

Team Udayavani, Feb 2, 2024, 1:22 AM IST
ಮಂಗಳೂರು: ಬೆಂಗ ಳೂರು-ಮಂಗಳೂರು-ಕಣ್ಣೂರು ಎಕ್ಸ್ಪ್ರೆಸ್ (16511/12) ರೈಲು ಕೋಯಿಕ್ಕೋಡ್ಗೆ ವಿಸ್ತರಿಸಿರುವುದು ಸರಿಯಲ್ಲ, ಇದರಿಂದ ಮಂಗಳೂರು ಪ್ರದೇಶದ ರೈಲ್ವೇ ಪ್ರಯಾಣಿಕರಿಗೆ ಅನ್ಯಾಯ ಆಗಲಿದೆ. ಹಾಗಾಗಿ ಮಧ್ಯ ಪ್ರವೇಶಿಸಿ, ಯಥಾ ಸ್ಥಿತಿ ಮುಂದುವರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಮೂಲಕ ಆಗ್ರಹಿಸಿದ್ದಾರೆ.
ಈ ರೈಲು ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಆರಂಭವಾಗಿತ್ತು. ಬಳಿಕ ಈ ಭಾಗದ ಜನರ ವಿರೋಧದ ನಡುವೆಯೇ ರೈಲನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ರೈಲು ಮಂಗಳೂರು- ಬೆಂಗಳೂರನ್ನು ಸಂಪರ್ಕಿಸುತ್ತಿದ್ದು, ಬಹುಬೇಡಿಕೆಯ ರೈಲಾಗಿದೆ. ಬಹುತೇಕ ದಿನಗಳಲ್ಲೂ ವೈಟಿಂಗ್ ಲಿಸ್ಟ್ನಲ್ಲೇ ಇರುತ್ತದೆ. ಹಾಗಾಗಿ ಕಣ್ಣೂರಿನಿಂದಲೂ ದಕ್ಷಿಣಕ್ಕೆ ಕೋಯಿಕ್ಕೋಡ್ಗೆ ಈ ರೈಲು ವಿಸ್ತರಣೆ ಮಾಡಿರುವುದಕ್ಕೆ ಜನರಿಂದ ತೀವ್ರ ಪ್ರತಿರೋಧ ಬಂದಿದೆ. ಜನರ ದೂರು ಸಹಜವಾಗಿದ್ದು, ಪರಿಗಣಿಸಲೇಬೇಕು, ಈ ವಿಸ್ತರಣೆಯಿಂದಾಗಿ ಮಂಗಳೂರು ಭಾಗದ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವ ಪ್ರಮಾಣ ಕಡಿಮೆಯಾಗಲಿದೆ. ಅಲ್ಲದೆ ಪ್ರಸ್ತುತ 16527/28 ರೈಲು ಕಣ್ಣೂರು-ಬೆಂಗಳೂರು ಮಧ್ಯೆ ಕೋಯಿಕ್ಕೋಡ್ ಮೂಲಕವಾಗಿ ಸಂಚರಿಸುತ್ತಿದ್ದು ಕೋಯಿಕ್ಕೋಡ್ ಭಾಗದವರಿಗೆ ಸೇವೆಯಲ್ಲಿದೆ. ಹಾಗಾಗಿ ಈ ಹೊಸ ವಿಸ್ತರಣೆ ಅಗತ್ಯವಿರುವುದಿಲ್ಲ ಎಂದು ಪತ್ರದಲ್ಲಿ ನಳಿನ್ ತಿಳಿಸಿದ್ದಾರೆ.
Ad
RCB: ಸಿಎಸ್ಕೆಯನ್ನು ಹಿಂದಿಕ್ಕಿ ಐಪಿಎಲ್ನ ಅತ್ಯಂತ ಮೌಲ್ಯಯುತ ತಂಡವಾದ ಆರ್ ಸಿಬಿ
ರಸ್ತೆಯಲ್ಲಿ ವ್ಹೀಲಿಂಗ್, ಲಾಂಗ್ ಹಿಡಿದು ರೀಲ್ಸ್: ಯುವಕ ಬಂಧನ
BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ
Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್ ಸಿಂಹ
Mangaluru: ಕೆಲಸಕ್ಕೆ ಹೋದವರು ನಾಪತ್ತೆ
You seem to have an Ad Blocker on.
To continue reading, please turn it off or whitelist Udayavani.