ನಾನು ನಗಲು ಚಿರು ಕಾರಣ
ಮೇಘನರಾಜ್ ಬರೆದ ಭಾವುಕ ಬರಹ
Team Udayavani, Jul 10, 2020, 9:46 AM IST
ನಟ ಚಿರಂಜೀವಿ ಸರ್ಜಾ ದೂರವಾಗಿ ಒಂದು ತಿಂಗಳು ಕಳೆದಿದೆ. ಅವರ ಕುಟುಂಬ ವರ್ಗ ಪ್ರತಿ ನಿತ್ಯವೂ ಚಿರು ನೆನಪಿಸಿಕೊಳ್ಳುತ್ತಲೇ ಇದೆ. ಅತ್ತ ಮೇಘನಾರಾಜ್ ಅವರು ಕೂಡ ಪ್ರೀತಿಯ ಪತಿ ದೂರವಾಗಿದ್ದರೂ, ಭಾವುಕತೆ ತುಂಬಿದ್ದರೂ, ಅವರು ಮಾತ್ರ, ನಗು ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಕಾರಣ, ಚಿರಂಜೀವಿ ಸರ್ಜಾ. ಹೌದು, ಸದಾ ನಗುತ್ತಿರಬೇಕು ಎನ್ನುತ್ತಲೇ ಇದ್ದ ಚಿರು ಅವರಿಗೆ ನಾವು ನಗುವಿನಿಂದ ಇದ್ದರೆ ಮಾತ್ರ ನಾವೆಲ್ಲರೂ ಅವರಿಗೆ ಕೊಡುವ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮೇಘನಾ ನೋವಿನಲ್ಲೂ ನಗು ಹೊರ ಹಾಕಿದ್ದಾರೆ. ಭಾವುಕತೆಯಲ್ಲೂ ಅವರು ಒಂದು ಮನಮುಟ್ಟುವಂತಹ ಬರಹ ಹಂಚಿಕೊಂಡಿದ್ದಾರೆ. ಅವರು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಾಲುಗಳಿವು. ನಾನು ನಗಲು ಚಿರು ಕಾರಣ: ನನ್ನ ಪ್ರೀತಿಯ ಚಿರು.. ಚಿರು ಒಂದು ಸಂಭ್ರಮ. ಯಾವಾಗಲೂ.. ಈಗಲೂ ಮತ್ತು ಮುಂದೆಯೂ.. ಬೇರೆ ಯಾವ ರೀತಿಯನ್ನೂ ನೀನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ನಗಲು ಕಾರಣ ಚಿರು.. ಆತ ನನಗೆ ನೀಡಿರುವುದು ಅತಿ ಅಮೂಲ್ಯ. ನನ್ನ ಕುಟುಂಬ ನಾವು ಮಾತ್ರವೇ.. ನಮ್ಮ ಶಾಶ್ವತ ಪ್ರೀತಿಗಾಗಿ ಎಲ್ಲರೂ ಎಂದಿಗೂ ಜತೆಯಾಗಿರುತ್ತೇವೆ.
ನೀನು ಇಷ್ಟಪಟ್ಟಂತೆಯೇ ಪ್ರತಿದಿನವೂ ಇರಲಿದೆ. ಪ್ರೀತಿ, ನಗು, ತಮಾಷೆ, ಪ್ರಾಮಾಣಿಕತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜತೆಯಾಗಿರುವಿಕೆಯಿಂದ ಕೂಡಿರುತ್ತದೆ. ಲವ್ ಯೂ ಬೇಬಿ ಮಾ… ಹೀಗೆ ಭಾವನಾತ್ಮಕ ಸಂಗತಿಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ ಮೇಘನರಾಜ್. ಇವೆಲ್ಲದರ ಜೊತೆಯಲ್ಲಿ ಮೈ ಮಿಸ್ಟರ್ ಹಸ್ಬೆಂಡ್ ಎಂದು ಹೂವಿನ ಅಲಂಕಾರ ನಡುವೆ ಚಿರಿ ನಗುತ್ತಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?