ಅಕ್ರಮ ಮರಳುಗಾರಿಕೆ ಬಗ್ಗೆ ಧ್ವನಿಯೆತ್ತಿದ ವ್ಯಕ್ತಿಗೆ ಬೆದರಿಕೆ, ಸ್ಕೂಟರ್‌ ಧ್ವಂಸ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.