Bihar: ಸಿಎಂ ನಿತೀಶ್ ಊಟದಲ್ಲಿ ವಿಷ ಬೆರೆತಿದೆ!- ಜಿತನ್ ರಾಮ್ ಮಾಂಜಿ ವ್ಯಂಗ್ಯ
Team Udayavani, Nov 10, 2023, 8:55 PM IST
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಊಟದಲ್ಲಿ ಯಾರೋ ರಾಜಕೀಯ ವೈಷಮ್ಯಕ್ಕೆ ವಿಷ ಬೆರೆಸಿರಬೇಕು! ಹಾಗಾಗಿಯೇ ಇತ್ತೀಚೆಗೆ ನಿತೀಶ್ ಬರೀ ವಿಷಕಾರಿ ಮಾತುಗಳನ್ನೇ ಆಡುತ್ತಿದ್ದಾರೆ. ಹೀಗೆಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ವ್ಯಂಗ್ಯವಾಡಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಮಾತಿಗೆ ಮಾತು ಬೆಳೆದು ತಮ್ಮ ಬುದ್ಧಿಗೇಡಿತನದಿಂದಾಗಿ ತಾನೇ ಮಾಂಜಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿದ್ದೆ ಎಂದು ನಿತೀಶ್ ಹೇಳಿದ್ದರು. ಈ ಬೆನ್ನಲ್ಲೇ ಮಾಂಜಿ ಅವರು ನಿತೀಶ್ ಅವರನ್ನು ವ್ಯಂಗ್ಯಮಾಡಿ ಇತ್ತೀಚೆಗೆ ಅವರ ವಿಷಕಾರಿ ಮಾತುಗಳು ಅವರ ಊಟದಲ್ಲಿ ವಿಷ ಬೆರೆತಿರುವುದನ್ನು ನಿರೂಪಿಸುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಸಚಿವ ಅಶೋಕ್ ಚೌಧರಿ ಅವರ ತಂದೆ ಮೃತಪಟ್ಟಿದ್ದಾಗ ಅವರ ಮನೆಗೆ ನಿತೀಶ್ ತೆರಳಿದ್ದರು ಈ ವೇಳೆ ಮೃತರ ಫೋಟೋಗೆ ಹೂವು ಸಮರ್ಪಣೆ ಮಾಡುವ ಬದಲು ಅಶೋಕ್ ಅವರ ತಲೆಯ ಮೇಲೆ ಹೂವುಗಳನ್ನು ಹಾಕಿದ್ದರು. ಈ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತಲ್ಲದೇ ನಿತೀಶ್ ಆರೋಗ್ಯ ಸರಿಯಾಗಿದೆಯೇ ಎಂದೆಲ್ಲಾ ನೆಟ್ಟಿಗರು ಪ್ರಶ್ನಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ