ಗಂಗಾವತಿ: ಶೋಷಿತರಿಗೆ ನ್ಯಾಯದ ವೇದಿಕೆ ಒದಗಿಸಿದವರು ವಿಶ್ವಗುರು ಬಸವಣ್ಣ
ಬಸವಣ್ಣನ ಸಿದ್ದಾಂತ ವಿಶ್ವವ್ಯಾಪಿಯಾಗದಿರುವುದು ವಿಷಾದನೀಯ
Team Udayavani, Apr 23, 2023, 1:24 PM IST
ಗಂಗಾವತಿ: ಶೋಷಿತರಿಗೆ ನ್ಯಾಯ ಒದಗಿಸುವ ಮೂಲಕ ನ್ಯಾಯದ ವೇದಿಕೆಯಾಗಿ ಅನುಭವ ಮಂಟಪವನ್ನು ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದರು. ಬಸವಣ್ಣನವರ ಅನುಯಾಯಿಗಳು ಬಸವಣ್ಣನವರ ಸಿದ್ಧಾಂತ ಮತ್ತು ತತ್ವಗಳನ್ನು ವಿಶ್ವ ವ್ಯಾಪಿಯಾಗಿ ಪ್ರಚಾರ ಮಾಡಿದರುವುದು ವಿಷಾದಕರ ಸಂಗತಿಯಾಗಿದೆ ಎಂದು ಹಿರಿಯ ಕಾರ್ಮಿಕ ಹೋರಾಟಗಾರ ಜೆ.ಭಾರದ್ವಾಜ್ ಹೇಳಿದರು.
ಅವರು ಬಸವ ಜಯಂತಿ ಅಂಗವಾಗಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವಧ್ವಜಾರೋಹಣ ಮಾಡಿ ಬಸವ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಲ್ ಮಾರ್ಕ್ಸ್ ನಂತೆ ಬಸವೇಶ್ವರರು ಕಾರ್ಮಿಕರು ಮತ್ತು ಶೋಷಿತ ಪರವಾಗಿ ಹೋರಾಡಿದ ವಿಶ್ವದ ಬಹುದೊಡ್ಡ ಕಾಮ್ರೇಡ್ ಆಗಿದ್ದರು. ಸನಾತನಗಳ ವಿರುದ್ಧ ಶೋಷಣೆ ಮತ್ತು ವರ್ಗರಹಿತ ಸಮಾಜ ನಿರ್ಮಿಸುವ ಬಸವಣ್ಣನವರ ಕನಸು ಅನುಭವ ಮಂಟಪದ ಮೂಲಕ ಈಡೇರಿದೆ ಎಂದರು.
ಬಸವೇಶ್ವರರ ತತ್ವದಶಗಳನ್ನು ಅವರ ಅನ್ಯಾಯಗಳು ಪಾಲನೆ ಮಾಡುತ್ತಿಲ್ಲ. ಸರಿಯಾಗಿ ಪಾಲನೆ ಮಾಡುವ ಮೂಲಕ ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡಬೇಕು. ಶೋಷಣೆ ರಹಿತ, ಜಾತಿ ರಹಿತ ವರ್ಗದಹಿತ ಸಮಾಜದಿಂದ ಮಾತ್ರ ವಿಶ್ವಕ್ಕೆ ಶಾಂತಿ ಎನ್ನುವ ಆದರ್ಶವನ್ನು ಬಸವಣ್ಣನ ನಮ್ಮೆಲ್ಲರಿಗೂ ಬಿಟ್ಟು ಹೋಗಿದ್ದಾರೆ. ಪ್ರತಿಯೊಬ್ಬರೂ ಬಸವಣ್ಣನ ಆದರ್ಶದಂತೆ ಜೀವನ ನಡೆಸಿದರೆ ಉತ್ತಮ ಸಮಾಜ ಹಿಂಸೆರಹಿತ ಸಮಾಜ ಶೋಷಣೆ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಹೊಸ್ಕೇರಿ ಮಲ್ಲಿಕಾರ್ಜುನ, ಡಾ. ಶಿವಕುಮಾರ್ ಮಾಲಿಪಾಟೀಲ್, ಕೆ. ಬಸವರಾಜ್, ಎ.ಕೆ.ಮಹೇಶ್ ಕುಮಾರ್, ಶ್ರೀಶೈಲ ಪಟ್ಟಣ ಶೆಟ್ಟಿ , ವೀರೇಶ್ ರೆಡ್ಡಿ, ಸರಿಗಮ ಹನುಮಂತಪ್ಪ, ಬಸವರಾಜ, ಶಿವಪ್ಪ, ಗವಿಸಿದ್ದಪ್ಪ, ದಿಲೀಪ, ಕೆ.ಚೆನ್ನಬಸಯ್ಯಸ್ವಾಮಿ ಸೇರಿದಂತೆ ಬಸವ ದಳ, ಬಸವ ಕೇಂದ್ರ ಮತ್ತು ಬಸವ ಅಭಿಮಾನಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು